
ಆಗ್ರಾ/ಪ್ರಯಾಗ್ರಾಜ್(ಮೇ.09): ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್ಮಹಲ್ನಲ್ಲಿ ಬೀಗ ಹಾಕಿ ಮುಚ್ಚಿರುವ 22 ಕೋಣೆಗಳಿದ್ದು, ಬೀಗ ತೆರೆಸಬೇಕು. ಆ ಕೋಣೆಗಳಲ್ಲಿ ಹಿಂದು ವಿಗ್ರಹ ಹಾಗೂ ಧರ್ಮಗ್ರಂಥಗಳನ್ನು ಬಚ್ಚಿಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಬೀಗ ತೆರೆಯಲು ಭಾರತೀಯ ಪುತಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು. ಕೋಣೆಗಳನ್ನು ಪರಿಶೀಲನೆ ನಡೆಸಲು ಹಾಗೂ ಹಿಂದು ವಿಗ್ರಹ, ಧರ್ಮಗ್ರಂಥಗಳ ಕುರುಹು ಹುಡುಕಲು ಸಮಿತಿಯೊಂದನ್ನು ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅಯೋಧ್ಯೆ ಜಿಲ್ಲಾ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ| ರಜನೀಶ್ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
‘ತಾಜ್ಮಹಲ್ ಕುರಿತು ಪುರಾತನ ವಿವಾದವೊಂದಿದೆ. ಅಲ್ಲಿ ಬೀಗ ಹಾಕಲ್ಪಟ್ಟ20 ಕೋಣೆಗಳು ಇದ್ದು, ಅಲ್ಲಿಗೆ ಹೋಗಲು ಯಾರನ್ನೂ ಬಿಡುತ್ತಿಲ್ಲ. ಆ ಕೋಣೆಗಳಲ್ಲಿ ಹಿಂದು ವಿಗ್ರಹ, ಧರ್ಮಗ್ರಂಥಗಳು ಇವೆ ಎನ್ನಲಾಗಿದೆ. ಆ ಬಗ್ಗೆ ಪರಿಶೀಲನೆ ನಡೆಸಲಿ ಎಂದು ಅರ್ಜಿ ಸಲ್ಲಿಸಿದ್ದೇನೆ. ಬೀಗ ತೆರೆದು ಕೊಠಡಿ ವೀಕ್ಷಿಸಿ, ವಿವಾದಕ್ಕೆ ತೆರೆ ಎಳೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಡಾ| ರಜನೀಶ್ ತಿಳಿಸಿದ್ದಾರೆ.
ವಿವಾದಗಳ ಮಹಲ್
- ಅದು ತಾಜ್ ಮಹಲ್ ಅಲ್ಲ, ತೇಜೋ ಮಹಲ್ ಎಂಬ ಹಲವು ವಾದಗಳಿವೆ
- ತಾಜ್ಮಹಲ್ ಮೂಲತಃ ಶಿವನ ದೇಗುಲ ಎಂದು 2015ರರಲ್ಲಿ 6 ವಕೀಲರು ಅರ್ಜಿ ಸಲ್ಲಿಸಿದ್ದರು
- ಈ ವಾದವನ್ನು 2017ರಲ್ಲಿ ಬಿಜೆಪಿಯ ಪ್ರಮುಖ ನಾಯಕ ವಿನಯ್ ಕಟಿಹಾರ್ ಪುರಸ್ಕರಿಸಿದ್ದರು
- ತಾಜ್ಮಹಲ್ಗೆ ತೆರಳಿ ಹಿಂದು ಕುರುಹು ಶೋಧಿಸಲು ಯೋಗಿ ಆದಿತ್ಯನಾಥ್ಗೂ ಕೋರಿದ್ದರು
- ತಾಜ್ಮಹಲ್ ಅನ್ನು ಶಹಜಹಾನ್ ಕಟ್ಟಿಸಿಲ್ಲ ಎಂದು ಕಾರವಾರ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದರು
- ರಾಜ ಜಯಸಿಂಹನಿಂದ ತಾಜ್ಮಹಲ್ ಅನ್ನು ಶಹಜಹಾನ್ ಖರೀದಿಸಿದ್ದ ಎಂದು 2019ರಲ್ಲಿ ತಿಳಿಸಿದ್ದರು
- ಇತಿಹಾಸಕಾರರು ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ವಾದಗಳನ್ನೂ ಹಲವು ಬಾರಿ ತಿರಸ್ಕರಿಸಿದೆ
- ಮೊಘಲ್ ಸಾಮ್ರಾಟ ಶಹಜಹಾನ್ ಕಟ್ಟಿಸಿದ್ದ ಸ್ಮಾರಕ ಎಂದು 2018ರಲ್ಲಿ ಕೋರ್ಚ್ಗೂ ಇಲಾಖೆ ತಿಳಿಸಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ