ವಿಪಕ್ಷ ನಾಯಕರ ರೈತ ಭೇಟಿಗೆ ತಡೆ: ಡಿಎಂಕೆ, ಎಸ್‌ಎಡಿ, ಟಿಎಂಸಿಯ 15 ಸದಸ್ಯರಿದ್ದ ನಿಯೋಗ!

Published : Feb 05, 2021, 08:10 AM IST
ವಿಪಕ್ಷ ನಾಯಕರ ರೈತ ಭೇಟಿಗೆ ತಡೆ: ಡಿಎಂಕೆ, ಎಸ್‌ಎಡಿ, ಟಿಎಂಸಿಯ 15 ಸದಸ್ಯರಿದ್ದ ನಿಯೋಗ!

ಸಾರಾಂಶ

ವಿಪಕ್ಷ ನಾಯಕರ ರೈತ ಭೇಟಿಗೆ ತಡೆ| ಗಾಜಿಪುರಕ್ಕೆ ತೆರಳುತ್ತಿದ್ದ ವಿಪಕ್ಷ ಸಂಸದರಿಗೆ ಪೊಲೀಸರ ತಡೆ| ಡಿಎಂಕೆ, ಎಸ್‌ಎಡಿ, ಟಿಎಂಸಿಯ 15 ಸದಸ್ಯರಿದ್ದ ನಿಯೋಗ

ನವದೆಹಲಿ(ಫೆ.05): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ವಿಪಕ್ಷಗಳ ಸಂಸದರ ಆಕಾಂಕ್ಷೆಗೆ ದಿಲ್ಲಿ ಪೊಲೀಸರು ತಣ್ಣೀರೆರಚಿದ್ದಾರೆ.

ಇತ್ತೀಚೆಗಷ್ಟೇ ಗಾಜಿಪುರಕ್ಕೆ ಭೇಟಿ ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಅವರು ಪ್ರತಿಭಟನಾಕಾರರಿಗೆ ನೈತಿಕ ಸ್ಥೈರ್ಯ ತುಂಬಿದ್ದರು. ಅದೇ ರೀತಿ ಗುರುವಾರ ವಿಪಕ್ಷಗಳಾದ ಶಿರೋಮಣಿ ಅಕಾಲಿದಳ, ಡಿಎಂಕೆ, ಎಸ್‌ಸಿಪಿ ಹಾಗೂ ತೃಣಮೂಲ ಸೇರಿದಂತೆ 10 ಪಕ್ಷಗಳ 15 ಸದಸ್ಯರು ಗಾಜಿಪುರಕ್ಕೆ ತೆರಳಿದ್ದರು. ಆದರೆ ತಮ್ಮನ್ನು ದಾರಿಮಧ್ಯೆಯೇ ತಡೆದ ಪೊಲೀಸರು, ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟದಂತೆ ತಡೆದರು ಎಂದು ವಿಪಕ್ಷಗಳ ಸದಸ್ಯರು ದೂರಿದ್ದಾರೆ.

ವಿಪಕ್ಷಗಳ ಸಂಸದರ ಈ ನಿಯೋಗದಲ್ಲಿ ಎಸ್‌ಎಡಿ ಸಂಸದೆ ಹರ್‌ಸಿಮ್ರತ್‌ ಕೌರ್‌ ಬಾದಲ್‌, ಸುಪ್ರಿಯಾ ಸುಳೆ, ಕನಿಮೋಳಿ, ತಿರುಚಿ ಶಿವಾ, ಸೌಗತಾ ರಾಯ್‌ ಸೇರಿದಂತೆ ಇನ್ನಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್