ಬಿಹಾರದ ಇಬ್ಬರು ಮಕ್ಕಳ ಖಾತೆಯಲ್ಲಿ 900 ಕೋಟಿ ಠೇವಣಿ

Published : Sep 16, 2021, 10:30 AM ISTUpdated : Sep 16, 2021, 11:05 AM IST
ಬಿಹಾರದ ಇಬ್ಬರು ಮಕ್ಕಳ ಖಾತೆಯಲ್ಲಿ 900 ಕೋಟಿ ಠೇವಣಿ

ಸಾರಾಂಶ

ಪುಟ್ಟ ಬಾಲಕರ ಖಾತೆಯಲ್ಲಿ ಸಾವಿರಗಳಲ್ಲ, ಲಕ್ಷಗಳಲ್ಲ, ಕೋಟಿ ಕೋಟಿ ರೂಪಾಯಿ ಬಿಹಾರದ ಮಕ್ಕಳ ಖಾತೆಯಲ್ಲಿ 900 ಕೋಟಿ ಠೇವಣಿ

ಬಿಹಾರ(ಸೆ.16): ಬಿಹಾರದಲ್ಲಿ ಇಬ್ಬರು ಬಾಲಕರ ಖಾತೆಯಲ್ಲಿ ಸುಮಾರು 900 ಕೋಟಿ ರೂಪಾಯಿ ಠೇವಣಿಯಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಕ್ಕಳ ಕುಟುಂಬ ಮಾತ್ರವಲ್ಲ ಇಡೀ ಗ್ರಾಮವೇ ಈ ಸುದ್ದಿ ಕೇಳಿ ಅಚ್ಚರಿಗೊಳಗಾಗಿದೆ. ಗುರುಚಂದ್ರ ವಿಶ್ವಾಸ್ ಹಾಗೂ ಅಸಿಟ್ ಕುಮಾರ್ ಎಂಬ ಇಬ್ಬರು ಬಾಲಕರ ಖಾತೆಯಲ್ಲಿ 900 ಕೋಟಿಗೂ ಅಧಿಕ ಹಣ ಠೇವಣಿಯಾಗಿದೆ. ಬಿಹಾರದ ಕಟಿಹಾರ್ ಜಿಲ್ಲೆಯ ಬಗೌರ ಪಂಚಾಯತ್‌ನ ಪಾಸ್ಟಿಯಾ ಗ್ರಾಮದಲ್ಲಿ ಈ ಬಾಲಕರು ವಾಸಿಸುತ್ತಿದ್ದಾರೆ.

ರಾಜ್ಯ ಸರ್ಕಾರವು ಶಾಲಾ ಸಮವಸ್ತ್ರಕ್ಕಾಗಿ ಠೇವಣಿ ಇಟ್ಟ ಮೊತ್ತದ ಬಗ್ಗೆ ತಿಳಿದುಕೊಳ್ಳಲು ಹುಡುಗರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಳೀಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ (CPC) ಭೇಟಿ ನೀಡಿದ್ದರು. ಆದರೆ ಭಾರೀ ಮೊತ್ತದ ಹಣದ ಬಗ್ಗೆ ತಿಳಿದುಕೊಂಡ ನಂತರ ಇಬ್ಬರೂ ಶಾಕ್ ಆಗಿದ್ದಾರೆ.

ಮೋದಿ, ದೀದಿ, ಅದಾರ್‌ಗೆ ಟೈಮ್ಸ್‌ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ!

ಹುಡುಗರು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ವಿಶ್ವಾಸ್ ಖಾತೆಯಲ್ಲಿ ₹ 60 ಕೋಟಿ ಇದ್ದರೆ, ಕುಮಾರ್ ಅವರ ಖಾತೆಯಲ್ಲಿ ಇದ್ದಕ್ಕಿದ್ದಂತೆ ₹ 900 ಕೋಟಿ ಇತ್ತು ಎಂದು ವರದಿಯಾಗಿದೆ.

ಶಾಖೆಯ ಮ್ಯಾನೇಜರ್ ಮನೋಜ್ ಗುಪ್ತಾ ಈ ವಿಷಯ ತಿಳಿದು ಅಚ್ಚರಿಗೊಂಡರು. ಹಾಗೆಯೇ ಹಣವನ್ನು ಡ್ನಿರಾ ಮಾಡುವುದನ್ನು ತಡೆ ಹಿಡಿದಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.

ಖಗರಿಯಾ ಜಿಲ್ಲೆಯಲ್ಲಿ ಇದೇ ರೀತಿ ರಂಜಿತ್ ದಾಸ್ ಎಂಬ ಖಾಸಗಿ ಟ್ಯೂಟರ್ ಖಾತೆಗೆ ಬ್ಯಾಂಕ್ ದೋಷದಿಂದಾಗಿ ₹ 5.5 ಲಕ್ಷ ಜಮೆಯಾಗಿತ್ತು. ಆದರೆ ಅವರಿಗೆ ನೋಟಿಸ್ ನೀಡಿದರೂ ಮೊತ್ತವನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಆ ವ್ಯಕ್ತಿ ಸರ್ಕಾರದಿಂದ ಕಳುಹಿಸಿದ ಹಣವನ್ನು ಸುಲಿಗೆ ಮಾಡುವ ತಂತ್ರ ಎಂದು ಭಾವಿಸಿದ್ದರು.

ಕೋವಿಡ್ -19 ಲಾಕ್‌ಡೌನ್‌ನಿಂದಾಗಿ, ಸರ್ಕಾರವು ನನ್ನ ಖಾತೆಗೆ ಮೊತ್ತವನ್ನು ಕಳುಹಿಸಿದೆ ಎಂದು ನಾನು ಭಾವಿಸಿದೆ. ಈ ದಿನಗಳಲ್ಲಿ, ಬಹಳಷ್ಟು ಬ್ಯಾಂಕಿಂಗ್ ವಂಚನೆಗಳು ನಡೆಯುತ್ತವೆ. ಹಾಗಾಗಿ ನಾನು ಹಣ ಹಿಂತಿರುಗಿಸಲಿಲ್ಲ. ನಾನು ಕೆಲವು ಅಗತ್ಯಗಳನ್ನು ಹೊಂದಿದ್ದರಿಂದ ಸ್ವಲ್ಪ ಖರ್ಚು ಮಾಡಿದೆ. ನನಗೆ ಬೇಕಾದಾಗ ಸರ್ಕಾರವು ಸ್ವಲ್ಪ ಹಣವನ್ನು ಕಳುಹಿಸಿರುವುದಕ್ಕೆ ನನಗೆ ಸಂತೋಷವಾಯಿತು ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ