Goa Liberation Day: ಪಟೇಲರು ಇನ್ನೂ ಕೆಲ ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಕಾಯಬೇಕಾಗುತ್ತಿರಲಿಲ್ಲ!

By Suvarna NewsFirst Published Dec 19, 2021, 4:58 PM IST
Highlights

* ಗೋವಾ ವಿಮೋಚನಾ ದಿನದಂದು ಮೋದಿ ಮಾತು

* ಭಾಷಣದಲ್ಲಿ ದಿವಂಗತ ಮಾಜಿ ಸಿಎಂ ಮನೋಹರ್‌ ಪರಿಕ್ಕರ್ ನೆನಪಿಸಿಕೊಂಡ ಪ್ರಧಾನಿ

* ಪಟೇಲರು ಇನ್ನೂ ಕೆಲ ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಕಾಯಬೇಕಾಗುತ್ತಿರಲಿಲ್ಲ

ಪಣಜಿ(ಡಿ.19): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಭಾನುವಾರ ಗೋವಾ ವಿಮೋಚನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದ ಇತರ ದೊಡ್ಡ ಭಾಗವು ಮೊಘಲರ ಆಳ್ವಿಕೆಯಲ್ಲಿದ್ದ ಸಮಯದಲ್ಲಿ ಗೋವಾ ಪೋರ್ಚುಗಲ್ (Portugal) ಅಧೀನಕ್ಕೆ ಹೋಗಿತ್ತು ಎಂದು ಹೇಳಿದರು. ಅದಾದ ನಂತರ ಈ ದೇಶ ಎಷ್ಟೊಂದು ರಾಜಕೀಯ ಬಿರುಗಾಳಿಗಳನ್ನು ಕಂಡಿದೆ, ಎಷ್ಟು ಅಧಿಕಾರದ ಕದ ತಟ್ಟಿದೆ. ಆದರೆ ಕಾಲ ಮತ್ತು ಅಧಿಕಾರದ ಏರಿಳಿತದ ನಡುವಿನ ಅಂತರವನ್ನು ಶತಮಾನಗಳ ನಂತರವೂ ಗೋವಾ (Goa) ತನ್ನ ಭಾರತೀಯತೆಯನ್ನು ಮರೆತಿಲ್ಲ, ಭಾರತವು ತನ್ನ ಗೋವಾವನ್ನು ಮರೆತಿಲ್ಲ. ಇದು ಕಾಲಾನಂತರದಲ್ಲಿ ಬಲವಾಗಿ ಬೆಳೆದ ಸಂಬಂಧವಾಗಿದೆ ಎಂದಿದ್ದಾರೆ.

ಪಟೇಲರು ಇನ್ನೂ ಕೆಲವು ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಕಾಯಬೇಕಾಗಿರಲಿಲ್ಲ

ಗೋವಾ ಮುಕ್ತಿ ವಿಮೋಚನಾ (Goa Liberation Day) ಸಮಿತಿಯ ಸತ್ಯಾಗ್ರಹದಲ್ಲಿ 31 ಸತ್ಯಾಗ್ರಹಿಗಳು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಪ್ರಧಾನಿ ಮೋದಿ ಹೇಳಿದರು. ಈ ತ್ಯಾಗಗಳ ಬಗ್ಗೆ, ವೀರ್ ಕರ್ನೈಲ್ ಸಿಂಗ್ ಬೇನಿಪಾಲ್ ಅವರಂತಹ ಪಂಜಾಬ್‌ನ ವೀರರ ಬಗ್ಗೆ ನೀವು ಯೋಚಿಸುತ್ತೀರಿ. ಅವರೊಳಗೆ ಅಲ್ಲೋಲ ಕಲ್ಲೋಲವಿತ್ತು ಏಕೆಂದರೆ ಆ ಸಮಯದಲ್ಲಿ ದೇಶದ ಒಂದು ಭಾಗವು ಇನ್ನೂ ಬ್ರಿಟಿಷರ (British) ನಿಯಂತ್ರಣದಲ್ಲಿತ್ತು, ಕೆಲವು ದೇಶವಾಸಿಗಳಿಗೆ ಆಗಲೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಮತ್ತು ಸರ್ದಾರ್ ಪಟೇಲ್ ಸಾಹೇಬರು ಇನ್ನೂ ಕೆಲವು ವರ್ಷ ಬದುಕಿದ್ದರೆ, ಗೋವಾದ ವಿಮೋಚನೆಗಾಗಿ ಇಷ್ಟು ದಿನ ಕಾಯಬೇಕಾಗಿರಲಿಲ್ಲ ಎಂದು ಇಂದು ನಾನು ಹೇಳಲು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

Goa Liberation Day:ಮೋದಿಯಿಂದ 650 ಕೋಟಿ ರೂ ಮೌಲ್ಯದ ಯೋಜನೆ ಉದ್ಘಾಟನೆ, ಶಂಕುಸ್ಥಾಪನೆ

ವಿಮೋಚನೆ ಮತ್ತು ಸ್ವರಾಜ್ಯದ ಚಳುವಳಿಗಳನ್ನು ಗೋವಾದ ಜನರು ನಿಲ್ಲಿಸಲು ಬಿಡಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಅವರು ಭಾರತದ ಇತಿಹಾಸದಲ್ಲಿ (Indian History) ಹೆಚ್ಚು ಕಾಲ ಸ್ವಾತಂತ್ರ್ಯದ ಜ್ಯೋತಿಯನ್ನು ಉರಿಯುವಂತೆ ಮಾಡಿದರು. ಏಕೆಂದರೆ, ಭಾರತ ಕೇವಲ ರಾಜಕೀಯ ಶಕ್ತಿಯಲ್ಲ. ಭಾರತವು ಒಂದು ಕಲ್ಪನೆ, ಒಂದು ಕುಟುಂಬ, ಮಾನವೀಯತೆಯ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಭಾರತವು ಒಂದು ಆತ್ಮವಾಗಿದ್ದು, ಅಲ್ಲಿ ರಾಷ್ಟ್ರವು 'ಸ್ವಯಂ'ಗಿಂತ ಮೇಲಿರುತ್ತದೆ, ಅದು ಅತ್ಯುನ್ನತವಾಗಿದೆ. ಅಲ್ಲಿ ಒಂದೇ ಮಂತ್ರವಿದೆ - ರಾಷ್ಟ್ರ ಮೊದಲು. ಅಲ್ಲಿ ಒಂದೇ ನಿರ್ಣಯವಿದೆ - ಏಕ ಭಾರತ, ಶ್ರೇಷ್ಠ ಭಾರತ.

ಇಟಲಿಗೆ ಹೋದಾಗ ಪೋಪ್ ಅವರನ್ನು ಆಹ್ವಾನಿಸಿದ್ದೆ

ತಮ್ಮ ಇಟಲಿ (Italy) ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕೆಲವು ಸಮಯದ ಹಿಂದೆ ನಾನು ಇಟಲಿ ಮತ್ತು ವ್ಯಾಟಿಕನ್ ಸಿಟಿಗೆ ಹೋಗಿದ್ದೆ ಎಂದು ಹೇಳಿದರು. ಅಲ್ಲಿ ನನಗೆ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತು. ಭಾರತದ ಬಗೆಗಿನ ಅವರ ಮನೋಭಾವವು ಅಷ್ಟೇ ಅಗಾಧವಾಗಿತ್ತು. ಅವರನ್ನೂ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದೆ. ಪೋಪ್ ಅವರು ಈ ಆಮಂತ್ರಣವನ್ನು ಸ್ವೀಕರಿಸಿ ಬಹಳ ಸಂತುಷ್ಟರಾಗಿದ್ದರು ಎಂದು ಪ್ರಧಾನಿ ಹೇಳಿದರು. ನನ್ನ ಆಹ್ವಾನದ ನಂತರ ಅವರು ಹೇಳಿದ್ದನ್ನು ನಾನು ನಿಮಗೆ ಹೇಳಲೇಬೇಕು 'ಪೋಪ್ ಫ್ರಾನ್ಸಿಸ್  ಇದು ನೀವು ನನಗೆ ನೀಡಿದ ದೊಡ್ಡ ಕೊಡುಗೆ" ಎಂದಿದ್ದರು. ಇದು ಭಾರತದ ವೈವಿಧ್ಯತೆ, ನಮ್ಮ ಉಜ್ವಲ ಪ್ರಜಾಪ್ರಭುತ್ವದ ಮೇಲಿನ ಅವರ ಪ್ರೀತಿಯಾಗಿದೆ ಎಂದು ಮೋದಿ ಈ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

ಮನೋಹರ್ ಪರಿಕ್ಕರ್ ನೆನಪಿಸಿಕೊಂಡ ಮೋದಿ

ಗೋವಾ ತಲುಪಿದ ನಂತರ ಪ್ರಧಾನಿ ಮೋದಿ ತಮ್ಮ ಮಾಜಿ ಸಹೋದ್ಯೋಗಿ ಮನೋಹರ್ ಪರಿಕ್ಕರ್ (Manohar Parikkar) ಅವರನ್ನು ನೆನಪಿಸಿಕೊಂಡರು. ಗೋವಾದ ಸಾಧನೆಯನ್ನು ನೋಡಿದಾಗ ಈ ಹೊಸ ಗುರುತು ಬಲಗೊಳ್ಳುತ್ತಿದೆ ಎಂದು ನೆನಪಿಸಿಕೊಳ್ಳುತ್ತಾ, ನನ್ನ ಅವಿಭಾಜ್ಯ ಪಾಲುದಾರ ಮನೋಹರ್ ಪರಿಕರ್ ಜಿ ಅವರನ್ನೂ ನೆನಪಿಸಿಕೊಳ್ಳುತ್ತೇನೆ. ಅವರು ಗೋವಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಲ್ಲದೆ, ಗೋವಾದ ಸಾಮರ್ಥ್ಯವನ್ನು ವಿಸ್ತರಿಸಿದರು. ಗೋವಾದ ಜನರು ಎಷ್ಟು ಪ್ರಾಮಾಣಿಕರು, ಅವರು ಎಷ್ಟು ಪ್ರತಿಭಾವಂತರು ಮತ್ತು ಶ್ರಮಜೀವಿಗಳು, ಮನೋಹರ್ ಜಿ ಅವರೊಳಗೆ ದೇಶವು ಗೋವಾವನ್ನು ನೋಡುತ್ತಿತ್ತು ಎಂದಿದ್ದಾರೆ. ಒಬ್ಬ ತನ್ನ ರಾಜ್ಯಕ್ಕೆ, ತನ್ನ ಜನರಿಗೆ ತನ್ನ ಕೊನೆಯ ಉಸಿರು ಇರುವವರೆಗೂ ಹೇಗೆ ಬದ್ಧನಾಗಿರುತ್ತಾನೆ ಎಂಬುವುದಕ್ಕೆ ಅವರ ಜೀವನವೇ ಸಾಕ್ಷಿ ಎಂದಿದ್ದಾರೆ.

ಗೋವಾದ ಭೂಮಿ, ಗೋವಾದ ಗಾಳಿ, ಗೋವಾದ ಸಮುದ್ರಕ್ಕೆ ಪ್ರಕೃತಿಯ ಅದ್ಭುತ ಕೊಡುಗೆ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಗೋವಾ ಜನರ ಈ ಉತ್ಸಾಹವು ಗೋವಾದ ಗಾಳಿಯಲ್ಲಿ ವಿಮೋಚನೆಯ ಹೆಮ್ಮೆಯನ್ನು ಹೆಚ್ಚಿಸುತ್ತಿದೆ. ಗೋವಾದ ತಲೇಗಾವ್‌ನಲ್ಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ನ ದಿಗ್ಗಜರನ್ನು ಸನ್ಮಾನಿಸಿ, ಕೋಟ್ಯಂತರ ಮೊತ್ತದ ಯೋಜನೆಗಳನ್ನು ಮಂಡಿಸಿದರು. ವಾಸ್ತವವಾಗಿ, ಪೋರ್ಚುಗೀಸ್ ಆಳ್ವಿಕೆಯಿಂದ ಗೋವನ್ನು ವಿಮೋಚನೆಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ 'ಆಪರೇಷನ್ ವಿಜಯ್' ನ ಯಶಸ್ಸನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.

click me!