
ಪಾಕಿಸ್ತಾನಿ ನುಸುಳುಕೋರ ಗಡಿಯನ್ನು ದಾಟಿ, ಬೇಲಿಯನ್ನು ದಾಟಿಯಲ್ಲಿ ಪ್ರಯತ್ನಿಸುತ್ತಿದ್ದ ಸಂದರ್ಭ ಬಿಎಸ್ಎಫ್ ಯೋಧರು ಗಮನಿಸಿದ್ದಾರೆ. ನುಸುಳುಕೋರನಿಗೆ ವಾರ್ನಿಂಗ್ ನೀಡಲಾದರೂ ತಂತಿ ಬೇಲಿ ದಾಟಿ ಇನ್ನೊಂದು ದಿಕ್ಕಿನತ್ತ ಓಡಿದ್ದಾನೆ ಎಂದು ಎಂದಿದ್ದಾರೆ.
ಈ ಸಂದರ್ಭ ಯೋಧರು ಗುಂಡು ಹಾರಿಸಿದ್ದು, ನುಸುಳುಕೋರ ಪೊದೆಯಲ್ಲಿ ಅಡಗಿಕೊಂಡಿದ್ದ. ಗುಂಡಿನ ದಾಳಿ ನಂತರ ಹುಡುಕಿದಾದ ಮೃತದೇಹ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಡಾಖ್ನಲ್ಲಿ ಹಾಲಿ ಸ್ಥಿತಿ ಕಾಪಾಡುವ ಚೀನಾ ಕುತಂತ್ರಕ್ಕೆ ಭಾರತದ ಬ್ರೇಕ್!
ಗಡಿಯ ಭಕಸರಾ ಭಾಗದಲ್ಲಿ ರಾತ್ರಿ 1 ಗಂಟೆಗೆ ಘಟನೆ ನಡೆದಿದೆ. ಪಾಕಿಸ್ತಾನ ಕಡೆಯಿಂದ 10ರಿಂದ 15 ಟಾರ್ಚ್ ಬೆಳಕು ಹಾಗೂ ಕಿರುಚಾಟವೂ ಕೇಳುತ್ತಿತ್ತು ಎಂದು ಯೋಧರು ತಿಳಿಸಿದ್ದಾರೆ.
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬಿಎಸ್ಎಫ್ ಅಧಿಕಾರಿ ನುಸುಳುಕೋರನ ಪತ್ತೆಗಾಗಿ ಪಾಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಲ್ಲಿನ ವರದಿಯ ಬಳಿಕ ಹೆಚ್ಚಿನ ವಿವರ ಲಭ್ಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ