74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?

Published : May 23, 2026, 05:51 AM IST
rajya sabha

ಸಾರಾಂಶ

ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಕರ್ನಾಟಕದ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಆದರೆ, ಕಳೆದ 74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಕೇವಲ 11 ಆಗಿದ್ದು, ಇದು ರಾಜಕೀಯ ಪಕ್ಷಗಳಿಂದ ಮಹಿಳೆಯರ ನಿರಂತರ ಕಡೆಗಣನೆಯನ್ನು ತೋರಿಸುತ್ತದೆ.

ಡೆಲ್ಲಿ ಮಂಜು

ನವದೆಹಲಿ: ಸಂವಿಧಾನ ರೂಪಿತ ದೇಶದ ಶಾಶ್ವತ ಸದನ ರಾಜ್ಯಸಭೆಗೆ ಚುನಾವಣೆ ಘೋಷಣೆಯಾಗಿದೆ. ದ್ವೈವಾರ್ಷಿಕ (ಎರಡು ವರ್ಷ) ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗ ಪ್ರಕಟಿಸಿದೆ. ಕರ್ನಾಟಕವೂ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದರೆ ಕಳೆದ 74 ವರ್ಷದಲ್ಲಿ ಕರ್ನಾಟಕದಿಂದ ಆಯ್ಕೆ ಆದ ಮಹಿಳಾ ಸದಸ್ಯರು ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿದ್ದಾರೆ.

ಕರ್ನಾಟಕದಿಂದ ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದ ಈರಣ್ಣ ಕಡಾಡಿ, ಕೆ.ನಾರಾಯಣ್ ಅವರ ಅವಧಿ ಜೂನ್ 25ಕ್ಕೆ ಅಂತ್ಯವಾಗಲಿದೆ. 28 ದಿನಗಳ ಕಾಲಾವಕಾಶ ನೀಡಿ ಅಗತ್ಯವಾದರೆ ಜೂನ್ 18ಕ್ಕೆ ಚುನಾವಣೆ ನಡೆಸಲಾಗುತ್ತದೆ ಎಂದು ವೇಳಾಪಟ್ಟಿಯಲ್ಲಿ ಆಯೋಗ ಪ್ರಕಟಿಸಿದೆ.

ಆಯ್ಕೆ ಆಗಿದ್ದು 11 ಮಂದಿ ಮಾತ್ರ

ಸೋಜಿಗದ ವಿಷಯ ಅಂದರೆ ಭಾರತ ಸ್ವತಂತ್ರ ಪಡೆದು ರಾಜ್ಯಸಭೆಗೆ ಚುನಾವಣೆ ಶುರುವಾದ ಸಮಯದಿಂದ ಅಂದರೆ 1952ರಿಂದ ಇಂದಿನವರೆಗೆ (74 ವರ್ಷಗಳಲ್ಲಿ) ಕರ್ನಾಟಕದಿಂದ ಮಹಿಳೆಯರು ಸಂಸದರಾಗಿ ಆಯ್ಕೆ ಆಗಿದ್ದು 11 ಮಂದಿ ಮಾತ್ರ.

ರಾಜಕೀಯ ಪಕ್ಷಗಳು ರಾಜ್ಯಸಭಾ ಚುನಾವಣೆ ಬಂದಾಗ ಮಹಿಳೆಯರ ಕಡೆಗಣನೆ ಮಾಡಿಕೊಂಡೇ ಬಂದಿವೆ. 245 ಸಂಖ್ಯಾಬಲ ಇರುವ ರಾಜ್ಯಸಭೆಯಲ್ಲಿ 42 ಮಂದಿ ಮಹಿಳಾ ಸಂಸದರು ಇದ್ದಾರೆ. ಅಂದರೆ ಶೇಕಡ 17ರಷ್ಟು ಮಾತ್ರ ಮಹಿಳಾ ಸಂಸದರ ಸಂಖ್ಯೆ ಇದೆ. 1952ರಿಂದ 2026ರ ತನಕ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದಿಂದ ಐವರು, ಬಿಜೆಪಿ ಪಕ್ಷದಿಂದ ಇಬ್ಬರು, ಜನತಾ ದಳ ಪಕ್ಷದಿಂದ ಇಬ್ಬರು ಮಹಿಳೆಯರು ಸಂಸದರಾಗಿದ್ದಾರೆ. ಅದರಲ್ಲೂ ಮೈಸೂರು ರಾಜ್ಯ ಕರ್ನಾಟಕವಾದ ಬಳಿಕ 1974ರಿಂದ ಈತನಕ 9 ಮಂದಿ ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಮೈಸೂರು ರಾಜ್ಯ (ಕಾಂಗ್ರೆಸ್ ಪಕ್ಷ)

1.ಅನ್ನಪೂರ್ಣಾ ದೇವಿ ತಿಮ್ಮಾರೆಡ್ಡಿ 1958/1964

2.ವೈಲೆಟ್ ಹರಿ ಆಳ್ವಾ 1960/1966

ಕರ್ನಾಟಕ ರಾಜ್ಯ (ಕಾಂಗ್ರೆಸ್ ಪಕ್ಷ)

1.ಮಾರ್ಗೇಟ್ ಆಳ್ವಾ- 1974/1980/1986/1992

2.ಮೋನಿಕಾ ದಾಸ್- 1980

3.ತಾರಾದೇವಿ ಸಿದ್ಧಾರ್ಥ್‌- 1990

4. ಬಿಂಬಾ ರಾಯ್ಕರ್- 2000

5.ಪ್ರೇಮಾ ಕಾರ್ಯಪ್ಪ- 2002

(ಜನತಾಪಕ್ಷ/ಜನತಾ ದಳ)

1.ಸರೋಜಿನಿ ಮಹಿಷಿ- 1983/ 1984

2.ಲೀಲಾದೇವಿ ಆರ್ ಪ್ರಸಾದ್ 1996 (10 ದಿನ)

ಬಿಜೆಪಿ

1.ಹೇಮಾ ಮಾಲಿನಿ -2011

2.ನಿರ್ಮಲಾ ಸೀತಾರಾಮನ್ - 2016/2022

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೆಇಇ, ನೀಟ್‌ ಪ್ರವೇಶ ಪರೀಕ್ಷೆ ರದ್ದು ಆಗುತ್ತಾ? ಕೇಂದ್ರ ಸರ್ಕಾರದ ಮುಂದೆ ಹೊಸ ಪ್ರಸ್ತಾಪ
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಪೋಷಕರಿಗೆ ಆತಂಕ; ತಂದೆ ಹೇಳಿದ್ದೇನು?