NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಳ್ಳಿಯಲ್ಲಿ ವಿದ್ಯುತ್ ಇಲ್ಲ, ಈಗ ಎಚ್ಚೆತ್ತ ಒಡಿಶಾ ಸರ್ಕಾರ!

Published : Jun 26, 2022, 03:40 PM IST
NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಳ್ಳಿಯಲ್ಲಿ ವಿದ್ಯುತ್ ಇಲ್ಲ, ಈಗ ಎಚ್ಚೆತ್ತ ಒಡಿಶಾ ಸರ್ಕಾರ!

ಸಾರಾಂಶ

* ಜಾರ್ಖಂಡ್‌ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆ * ಸಂತಾಲ್‌ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ * ದ್ರೌಪದಿ ಮುರ್ಮು ಹಳ್ಳಿಯಲ್ಲಿ ವಿದ್ಯುತ್ ಇಲ್ಲ

ನವದೆಹಲಿ(ಜೂ.26): ಇಂದು ಇಡೀ ದೇಶಕ್ಕೆ ಎನ್‌ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಆದಿಇವಾಸಿ ಮಹಿಳೆ ದ್ರೌಪದಿ ಮುರ್ಮು ಬಗ್ಗೆ ತಿಳಿದಿದೆ. ಆದರೆ ದುರದೃಷ್ಟವಶಾತ್ ದೇಶಾದ್ಯಂತ ಸದ್ದು ಮಾಡುತ್ತಿರುವ ದ್ರೌಪದಿ ಮುರ್ಮು ಅವರ ಪೂರ್ವಿಕರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಮರೀಚಿಕೆಯಾಗಿದೆ. ಮಯೂರ್‌ಭಂಜ್ ಜಿಲ್ಲೆಯ ಕುಸುಮ್ ಬ್ಲಾಕ್‌ನ ಡುಂಗುರಿಶಾಹಿ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ವಿದ್ಯುತ್ ಸಂಪರ್ಕ ಮಾತ್ರ ಸಿಕ್ಕಿಲ್ಲ.

ದ್ರೌಪದಿ ಮುರ್ಮು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದಲ್ಲಿ ಜನಿಸಿದರು. 3500 ಜನಸಂಖ್ಯೆ ಹೊಂದಿರುವ ಈ ಹಳ್ಳಿಯಲ್ಲಿ ಎರಡು ಕುಗ್ರಾಮಗಳಿವೆ. ಬಡಾ ಶಾಹಿ ಮತ್ತು ಡುಂಗ್ರಿ ಶಾಹಿ. ಬಡಾ ಶಾಹಿಯಲ್ಲಿ ವಿದ್ಯುತ್ ಇದೆ ಆದರೆ ಡುಂಗ್ರಿ ಶಾಹಿ ಇನ್ನೂ ಕತ್ತಲೆಯಲ್ಲಿ ಮುಳುಗಿದೆ. ಇಲ್ಲಿನ ಜನರು ರಾತ್ರಿಯ ಕತ್ತಲೆಯನ್ನು ಸೀಮೆ ಎಣ್ಣೆಯ ದೀಪದಿಂದ ಓಡಿಸಿದರೆ, 1 ಕಿಲೋಮೀಟರ್ ದೂರ ಹೋಗಿ ಮೊಬೈಲ್ ಚಾರ್ಜ್ ಮಾಡುತ್ತಾರೆ.

ದ್ರೌಪದಿ ಮುರ್ಮು ಅಧ್ಯಕ್ಷೀಯ ಅಭ್ಯರ್ಥಿಯಾದಾಗ, ಡುಂಗ್ರಿ ಶಾಹಿ ಎಂಬ ಕುಗ್ರಾಮವೂ ಬೆಳಕಿಗೆ ಬಂತು. ಪತ್ರಕರ್ತರು ಈ ಗ್ರಾಮಕ್ಕೆ ಆಗಮಿಸಿದಾಗ ಇಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇದಾದ ನಂತರ ಈ ಗ್ರಾಮ ಮುನ್ನೆಲೆಗೆ ಬಂದಿತು. ಇದರ ನಂತರ ಒಡಿಶಾ ಸರ್ಕಾರವು ಈ ಗ್ರಾಮಕ್ಕೆ ವಿದ್ಯುತ್ ಒದಗಿಸಲು ಕ್ರಮವನ್ನು ಪ್ರಾರಂಭಿಸಿತು. ಬುಡಕಟ್ಟು ಜನಾಂಗದವರ ಪ್ರಾಬಲ್ಯವಿರುವ ಮುರ್ಮು ಗ್ರಾಮದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವ ಕಾರ್ಯವನ್ನು ಯುದ್ಧಕ್ಕೆ ಸಜ್ಜಾಘುವಷ್ಟು ವೇಗವಾಗಿ ನಡೆಸುತ್ತಿದ್ದಾರೆ.

ಸೀಮೆಎಣ್ಣೆ ದೀಪ, ಮೊಬೈಲ್ ಚಾರ್ಜ್ ಮಾಡಲು 1 ಕಿ.ಮೀ ದೂರ ಹೋಗಬೇಕು

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ದಿವಂಗತ ಸಹೋದರ ಭಗತ್ ಚರಣ್ ಅವರ ಪುತ್ರ ಬಿರಂಚಿ ನಾರಾಯಣ ತುಡು ಮತ್ತು ಗ್ರಾಮದ ಇತರ 20 ಕುಟುಂಬಗಳು ಸೀಮೆಎಣ್ಣೆ ದೀಪಗಳೊಂದಿಗೆ ರಾತ್ರಿಯ ಕತ್ತಲೆಯನ್ನು ಕಳೆಯುತ್ತಿದ್ದಾರೆ. ಅದೇ ಸಮಯದಲ್ಲಿ, ಸ್ಥಳೀಯ ಜನರು ಮೊಬೈಲ್ ಚಾರ್ಜ್ ಮಾಡಲು 1 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗೆ ಹೋಗಬೇಕು. ಬಿರಂಚಿ ನಾರಾಯಣ ತುಡು ಒಬ್ಬ ರೈತನಾಗಿದ್ದು, ತನ್ನ ಇಬ್ಬರು ಮಕ್ಕಳು ಮತ್ತು ಹೆಂಡತಿಯೊಂದಿಗೆ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ದ್ರೌಪದಿ ಮುರ್ಮು ಅವರ ಯಶಸ್ಸಿನ ಬಗ್ಗೆ ಹೆಮ್ಮೆಯಿದೆ, ಆದರೆ ನಿರ್ಲಕ್ಷ್ಯದ ಬಗ್ಗೆ ಕೋಪ

ದ್ರೌಪದಿ ಮುರ್ಮು ಅವರ ಪೂರ್ವಜರ ಗ್ರಾಮ ಡುಂಗುರಿಶಾಹಿ ಮಯೂರ್‌ಭಂಜ್ ಜಿಲ್ಲೆಯ ರೈರಂಗಪುರದಿಂದ 20 ಕಿ.ಮೀ ದೂರದಲ್ಲಿದೆ. ತಮ್ಮ ಹಳ್ಳಿಯ ಮಗಳು ದೇಶದ ಪ್ರತಿಷ್ಠಿತ ಹುದ್ದೆಯ ಅಭ್ಯರ್ಥಿಯನ್ನಾಗಿ ಮಾಡಿದ್ದರಿಂದ ಹಳ್ಳಿಯ ಜನರು ತುಂಬಾ ಹೆಮ್ಮೆಪಡುತ್ತಾರೆ. ಆದರೆ, ಹೆಮ್ಮೆ ಎನಿಸಿದರೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಗ್ರಾಮಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ಇದರ ಹಿಂದಿನ ಕಾರಣ. ಆದರೆ, ಇದೀಗ ಇತರೆ ಬಡಾವಣೆಗಳಂತೆ ಶೀಘ್ರವೇ ತಮ್ಮ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿ ಬೀದಿ ಬೀದಿಗಳು ದೀಪಾಲಂಕಾರಗೊಳ್ಳಲಿವೆ ಎಂಬ ಆಶಾಭಾವನೆ ಗ್ರಾಮಸ್ಥರದ್ದಾಗಿದೆ.

ಜಿಲ್ಲೆಯ ದುಂಗುರಿಶಾಹಿ ಪಂಚಾಯಿತಿ ಸಮಿತಿ ಸದಸ್ಯೆ ಧನಮಣಿ ಬಸ್ಕಿ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ಇಲ್ಲ. ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗುವ ಮುನ್ನವೇ ಗ್ರಾಮದ ಸ್ಥಳೀಯ ಜನರು ವಿದ್ಯುತ್ ಸಂಪರ್ಕಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ರಾತ್ರಿ ಕತ್ತಲೆ ಕಳೆಯಲು ಸೀಮೆಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತದೆ ಎಂದು ಧನ್ಮಣಿ ಹೇಳಿದರು. ಅಲ್ಲದೇ ಮೊಬೈಲ್ ಚಾರ್ಜ್ ಮಾಡಲು ಸಮೀಪದ ಬಾದಶಾಹಿ ಗ್ರಾಮಕ್ಕೆ ಹೋಗಬೇಕು. ಆದರೆ, ರಾಜ್ಯ ಸರಕಾರದ ಆದೇಶದ ಮೇರೆಗೆ ದುಂಗುರೀಶದಲ್ಲಿ ವಿದ್ಯುತ್‌ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಆಡಳಿತ ಮಂಡಳಿಯು ಯುದ್ಧೋಪಾದಿಯಲ್ಲಿ ಚಾಲನೆ ನೀಡಿದೆ. ಶೀಘ್ರದಲ್ಲೇ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ದೊರೆಯುವ ನಿರೀಕ್ಷೆ ಇದೆ ಎಂದಿದ್ದಾರೆ.

ದ್ರೌಪದಿ ಮುರ್ಮು ಅವರ ಕುಟುಂಬವು ದುಂಗ್ರಿಶಾಹಿಯಲ್ಲಿ ವಾಸಿಸುತ್ತಿದೆ

ದ್ರೌಪದಿ ಮುರ್ಮು ಅವರ ಕಿರಿಯ ಸಹೋದರ ತರ್ನಿಸೇನ್ ತುಡು ಮಾತನಾಡಿ, ಜಿಲ್ಲೆಯ ಕುಸುಮ್ ಬ್ಲಾಕ್‌ನಲ್ಲಿ ಬರಾಶಾಹಿ ಮತ್ತು ಡುಂಗುರಿಶಾಹಿ ಎಂಬ ಎರಡು ಗ್ರಾಮಗಳಿವೆ. ಬಾರಾಶಾಹಿಯು ಡುಂಗುರಿಶಾಹಿಯಿಂದ 1 ಕಿಲೋಮೀಟರ್ ದೂರದಲ್ಲಿದೆ. ಬಾಲ್ಯದಲ್ಲಿ, ಡುಂಗುರಿಶಾ ಕೇವಲ 5 ಕುಟುಂಬಗಳ ಸಣ್ಣ ವಸಾಹತು ಎಂದು ಅವರು ಹೇಳಿದರು. ಆದರೆ ವರ್ಷಗಳು ಕಳೆದಂತೆ ಈ ಬಡಾವಣೆಯಲ್ಲಿ ಮನೆಗಳ ಸಂಖ್ಯೆ ಹೆಚ್ಚಿದೆ. ನಾವೆಲ್ಲರೂ ಬಾದಶಾಹಿಯಲ್ಲಿ ಬೆಳೆದಿದ್ದೇವೆ, ಆದರೆ ನಮ್ಮ ಅಣ್ಣ ಭಗತ್ ಚರಣ್ ಅವರ ಮಗ ಬಿರಂಚಿ ನಾರಾಯಣ ತುಡು ಅವರು ತಮ್ಮ ಕುಟುಂಬದೊಂದಿಗೆ ದುಂಗುರ್ಶಾಹಿಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಕರೆಂಟ್ ಇಲ್ಲ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಯೂರ್‌ಭಂಜ್ ಜಿಲ್ಲೆಯ ಪಾಲ್ ವಿನೀತ್ ಭಾರದ್ವಾಜ್, ಕುಸುಮ್ ಬ್ಲಾಕ್ ಪಂಚಾಯಿತಿಯ ದುಂಗುರಿಶಾಹಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಈ ವಿಷಯವನ್ನು ಆಡಳಿತಾತ್ಮಕವಾಗಿ ನಿಭಾಯಿಸಲಾಗುತ್ತಿದೆ. ಶೀಘ್ರದಲ್ಲಿ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ದೊರೆಯುವ ನಿರೀಕ್ಷೆ ಇದೆ ಎಂದಿದ್ದಾರೆ.

ಸರ್ಕಾರದ ಮೂಲಗಳ ಪ್ರಕಾರ, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ, ಜಿಲ್ಲೆಯ ಕುಸುಮ್ ಬ್ಲಾಕ್ ಪ್ರದೇಶದ ಬುಡಕಟ್ಟು ಪ್ರಾಬಲ್ಯದ ಪ್ರದೇಶದ ಬಾರಾಶಾಹಿಗೆ ವಿದ್ಯುತ್ ತಲುಪಿದೆ. 20 ಮನೆಗಳನ್ನು ಹೊಂದಿರುವ ಬಾರಾಶಾಹಿಯಿಂದ 1 ಕಿಲೋಮೀಟರ್ ದೂರದಲ್ಲಿರುವ ದುಂಗುರಿಶಾಹಿ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದೆ.

ಯಾರು ದ್ರೌಪದಿ ಮುರ್ಮು?

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಹೊರಹೊಮ್ಮಿರುವ ದ್ರೌಪದಿ ಮುರ್ಮು ಹುಟ್ಟೂರು ಒಡಿಶಾದ ಮಜೂರ್‌ಭಂಜ್‌ ಜಿಲ್ಲೆಯ ಬೈಡಾಪೋಸಿ ಗ್ರಾಮ. ಸಂತಾಲ್‌ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಬಡಕುಟುಂಬದಲ್ಲಿ ಹುಟ್ಟಿ, ಅತ್ಯಂತ ಕಷ್ಟದಲ್ಲೇ ಶಿಕ್ಷಣ ಪೂರೈಸಿದ್ದರು.

ರಾಜ್ಯ ನೀರಾವರಿ ಮತ್ತು ಇಂಧನ ಇಲಾಖೆಯಲ್ಲಿ ಜ್ಯೂ. ಅಸಿಸ್ಟೆಂಟ್‌, ಗೌರವ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ರೈರಂಗ್‌ಪುರ ಪಂಚಾಯತ್‌ ಕೌನ್ಸಿಲರ್‌ ಆಗಿ 1997ರಲ್ಲಿ ರಾಜಕೀಯ ಜೀವನ ಆರಂಭಿಸಿದ ದ್ರೌಪದಿ, 2000ನೇ ಇಸವಿಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿ-ಬಿಜೆಡಿ ಸರ್ಕಾರದಲ್ಲಿ ವಾಣಿಜ್ಯ, ಸಾರಿಗೆ, ಮೀನುಗಾರಿಕೆ, ಪ್ರಾಣಿ ಸಂಪನ್ಮೂಲದ ಸಚಿವರಾಗಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ, 2015ರಲ್ಲಿ ಜಾರ್ಖಂಡ್‌ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲೆ ಎಂಬ ಹಿರಿಮೆಯೂ ಇವರಿಗಿದೆ.

ಶ್ಯಾಮ್‌ಚರಣ್‌ ಮುರ್ಮು ಅವರನ್ನು ವಿವಾಹವಾಗಿದ್ದ ದ್ರೌಪದಿ ಅವರಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಕ್ಕಳು. ದುರದೃಷ್ಟವಶಾತ್‌ ಅವರು ತಮ್ಮ ಪತಿ ಮತ್ತು ಇಬ್ಬರು ಗಂಡುಮಕ್ಕಳನ್ನು ಕಳೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!