
ನವದೆಹಲಿ(ಫೆ.03): ರಾಷ್ಟ್ರ ರಾಜಧಾನಿ ದೆಹಲಿಯ ಶೇ.56ರಷ್ಟುಜನರಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿದೆ ಎಂಬ ಸಂಗತಿ ಇತ್ತೀಚಿನ ಸೆರೋ ಸರ್ವೆಯಿಂದ ತಿಳಿದುಬಂದಿದೆ.
ಜ.15ರಿಂದ ಜ.23ರವರೆಗೆ 11 ಜಿಲ್ಲೆಗಳ 28,000 ಜನರಿಂದ ರಕ್ತದ ಮಾದರಿಯನ್ನು ಪಡೆದು ನಡೆಸಿದ 5ನೇ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ದೆಹಲಿ ಹರ್ಡ್ ಇಮ್ಯುನಿಟಿಯತ್ತ ಸಾಗುತ್ತಿರುವುದಕ್ಕೆ ಮತ್ತಷ್ಟು ಪುಷ್ಠಿ ದೊರಕಿದೆ.
ಆದರೆ, ಈಗಲೇ ಇದನ್ನು ನಿರ್ಧರಿಸಲು ಆಗದು. ಈ ಬಗ್ಗೆ ತಜ್ಞರು ಮಾತ್ರವೇ ಸ್ಪಷ್ಟಚಿತ್ರಣ ನೀಡಲು ಸಾಧ್ಯ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನ.11ರಂದು ಅತ್ಯಧಿಕ 8,593 ಪ್ರಕರಣಗಳು ದಾಖಲಾಗಿದ್ದವು. ಆದರೆ, ಸೋಮವಾರದಂದು ದೆಹಲಿಯಲ್ಲಿ ಹೊಸದಾಗಿ 121 ಪ್ರಕರಣಗಳು ಮಾತ್ರವೇ ಪತ್ತೆ ಆಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ