
ಭುವನೇಶ್ವರ(ಆ.19): ಆನ್ಲೈನ್ ತರಗತಿಯ ವೇಳೆ ಬೆಟ್ಟದ ಮೇಲಿಂದ ಬಿದ್ದು 13 ವರ್ಷದ ಆದಿವಾಸಿ ಬಾಲಕ ಮೃತ ಪಟ್ಟಿರುವ ದುರ್ಘಟನೆ ಓಡಿಶಾ ರಾಜ್ಯದ ರಾಯಘಡ ಜಿಲ್ಲೆಯ ಪದ್ಮಾಪುರದಲ್ಲಿ ನಡೆದಿದೆ.
ಅಂದ್ರಿಯಾ ಜಗರಂಗ ಮೃತ ದುರ್ದೈವಿ. ಆನ್ಲೈನ್ ತರಗತಿ ಕೇಳಲು ಇಂಟರ್ನೆಟ್ಗಾಗಿ ಬಾಲಕ ಬೆಟ್ಟಹತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಇಂಟರ್ನೆಟ್ ಸಂಪರ್ಕಕ್ಕಾಗಿ ಬೆಟ್ಟದ ಮೇಲಿದ್ದ ಬಂಡೆಯ ಮೇಲೆ ಏರಿ ಕುಳಿತಿದ್ದ.
ಈ ಸಮಯದಲ್ಲಿ ಬಂಡೆ ಜಾರಿದ್ದರಿಂದ ಬಾಲಕ ಬೆಟ್ಟದಿಂದ ಉರುಳಿ ಬಿದ್ದಿದ್ದಾನೆ. ಆತನ ಎಡ ಕಾಲಿನ ಮೇಲೆ ಬಂಡೆ ಬಿದ್ದು ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆತ ಸಾವೀಗೀಡಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ