Latest Videos

ಮೋದಿ ಕಾಲು ಮುಟ್ಟುವ ಮೂಲಕ ನಿತೀಶ್‌ ಬಿಹಾರಕ್ಕೆ ಅವಮಾನ ಮಾಡಿದ್ದಾರೆ: ಪ್ರಶಾಂತ್‌ ಕಿಶೋರ್‌

By Santosh NaikFirst Published Jun 15, 2024, 5:46 PM IST
Highlights

ಪ್ರಧಾನಿ ಮೋದಿಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲು ನಿತೀಶ್ ಕುಮಾರ್ ತಮ್ಮ ತತ್ವಗಳನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ.

ಪಾಟ್ನಾ (ಜೂ.15): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪ್ರಧಾನಿ ನರೇಂದ್ರ ಮೋದಿ ಅವರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡುವ ಮೂಲಕ ಇಡೀ ಬಿಹಾರ ರಾಜ್ಯಕ್ಕೆ ಅವಮಾನ ತಂದಿದ್ದಾರೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಶುಕ್ರವಾರ ಭಾಗಲ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಟೀಕೆ ಮಾಡಿದ್ದಾರೆ. ಸದಾಕಾಲ ಅಧಿಕಾರದಲ್ಲಿಯೇ ಉಳಿದುಕೊಳ್ಳುವ ನಿಟ್ಟಿನಲ್ಲಿ ನಿತೀಶ್‌ ಕುಮಾರ್‌ ಈ ಸಾಹಸ ಮಾಡಿದ್ದಾರೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ ಪ್ರಧಾನಿ ಮೋದಿ ಪ್ರಮಾಣ ವಚನಕ್ಕೂ ಮುನ್ನ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಲು ನಮಸ್ಕರಿಸಿರುವುದನ್ನು ಉಲ್ಲೇಖಿಸಿ ಕಿಶೋರ್ ಈ ಹೇಳಿಕೆ ನೀಡಿದ್ದಾರೆ.

"ಈ ಹಿಂದೆ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ನಾನು ಈಗ ಏಕೆ ಟೀಕಿಸುತ್ತಿದ್ದೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು ಆಗ ವಿಭಿನ್ನ ವ್ಯಕ್ತಿಯಾಗಿದ್ದರು. ಅವರ ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ" ಎಂದು ಜೆಡಿ (ಯು) ಜೊತೆ ಕೆಲಸ ಮಾಡಿದ್ದ ಪ್ರಶಾಂತ್‌ ಕಿಶೋರ್ ಹೇಳಿದರು. 2015 ರಲ್ಲಿ ಅಧ್ಯಕ್ಷರ ಚುನಾವಣಾ ಪ್ರಚಾರ ಮತ್ತು ಎರಡು ವರ್ಷಗಳ ನಂತರ ಔಪಚಾರಿಕವಾಗಿ ಪಕ್ಷಕ್ಕೆ ಸೇರಿದರು. "ರಾಜ್ಯದ ನಾಯಕ ಎಂದರೆ ಅದರ ಜನರ ಹೆಮ್ಮೆ. ಆದರೆ ನಿತೀಶ್ ಕುಮಾರ್ ಅವರು ಮೋದಿಯ ಪಾದಗಳನ್ನು ಮುಟ್ಟಿದಾಗ ಬಿಹಾರಕ್ಕೆ ಅವಮಾನ ತಂದರು" ಎಂದು ಅವರು ಕಳೆದ ವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯನ್ನು ಉಲ್ಲೇಖಿಸಿ ಆರೋಪಿಸಿದರು.

ನಿತೀಶ್‌ ಕುಮಾರ್ ಅವರ ಜೆಡಿಯು (ಯು) ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಬಿಜೆಪಿಯ ಎರಡನೇ ಅತಿದೊಡ್ಡ ಮಿತ್ರ ಪಕ್ಷವಾಗಿ ಹೊರಹೊಮ್ಮಿತು, ಅದು ಸ್ವಂತವಾಗಿ ಬಹುಮತವನ್ನು ಪಡೆಯಲು ವಿಫಲವಾಯಿತು. "ಮೋದಿ ಅಧಿಕಾರಕ್ಕೆ ಮರಳುವಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತುಂಬಾ ಮಾತನಾಡುತ್ತಿದ್ದಾರೆ. ಆದರೆ ಬಿಹಾರ ಮುಖ್ಯಮಂತ್ರಿ ತಮ್ಮ ಸ್ಥಾನವನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ? ಅವರು ರಾಜ್ಯಕ್ಕೆ ಲಾಭವನ್ನು ಖಚಿತಪಡಿಸಿಕೊಳ್ಳಲು ತಮ್ಮ ಪ್ರಭಾವವನ್ನು ಬಳಸುತ್ತಿಲ್ಲ.ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಓದಿ ಪಾದಗಳಿಗೆ ನಮಸ್ಕಾರ್ ಮಾಡುತ್ತಿದ್ದಾರೆ. 2025 ರ ವಿಧಾನಸಭಾ ಚುನಾವಣೆಯ ನಂತರವೂ ಅವರು ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿದ್ದಾರೆ" ಎಂದು ಕಿಶೋರ್ ಹೇಳಿದರು.

ಲೋಕಸಭಾ ಎಕ್ಸಿಟ್ ಪೋಲ್ ಬಹಿರಂಗಕ್ಕೆ ಕೆಲವೇ ಗಂಟೆ ಮುನ್ನ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್!

2014 ರಲ್ಲಿ ಮೋದಿಯವರ ಅದ್ಭುತವಾದ ಯಶಸ್ವಿ ಲೋಕಸಭಾ ಚುನಾವಣಾ ಪ್ರಚಾರವನ್ನು ನಿಭಾಯಿಸಿದ ಬಳಿಕ ಪ್ರಶಾಂತ್‌ ಕಿಶೋರ್ ಮೊದಲ ಬಾರಿಗೆ ಖ್ಯಾತಿಯನ್ನು ಗಳಿಸಿದರು. 2021 ರಲ್ಲಿ ಅವರು ರಾಜಕೀಯ ಸಲಹೆಯನ್ನು ತ್ಯಜಿಸುವ ಹೊತ್ತಿಗೆ, ಕಿಶೋರ್ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಮತ್ತು ಜಗನ್ ಮೋಹನ್ ರೆಡ್ಡಿ ಸೇರಿದಂತೆ ಹಲವಾರು ಉನ್ನತ ರಾಜಕಾರಣಿಗಳಿಗಾಗಿ ಕೆಲಸ ಮಾಡಿದ್ದರು.

'ತುಂಬಾ ನೀರು ಇಟ್ಕೊಂಡಿರಿ, ಜೂನ್‌ 4ಕ್ಕೆ ಬೇಕಾಗುತ್ತೆ..' ಟೀಕೆ ಮಾಡುವವರ ಕಾಲೆಳೆದ ಪ್ರಶಾಂತ್‌ ಕಿಶೋರ್‌!

click me!