ಕಣದಲ್ಲಿದ್ದಾರೆ ಮಾಜಿ ಮುಖ್ಯ ಸರ್ಕಾರಿ ಅಧಿಕಾರಿಗಳು..! ಅಣ್ಣಾಮಲೈಗೆ ಮುನ್ನಡೆ

Published : May 02, 2021, 09:54 AM ISTUpdated : May 02, 2021, 01:41 PM IST
ಕಣದಲ್ಲಿದ್ದಾರೆ ಮಾಜಿ ಮುಖ್ಯ ಸರ್ಕಾರಿ ಅಧಿಕಾರಿಗಳು..! ಅಣ್ಣಾಮಲೈಗೆ ಮುನ್ನಡೆ

ಸಾರಾಂಶ

ಕಣದಲ್ಲಿದ್ದಾರೆ ಮಾಜಿ ಸರ್ಕಾರಿ ಮುಖ್ಯ ಅಧಿಕಾರಿಗಳು | ಇ. ಶ್ರೀಧರನ್, ಅಣ್ಣಾಮಲೈ, ರತ್ನಪ್ರಭಾ ಸ್ಪರ್ಧೆ | ಅಣ್ಣಾಮಲೈ, ಮೆಟ್ರೋ ಶ್ರೀಧರನ್‌ಗೆ ಮುನ್ನಡೆ

ದೆಹಲಿ(ಮೇ.02): ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ಬಾರಿ ಮುಖ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರೋ ಮಾಜಿ IPS ಅಧಿಕಾರಿ ಸಿಂಗಂ ಅಣ್ಣಾಮಲೈ, ಮೆಟ್ರೋ ಮ್ಯಾನ್ ಇ. ಶ್ರೀಧರನ್, ನಿವೃತ್ತ IAS ಅಧಿಕಾರಿ ರತ್ನಪ್ರಭಾ ಅವರ ಕಡೆ ಮತದಾರರ ಒಲವು ಹೇಗಿದೆ ನೋಡೋಣ

ಕೆ. ಅಣ್ಣಾಮಲೈ ಅವರು ಅರವಿಕುರಿಚಿಯಿಂದ ಸ್ಪರ್ಧಿಸುತ್ತಿದ್ದರೆ, ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‌ನಿಂದ ಸ್ಪರ್ಧಿಸಿದ್ದು, ರತ್ನಪ್ರಭಾ ಅವರು ತಿರುಪತಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 

ಪಂಚರಾಜ್ಯ ಚುನಾವಣಾ ಫಲಿತಾಂಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್.ಇಲಾಂಗೊ (ಡಿಎಂಕೆ), ಅಣ್ಣಾಮಲೈ (ಬಿಜೆಪಿ), ಮೊಹದ್ ಹನೀಫ್ ಸಹೀಲ್ (ಎಂಎನ್‌ಎಂ), ಅನಿಷಾ ಪರ್ವೀನ್ (ಎನ್‌ಟಿಕೆ), ಪಿಎಸ್‌ಎನ್‌ತಂಗವೇಲ್ (ಎಎಂಎಂಕೆ) 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅರಾವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳು. ಅಣ್ಣಾಮಲೈ ಅವರು ಅರವಿಕುರಿಚಿಯಲ್ಲಿ ಮುನ್ನಡೆಯಲ್ಲಿದ್ದರೆ, ಮೆಟ್ರೋ ಶ್ರೀಧರನ್ ಅವರು ಪಾಲಕ್ಕಾಡ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

"

ಕೇರಳದಲ್ಲಿ ಬಿಜೆಪಿ ಟ್ರಿಕ್ ವರ್ಕೌಟ್ ಆಗಿದ್ದು ಫೇಮಸ್ ಮೆಟ್ರೋ ಮ್ಯಾನ್‌ಗೆ ಟಿಕೆಟ್ ಕೊಟ್ಟ ಬಿಜೆಪಿ ನಿರೀಕ್ಷೆ ಹುಸಿಯಾಗಿಲ್ಲ. ಸಿಪಿಐ (ಎಂ) ನ ಸಿ.ಪಿ.ಪ್ರಮೋದ್, ಕಾಂಗ್ರೆಸ್‌ನಿಂದ ಶಫಿ ಪರಂಬಿಲ್, ಬಿಜೆಪಿಯ ಇ.ಶ್ರೀಧರನ್ ಸ್ಪರ್ಧಿಸಿದ್ದಾರೆ. 

2016 ರ ಚುನಾವಣೆಯಲ್ಲಿ ಈಗಿನ ಶಾಸಕ ಶಫಿ ಪರಂಬಿಲ್ (ಕಾಂಗ್ರೆಸ್) ಸುಮಾರು 17,000 ಬಹುಮತವನ್ನು ಗಳಿಸಿದ್ದರೂ, ಬಿಜೆಪಿಗೆ ವಿಧಾನಸಭಾ ಸ್ಥಾನದಲ್ಲಿ ಈ ಬಾರಿ ಹೆಚ್ಚಿನ ಭರವಸೆ ಇದೆ. ಪಾಲಕ್ಕಾಡ್ ಪುರಸಭೆಯನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತಗಳನ್ನು ಹೆಚ್ಚಿಸಿ ಭರವಸೆಮೂಡಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?