
ನವದೆಹಲಿ (ಅ.4): ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಶುಕ್ರವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಐ ಲವ್ ಮೋದಿ ಅಂದರೆ ತೊಂದರೆ ಇಲ್ಲ, ಐ ಲವ್ ಮೊಹಮದ್ ಅಂದರೆ ಪ್ರಶ್ನೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, ಪ್ರಧಾನಿ ಮೋದಿಯೊಂದಿಗೆ ಪ್ರವಾದಿ ಮೊಹಮದ್ ಪೈಗಂಬರ್ ಅವರನ್ನು ಹೋಲಿಸಲು ಹೇಗೆ ಸಾಧ್ಯ ಎಂದು ಕಿಡಿಕಾರಿದ್ದಾರೆ.
"ಓವೈಸಿ ಪ್ರವಾದಿ ಮೊಹಮದ್ ಅವರನ್ನು ಮೋದಿಯೊಂದಿಗೆ ಹೇಗೆ ಹೋಲಿಸುತ್ತಾರೆ? ಇದಕ್ಕಾಗಿ ಅವರು ಕ್ಷಮೆಯಾಚಿಸಬೇಕು" ಎಂದು ಅಲ್ವಿ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರವಾದಿ ಮೊಹಮದ್ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ನಿರ್ಬಂಧಗಳನ್ನು ಓವೈಸಿ ಪ್ರಶ್ನಿಸಿದ್ದು, ಈ ದೇಶದಲ್ಲಿ 'ಐ ಲವ್ ಮೋದಿ' ಎಂದು ಹೇಳಲು ಅನುಮತಿ ಇದೆ, ಆದರೆ 'ಐ ಲವ್ ಮೊಹಮದ್' ಎನ್ನುವುದಕ್ಕೆ ನಿರ್ಬಂಧವಿದೆ ಎಂದಿದ್ದರು.
"ನಾವು ನಮ್ಮ ಮಸೀದಿಗೆ ಹೋಗಲು ಬಯಸಿದರೂ, ಅವರು ಅದನ್ನು ಕಸಿದುಕೊಳ್ಳಲು ಬಯಸುತ್ತಾರೆ. ಐ ಲವ್ ಮೋದಿ ಎಂದು ಒಬ್ಬರು ಹೇಳಬಹುದು, ಆದರೆ ಐ ಲವ್ ಮೊಹಮದ್ ಎಂದು ಹೇಳಲು ಸಾಧ್ಯವಿಲ್ಲ. ನೀವು ಎಲ್ಲಿಗೆ ಇಳಿಯಲು ಯೋಜಿಸುತ್ತಿದ್ದೀರಿ" ಎಂದು ಅವರು ಗುರುವಾರ ನಡೆದ ಸಭೆಯಲ್ಲಿ ಹೇಳಿದರು. ಸೆಪ್ಟೆಂಬರ್ 4 ರಂದು ನಡೆದ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ "ಐ ಲವ್ ಮೊಹಮದ್ ' ಎಂದು ಬರೆದ ಬಿಲ್ಬೋರ್ಡ್ಗಳನ್ನು ಹಾಕಿದ್ದ ಕಾರಣಕ್ಕೆ ಕಾನ್ಪುರದ ಪೊಲೀಸರು 24 ಜನರ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ವಿವಾದ ಭುಗಿಲೆದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ