5 ರಾಜ್ಯಗಳಲ್ಲಿ ಕೊರೋನಾ ಅಬ್ಬರ, ಮೋದಿ ದಿಢೀರ್‌ ಸಭೆ!

Published : Feb 24, 2021, 08:18 AM IST
5 ರಾಜ್ಯಗಳಲ್ಲಿ ಕೊರೋನಾ ಅಬ್ಬರ, ಮೋದಿ ದಿಢೀರ್‌ ಸಭೆ!

ಸಾರಾಂಶ

ಮೋದಿ ದಿಢೀರ್‌ ಕೊರೋನಾ ಸಭೆ| ಸೋಂಕು ತೀವ್ರ ಬೆನ್ನಲ್ಲೇ ಅಧಿಕಾರಿಗಳೊಡನೆ ಚರ್ಚೆ

ನವ​ದೆ​ಹ​ಲಿ(ಫೆ.24): ಕಳೆದ ಕೆಲ ದಿನ​ಗ​ಳಿಂದ ದೇಶಾ​ದ್ಯಂತ ಕೊರೋನಾ ವೈರಸ್‌ ಹಬ್ಬು​ವಿ​ಕೆ ತೀವ್ರತೆ ಹೆಚ್ಚಾ​ಗಿ​ರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗ​ಳ​ವಾರ ತಮ್ಮ ಕಚೇ​ರಿ​ಯಲ್ಲೇ ಉನ್ನ​ತ ಮಟ್ಟದ ಸಭೆಯೊಂದನ್ನು ನಡೆಸಿದರು.

ಕೇಂದ್ರ ಆರೋಗ್ಯ ಇಲಾ​ಖೆಯ ಕಾರ‍್ಯದರ್ಶಿ ರಾಜೇಶ್‌ ಭೂಷಣ್‌ ಸೇರಿ​ದಂತೆ ಕೊರೋನಾ ನಿಯಂತ್ರ​ಣ​ದಲ್ಲಿ ಪಾಲು​ದಾ​ರಿಕೆ ಹೊಂದಿದ ಎಲ್ಲಾ ಇಲಾ​ಖೆಯ ಅಧಿ​ಕಾ​ರಿ​ಗ​ಳು ಈ ದಿಢೀರ್‌ ಸಭೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಕಳೆದ ಕೆಲ ದಿನ​ಗ​ಳಿಂದ ಮಹಾ​ರಾಷ್ಟ್ರ, ಕೇರಳ, ಮಧ್ಯ​ಪ್ರ​ದೇಶ, ಛತ್ತೀ​ಸ್‌​ಗಢ ಮತ್ತು ಪಂಜಾಬ್‌ ರಾಜ್ಯ​ಗ​ಳಲ್ಲಿ ಅತಿ​ಹೆಚ್ಚು ಕೊರೋನಾ ಪ್ರಕ​ರ​ಣ​ಗಳು ದಾಖ​ಲಾ​ಗು​ತ್ತಿವೆ. ಇದಕ್ಕೆ ಕಾರ​ಣ​ವೇನು? ಈ ಸೋಂಕಿತ​ರನ್ನು ಗುಣ​ಮು​ಖ​ಗೊ​ಳಿಸಿ, ಸೋಂಕು ಹೆಚ್ಚು ತೀವ್ರ​ತೆ​ಯಿಂದ ವ್ಯಾಪಿ​ಸ​ದಂತೆ ಏನೆಲ್ಲಾ ಮುಂದಾ​ಲೋ​ಚನೆ ಕ್ರಮ ಕೈಗೊ​ಳ್ಳ​ಬ​ಹುದು ಎಂಬು​ದರ ಬಗ್ಗೆ ಅಧಿ​ಕಾ​ರಿ​ಗ​ಳಿಂದ ಮೋದಿ ಅವರು ಮಾಹಿತಿ ಪಡೆ​ದಿ​ದ್ದಾರೆ ಎನ್ನ​ಲಾ​ಗಿದೆ.

ಜೊತೆಗೆ ಈ ಸಂಬಂಧ ಹೆಚ್ಚು ನಿಗಾ ವಹಿ​ಸು​ವಂತೆಯೂ ಅಧಿ​ಕಾ​ರಿ​ಗ​ಳಿಗೆ ಸೂಚಿ​ಸ​ಲಾ​ಗಿದೆ ಎನ್ನ​ಲಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!