ರಾಷ್ಟ್ರಪತಿ ಗಣರಾಜ್ಯೋತ್ಸವದ ಭಾಷಣ; ಇಸ್ರೋ ಯೋಜನೆ, ರಾಮ ಮಂದಿರ ಕಾರ್ಯ ಶ್ಲಾಘಿಸಿದ ದ್ರೌಪದಿ ಮುರ್ಮು!

By Santosh NaikFirst Published Jan 25, 2024, 8:08 PM IST
Highlights

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಗಣರಜ್ಯೋತ್ಸವದ ಭಾಷಣದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶ್ಲಾಘಿಸಿದ್ದಲ್ಲದೆ, ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆದರು.
 

ನವದೆಹಲಿ (ಜ.25): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಭಾರತ ನಿಜಕ್ಕೂ ಪ್ರಜಾಪ್ರಭುತ್ವದ ತಾಯಿ ಎಂದು ಕರೆದರು. "ಭಾರತದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯು ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ಪರಿಕಲ್ಪನೆಗಿಂತ ಹೆಚ್ಚು ಹಳೆಯದು. ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಕರೆಯಲು ಇದು ಕಾರಣವಾಗಿದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. ಭಾರತವು ಈಗ ಅಮೃತಕಾಲದ ಆರಂಭಿಕ ವರ್ಷಗಳಲ್ಲಿದೆ ಮತ್ತು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ದೇಶದ ಜನರಿಗೆ ಸುವರ್ಣಾವಕಾಶವಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. "ರಾಷ್ಟ್ರವು ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿದೆ. ಇದು ಪರಿವರ್ತನೆಯ ಸಮಯ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶವನ್ನು ನೀಡಲಾಗಿದೆ. ನಮ್ಮ ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬ ನಾಗರಿಕರ ಕೊಡುಗೆಯು ನಿರ್ಣಾಯಕವಾಗಿರುತ್ತದೆ" ಎಂದು ಅವರು ಹೇಳಿದರು.

LIVE: President Droupadi Murmu's Address to the Nation on the eve of the 75th Republic Day https://t.co/Ca6eWS8w01

— President of India (@rashtrapatibhvn)


ಅವರು ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ ಮತ್ತು ಅದು ಹೇಗೆ ನಮ್ಮ ಜೀವನದ ಭಾಗವಾಗಿದೆ ಎಂಬುದರ ಕುರಿತು ಮಾತನಾಡಿದರು. "ಅಮೃತ್ ಕಾಲ' ಅವಧಿಯು ಅಭೂತಪೂರ್ವ ತಾಂತ್ರಿಕ ಬದಲಾವಣೆಗಳ ಅವಧಿಯಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ತಾಂತ್ರಿಕ ಪ್ರಗತಿಗಳು ನಮ್ಮ ದೈನಂದಿನ ಜೀವನದ ಭಾಗವಾಗುತ್ತಿವೆ ಎಂದು ಹೇಳಿದರು.
ಭವಿಷ್ಯದಲ್ಲಿ ನಾವು ಯೋಚಿಸಬೇಕಾದ ಹಲವು ಕ್ಷೇತ್ರಗಳಿವೆ, ಆದರೆ ಪ್ರೋತ್ಸಾಹಕ ಅವಕಾಶಗಳೂ ಇವೆ. ಮುಂದೆ, ವಿಶೇಷವಾಗಿ ಯುವಜನರಿಗಾಗಿ, ಅವರು ಹೊಸ ಗಡಿಗಳನ್ನು ಅನ್ವೇಷಿಸುತ್ತಿದ್ದಾರೆ. ಅವರ ಹಾದಿಯಿಂದ ಅಡಚಣೆಗಳನ್ನು ತೆಗೆದುಹಾಕಲು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಹೊರಹಾಕಲು ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಾಗಿದೆ" ಎಂದು ತಿಳಿಸಿದ್ದಾರೆ.

'ಈ ವಾರದ ಆರಂಭದಲ್ಲಿ, ಅಯೋಧ್ಯೆಯಲ್ಲಿ ನಿರ್ಮಿಸಲಾದ ವೈಭವವಾದ ಮಂದಿರದ್ಲಿ ಭಗವಾನ್ ಶ್ರೀರಾಮನ ವಿಗ್ರಹದ ಐತಿಹಾಸಿಕ 'ಪ್ರಾಣ ಪ್ರತಿಷ್ಠಾ'ವನ್ನು ನಾವು ವೀಕ್ಷಿಸಿದ್ದೇವೆ. ಈ ಘಟನೆಯನ್ನು ವಿಶಾಲ ದೃಷ್ಟಿಕೋನದಿಂದ ನೋಡಿದಾಗ, ಭವಿಷ್ಯದ ಇತಿಹಾಸಕಾರರು ಇದನ್ನು ಭಾರತದ ನಾಗರಿಕ ಪರಂಪರೆಯ ಮರುಶೋಧನೆಯಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಿದ್ದಾರೆ. ಸರಿಯಾದ ನ್ಯಾಯಾಂಗ ಪ್ರಕ್ರಿಯೆ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ದೇವಾಲಯದ ನಿರ್ಮಾಣ ಪ್ರಾರಂಭವಾಯಿತು. ಇದು ಈಗ ಒಂದು ಭವ್ಯ ಸೌಧವಾಗಿ ನಿಂತಿದೆ, ಇದು ಕೇವಲ ಜನರ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ, ಆದರೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರು ಹೊಂದಿರುವ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಅದರೊಂದಿಗೆ ನಾರಿ ಶಕ್ತಿ ವಂದನ್ ಕಾಯ್ದೆಯು ಮಹಿಳಾ ಸಬಲೀಕರಣಕ್ಕೆ ಕ್ರಾಂತಿಕಾರಿ ಅಸ್ತ್ರ ಎಂದು ಎಂದು ನಾನು ನಂಬುತ್ತೇನೆ. ಇದು ನಮ್ಮ ಆಡಳಿತ ಪ್ರಕ್ರಿಯೆಗಳನ್ನು ಸುಧಾರಿಸಲು ಸಹ ಸಾಕಷ್ಟು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. 'ನಮ್ಮ ಜಿಡಿಪಿ ಬೆಳವಣಿಗೆ ದರವು ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿತ್ತು ಮತ್ತು ಈ ಕಾರ್ಯಕ್ಷಮತೆಯು 2024 ಮತ್ತು ಅದರ ನಂತರವೂ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಮೋದಿ ಜತೆ ಇಂದು ಫ್ರೆಂಚ್‌ ಅಧ್ಯಕ್ಷರ ರೋಡ್‌ಶೋ: ರಾಜಸ್ಥಾನದ ಪಾರಂಪರಿಕ ತಾಣಗಳ ಪ್ರವಾಸ

ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರು ಹಿಂದೆಂದಿಗಿಂತಲೂ ಹೆಚ್ಚಿನ ಗುರಿಯನ್ನು ಹೊಂದಿದ್ದಾರೆ ಮತ್ತು ಫಲಿತಾಂಶಗಳನ್ನು ಸಹ ನೀಡುತ್ತಿದ್ದಾರೆ ಎಂದು ಹೇಳಿದರು. ಇನ್ನು ನಮ್ಮ ಕ್ರೀಡಾಪಟುಗಳು ಹೊಸ ಆತ್ಮವಿಶ್ವಾಸ ಕಾಣುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ನಮ್ಮ ಮಹಿಳಾ ಕ್ರೀಡಾತಾರೆಯರು ನಮ್ಮ ಪದಕ ಪಟ್ಟಿಯಲ್ಲಿ ಪ್ರಭಾವಿ ಕೊಡುಗೆ ನೀಡುತ್ತಿರುವುದನ್ನು ನೋಡಲು ನಮಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವಕ್ಕೆ ಈ ಸಿನಿಮಾ ನೋಡುವಂತೆ ಸೂಚಿಸಿದ ಸರ್ಕಾರ..! ಇದರ ವಿಶೇಷತೆ ಏನು ಗೊತ್ತಾ?

click me!