
ನವದೆಹಲಿ(ಫೆ.18): ಕಳೆದ ಕೆಲ ದಿನಗಳಲ್ಲಿ ತೀವ್ರ ಆನಾರೋಗ್ಯದಿಂದ ಅಸ್ಸಾಂ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮಹಾಂತ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರುಫುಲ್ಲಾ ಕುಮಾರ್ ಮಹಾಂತ ಪತ್ನಿ, ರಾಜ್ಯಸಭಾ ಸದಸ್ಯೆ ಜೊಯಶ್ರಿ ಗೋಸ್ವಾಮಿ ಮಹಾಂತ ಭೇಟಿಯಾಗಿದ್ದಾರೆ.
ಪಾಕ್ ಸೇರಿ 9 ದೇಶದ ಜೊತೆ ಭಾರತ ಹೆಲ್ತ್ ವಿಸಾ, ಏರ್ ಆಂಬುಲೆನ್ಸ್ ಒಪ್ಪಂದ
ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗ್ನಲ್ಲಿ ಪ್ರಫುಲ್ಲಾ ಪತ್ನಿ ಜೊಯಶ್ರಿ ಹಾಗೂ ಪುತ್ರನ್ನು ಮೋದಿ ಭೇಟಿಯಾಗಿ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಿದ್ದಾರೆ. ಇಷ್ಟೇ ಅಲ್ಲ ಶೀಘ್ರ ಚೇತರಿಕೆ ಹಾರೈಸಿದ್ದಾರೆ.
ಗುವ್ಹಾಟಿಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಫುಲ್ಲಾ ಕುಮಾರ್ ಮಹಾಂತ ಆರೋಗ್ಯ ಕಳೆದೆರಡು ದಿನದಿಂದ ತೀವ್ರ ಹದೆಗೆಟ್ಟಿತು. ಉಸಿರಾಟದ ಸಮಸ್ಯೆ, ಬಿಪಿ ಸೇರಿದಂತೆ ಇತರ ಕೆಲ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಗುವ್ಹಾಟಿಯಿಂದ್ ಏರ್ಲಿಫ್ಟ್ ಮಾಡಿ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ