139 ಸಾಧಕರಿಗೆ ಪದ್ಮ ಪ್ರಶಸ್ತಿ ಗರಿ: 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಕಟ

Published : Jan 26, 2025, 07:15 AM IST
139 ಸಾಧಕರಿಗೆ ಪದ್ಮ ಪ್ರಶಸ್ತಿ ಗರಿ: 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಕಟ

ಸಾರಾಂಶ

ಶನಿವಾರ 76 ನೇ ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ,ಎಸ್‌. ಖೇಹರ್, ಸುಜುಕಿ ಮುಖ್ಯಸ್ಥ ಒಸಾಮು ಸುಜುಕಿ, ಮಾಜಿ ಕ್ರಿಕೆಟಿಗ ಆರ್‌. ಅಶ್ವಿನ್‌ ಸೇರಿದಂತೆ 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 

ನವದೆಹಲಿ (ಜ.26): ಶನಿವಾರ 76 ನೇ ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ,ಎಸ್‌. ಖೇಹರ್, ಸುಜುಕಿ ಮುಖ್ಯಸ್ಥ ಒಸಾಮು ಸುಜುಕಿ, ಮಾಜಿ ಕ್ರಿಕೆಟಿಗ ಆರ್‌. ಅಶ್ವಿನ್‌ ಸೇರಿದಂತೆ 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 7 ಜನರಿಗೆ ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಶಸ್ತಿ ಪಟ್ಟಿ ಹೊಂದಿದೆ. ಭಾರತಕ್ಕೆ ಮಾರುತಿ ಸುಝುಕಿ ಕಾರು ಪರಿಚಯಿಸಿದ ಜಪಾನ್‌ ಉದ್ಯಮಿ ಒಸಾಮು ಸುಜುಕಿ, ಮಲಯಾಳಂ ಸಾಹಿತ್ಯದ ದಂತಕಥೆ ಎಂಟಿ ವಾಸುದೇವನ್ ನಾಯರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.

30 ತೆರೆಮರೆ ಸಾಧಕರಿಗೆ ಪದ್ಮಶ್ರೀ: 2025ರ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಎಲೆಮರೆ ಕಾಯಿಯಂತಿದ್ದ 30 ಮಂದಿ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬ್ರೆಜಿಲ್‌ನ ಹಿಂದೂ ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ, ಭಾರತದ ಪರಂಪರೆಯ ಬಗ್ಗೆ ಸಾಹಿತ್ಯ ಕೃಷಿ ಮಾಡಿರುವ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ದಂಪತಿಗಳು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಕ್ತಿ ಗಾಯಕ ಭೇರು ಸಿಂಗ್ ಚೌಹಾಣ್, ಪತ್ರಕರ್ತ ಭೀಮ್ ಸಿಂಗ್ ಭವೇಶ್, ಕಾದಂಬರಿಕಾರ ಜಗದೀಶ್ ಜೋಶಿಲಾ, ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ನೀರ್ಜಾ ಭಟ್ಲಾ ಮತ್ತು ಕುವೈತ್‌ನ ಯೋಗಪಟು ಶೈಖಾ ಎಜೆ ಅಲ್ ಸಬಾ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ 100 ವರ್ಷದ ಲಿಬಿಯಾ ಲೋಬೋ, ಪುರುಷ ಪ್ರಧಾನವಾಗಿದ್ದ ಢಾಕ್ ವಾದ್ಯದಲ್ಲಿ 150 ಮಹಿಳೆಯರಿಗೆ ತರಬೇತಿ ನೀಡಿ ಕ್ರಾಂತಿ ಮಾಡಿದ ಪಶ್ಚಿಮ ಬಂಗಾಳದ ಢಾಕ್ ವಾದಕ ಗೋಕುಲ ಚಂದ್ರ ಡೇ (57), ಅಳಿವಿನಂಚಿನಲ್ಲಿದ್ದ ಮಾಹೇಶ್ವರಿ ಕ್ರಾಫ್ಟ್ ಅನ್ನು ಉಳಿಸುವುದಕ್ಕೋಸ್ಕರ ಮಧ್ಯಪ್ರದೇಶದ ಮಹೇಶ್ವರದಲ್ಲಿ ಕೈಮಗ್ಗ ಶಾಲೆಯನ್ನು ಪ್ರಾರಂಭಿಸಿ, ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದ ಸೈಲಿ ಹೋಳ್ಕರ್ (82) ಅವರು ಸಹ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲಾ ಅರಮನೆ ಗೊಂದಲ ಸೃಷ್ಟಿ: ಎಚ್‌.ವಿಶ್ವನಾಥ್

ಕನ್ನಡಿಗರ ಅಭಿಮಾನಕ್ಕೆ ನಾನು ಯಾವತ್ತೂ ಋಣಿ: ಮೂರು ವರ್ಷದ ಹಿಂದೆ ನರೇಂದ್ರ ಮೋದಿ ಅವರು ಪದ್ಮಶ್ರೀ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಎಂದು ದೇಶಕ್ಕೆ ಕರೆ ಕೊಟ್ಟಿದ್ದರು. ಆಗ ನಮ್ಮ ಮಾಧ್ಯಮ, ಚಿತ್ರರಂಗ ಸೇರಿದಂತೆ ಎಲ್ಲಾ ಕನ್ನಡಿಗರು ನನಗೆ ಪ್ರಶಸ್ತಿ ಕೊಡಬೇಕು ಎಂದು ಆಗ್ರಹಿಸಿದ್ದು ನೋಡಿ ಮನಸ್ಸು ತುಂಬಿ ಬಂದಿತ್ತು. ಕಳೆದ ಮೂರು ವರ್ಷದಿಂದ ಪ್ರತೀ ಸಲ ಕನ್ನಡಿಗರು ನನ್ನ ಹೆಸರು ಸೂಚಿಸುತ್ತಿದ್ದರು. ಪ್ರಶಸ್ತಿ ಬಾರದಿದ್ದಾಗ ಬೇಸರಗೊಂಡರು. ನಮ್ಮ ಕನ್ನಡಿಗರು ಸ್ವಾಭಿಮಾನಿಗಳು. ಆದರೂ ಅವರು ನನಗಾಗಿ ಪ್ರಶಸ್ತಿ ಕೇಳಿದರು. ತಮಗಾಗಿ ಪ್ರಶಸ್ತಿ ಕೊಡಿ ಎಂದು ಕೇಳಲಿಲ್ಲ. ನಮ್ಮ ಜನ ಬೇಸರಗೊಂಡಾಗ ನನಗೂ ಒಂಥರಾ ಅನ್ನಿಸಿತ್ತು. ಇವತ್ತು ನಿರಾಳವಾಗಿದೆ. ನಮ್ಮ ಜನರ ಪ್ರೀತಿ, ಅಭಿಮಾನಕ್ಕೆ ದೊರೆತ ಗೌರವ ಇದು. ನಾನು ಯಾವತ್ತೂ ಪ್ರಶಸ್ತಿ ಕುರಿತು ಆಸೆ ಇಟ್ಟುಕೊಂಡವನಲ್ಲ. ಆದರೆ ಕನ್ನಡಿಗರು ನನ್ನ ಮೇಲೆ ತೋರಿಸಿದ ಅಭಿಮಾನಕ್ಕೆ ಸದಾ ಋಣಿಯಾಗಿದ್ದೇನೆ ಎಂದರು ಹಿರಿಯ ನಟ ಅನಂತನಾಗ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್