
ನವದೆಹಲಿ(ಫೆ.11): ಭಾರತದ ಪ್ರಧಾನಿ ನರೇಂದ್ರ ಮೋದಿ ಇದೀಗ ಕೆನಡಾ ದೇಶಕ್ಕೂ ಲಸಿಕೆ ವಿತರಿಸುವ ಭರವಸೆ ನೀಡಿದ್ದಾರೆ.
ಲಸಿಕೆ ಪೂರೈಸುವಂತೆ ಕರೆ ಮಾಡಿದ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಅವರ ಕೋರಿಕೆ ಪುರಸ್ಕರಿಸಿರುವ ಮೋದಿ, ‘ಕೋವಿಡ್ ಲಸಿಕೆಯನ್ನು ಕೆನಡಾಗೆ ಪೂರೈಸಲು ಭಾರತ ತನ್ನ ಕೈಲಾದಷ್ಟುಪ್ರಯತ್ನ ಮಾಡುತ್ತದೆ’ ಎಂದಿದ್ದಾರೆ.
ಭಾರತದ ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿನ ರೈತರ ಪ್ರತಿಭಟನೆಯನ್ನು ಟ್ರುಡೋ ಬೆಂಬಲಿಸಿದ್ದು ಇಲ್ಲಿ ಗಮನಾರ್ಹ.
ಭಾರತ ಈವರೆಗೆ 25 ದೇಶಗಳಿಗೆ 2.4 ಕೋಟಿ ಡೋಸ್ ಲಸಿಕೆ ನೀಡಿದೆ. ಕೆನಡಾದಲ್ಲಿ ಈವರೆಗೆ 8,12,848 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 20,984 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ