
ಭುಜ್ (ಗುಜರಾತ್) : ದೀಪಾವಳಿ ಹಬ್ಬದ ದಿನ ದೇಶದ ಗಡಿಗೆ ತೆರಳಿ ಯೋಧರ ಜತೆಗೆ ಹಬ್ಬ ಆಚರಣೆ ಮಾಡುವುದನ್ನು ಪ್ರಧಾನಿಯಾದಾಗಿನಿಂದಲೂ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಈ ವರ್ಷವೂ ಮುಂದುವರಿಸಿದರು. ಗುಜರಾತಿನ ಕಛ್ನಲ್ಲಿರುವ ಸರ್ಕ್ರೀಕ್ನಲ್ಲಿ ಭಾರತ- ಪಾಕಿಸ್ತಾನ ಗಡಿಯಲ್ಲಿ ಪಹರೆ ಕಾಯುತ್ತಿರುವ ಸೈನಿಕರಿಗೆ ಗುರುವಾರ ಸಿಹಿ ತಿನ್ನಿಸಿ ಮೋದಿ ಅವರು ಹಬ್ಬ ಮಾಡಿದರು.
ಗಡಿ ಭದ್ರತಾ ಪಡೆ (ಬಿಎಸ್ಎಫ್), ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಯೋಧರಿಗೆ ಮೋದಿ ಅವರು ಸಿಹಿ ಹಂಚಿದರು. ಈ ವೇಳೆ ಅವರು ಬಿಎಸ್ಎಫ್ ಸೈನಿಕರ ರೀತಿ ಸಮವಸ್ತ್ರ ಧರಿಸಿದ್ದರು.
70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ವಿಮೆ ವಿಸ್ತರಣೆ: ಪ್ರಧಾನಿ ಮೋದಿ ಚಾಲನೆ
ಬಳಿಕ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೈನಿಕರ ಕಟ್ಟುನಿಟ್ಟಾದ ಪಹರೆಯಿಂದಾಗಿ ಈ ಭಾಗದತ್ತ ಕಣ್ಣು ಹಾಕುವ ಧೈರ್ಯ ಯಾರಿಗೂ ಇಲ್ಲ. ದೇಶದ ಒಂದಿಂಚೂ ಜಾಗದ ವಿಚಾರದಲ್ಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಯೋಧರ ಜತೆಗೆ ದೀಪಾವಳಿ ಆಚರಣೆ ಮಾಡಿದಾಗಲೆಲ್ಲಾ ನನ್ನ ಸಂತೋಷ ಹಲವಾರು ಪಟ್ಟು ಹೆಚ್ಚಳವಾಗುತ್ತದೆ. 500 ವರ್ಷಗಳ ಬಳಿಕ ಶ್ರೀರಾಮ ಅಯೋಧ್ಯೆಗೆ ಮರಳಿರುವುದರಿಂದ ಈ ಬಾರಿಯ ದೀಪಾವಳಿ ವಿಶೇಷವಾದುದ್ದಾಗಿದೆ ಎಂದರು.
ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಆರೋಗ್ಯ ಭಾಗ್ಯ- ವೈದ್ಯಕೀಯ ಕ್ಷೇತ್ರಕ್ಕೆ ಭಾರಿ ಕೊಡುಗೆ
ವಿಶ್ವದ ಅತ್ಯಾಧುನಿಕ ಸೇನಾಪಡೆಗಳ ಸಾಲಿಗೆ ಭಾರತವನ್ನು ಸೇರ್ಪಡೆ ಮಾಡುವ ಉದ್ದೇಶದಿಂದ ಆಧುನಿಕ ಯುದ್ಧ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲ ಯತ್ನಗಳನ್ನೂ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ