
ನವದೆಹಲಿ (ಫೆಬ್ರವರಿ 21, 2023): ಭೂಕಂಪ ಪೀಡಿತ ಸಿರಿಯಾ ಹಾಗೂ ಟರ್ಕಿಗೆ ತೆರಳಿ ಅಲ್ಲಿನ ನೂರಾರು ಜನರ ಪ್ರಾಣ ರಕ್ಷಿಸಿ ಭಾರತಕ್ಕೆ ವಾಪಸಾದ ಪ್ರಕೃತಿ ವಿಕೋಪ ನಿಗ್ರಹ ಪಡೆಗಳ ಜತೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿ, ತಂಡಗಳ ಕಾರ್ಯತತ್ಪರತೆ ಶ್ಲಾಘಿಸಿದರು. ‘ಇತ್ತೀಚಿನ ವರ್ಷಗಳಲ್ಲಿ ಭಾರತ ಕೇವಲ ಸ್ವಾವಲಂಬಿ ದೇಶ ಎಂದು ಮಾತ್ರವಲ್ಲ, ನಿಸ್ವಾರ್ಥ ದೇಶ ಎಂದು ಎನ್ನಿಸಿಕೊಂಡಿದೆ’ ಎಂದು ಸಂತಸ ವ್ಯಕ್ತಪಸಿದರು.
ಸಿರಿಯಾದಿಂದ ಮರಳಿದ 3 ಎನ್ಡಿಆರ್ಎಫ್ ತಂಡಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನೀವು ಮಾನವತೆಯ ಸೇವೆ ಮಾಡಿದ್ದೀರಿ. ಭಾರತಕ್ಕೆ ಹೆಮ್ಮೆ ತಂದಿದ್ದೀರಿ. ಇಡೀ ವಿಶ್ವವೇ ನಮ್ಮದು ಎಂದು ಭಾವಿಸೋಣ. ಯಾರೇ ಕಷ್ಟದಲ್ಲಿದ್ದರೂ ತಕ್ಷಣವೇ ಸಹಾಯ ಮಾಡೋಣ. ನಮ್ಮ ತಂಡಗಳನ್ನು ವಿಶ್ವದ ಅತಿ ಶ್ರೇಷ್ಠ ರಕ್ಷಣಾ ತಂಡಗಳು ಎಂದು ಮಾರ್ಪಡಿಸಲು ಪಣ ತೊಡೋಣ’ ಎಂದರು.
ಇದನ್ನು ಓದಿ: ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ
ಫೆಬ್ರವರಿ 6ರ ಟರ್ಕಿ-ಸಿರಿಯಾ ಭೂಕಂಪದ ಕಾರಣ ಭಾರತ ರಕ್ಷಣಾ ತಂಡ ಹಾಗೂ ವೈದ್ಯಕೀಯ ತಂಡ ಕಳಿಸಿತ್ತು. ವೈದ್ಯಕೀಯ ತಂಡ 4000 ಜನರನ್ನು ಉಪಚರಿಸಿತ್ತು.
ಇದನ್ನೂ ಓದಿ: Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ