
ಶ್ರೀನಗರ(ಅ.28): ಜಮ್ಮು-ಕಾಶ್ಮೀರ ಹಾಗೂ ಲಡಾಖ್ನಲ್ಲಿ ಇನ್ನು ಮುಂದೆ ಹೊರಗಿನವರೂ ಜಮೀನು ಖರೀದಿಸಬಹುದು. ಈ ಕುರಿತ ಅತ್ಯಂತ ಮಹತ್ವದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಈವರೆಗೆ ‘ಜಮ್ಮು-ಕಾಶ್ಮೀರದ ‘ಕಾಯಂ ನಿವಾಸಿ’ ಆದವರು ಮಾತ್ರ ಇಲ್ಲಿನ ಜಮೀನು ಖರೀದಿಸಬಹುದು’ ಎಂಬ ಕಾನೂನು ಇತ್ತು. ಬೇರೆ ರಾಜ್ಯದವರಿಗೆ ಭೂಮಿ ಕೊಳ್ಳುವ ಅವಕಾಶ ಇರಲಿಲ್ಲ. ಆದರೆ ಕಳೆದ ವರ್ಷ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿ ಹಾಗೂ ಪ್ರತ್ಯೇಕ ಲಡಾಖ್ ಸೃಷ್ಟಿಸಿದ ಸಂದರ್ಭದಲ್ಲಿ ಈ ಅಂಶವನ್ನೂ ಕೈಬಿಡಲಾಗಿತ್ತು. ಇದು ಈಗ ಕಾರ್ಯರೂಪಕ್ಕೆ ಬರುವಂತಾಗಲು ಕೇಂದ್ರ ಸರ್ಕಾರವು ‘ಜಮ್ಮು-ಕಾಶ್ಮೀರ ನೋಂದಣಿ (ಕೇಂದ್ರೀಯ ಕಾನೂನುಗಳ ಅಳವಡಿಕೆ)- 3ನೇ ಆದೇಶ, 2020’ ಅಧಿಸೂಚನೆ ಜಾರಿ ಮಾಡಿದೆ. ತಕ್ಷಣದಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ.
ಸರ್ಕಾರದ ಅಧಿಸೂಚನೆಗೆ ಕಾಶ್ಮೀರದಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಇದನ್ನು ವಿರೋಧಿಸಿದ್ದು. ‘ಜಮ್ಮು-ಕಾಶ್ಮೀರ ಮಾರಾಟಕ್ಕಿದೆ. ಇಲ್ಲಿನ ಬಡವರು ಹಾಗೂ ಸಣ್ಣ ಹಿಡುವಳಿದಾರರು ಹೊಸ ಕಾನೂನಿನಿಂದ ತೊಂದರೆ ಅನುಭವಿಸಲಿದ್ದಾರೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ