
ಮುಂಬೈ(ಜೂ.28): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಿರುವ ಶಿವಸೇನೆ ಮುಖಂಡ ಏಕನಾಥ ಶಿಂಧೆ ಬಣದ ಪ್ರಮುಖ ಮುಖಂಡ, ಶಾಸಕ ದೀಪಕ್ ಕೇಸರಕರ್ ಅವರು ತಮ್ಮದು ಬಂಡಾಯವಲ್ಲ. ಶಿವಸೇನೆಯ ಆತ್ಮಗೌರವ ಕಾಯುವ ಹೋರಾಟ ಎಂದಿದ್ದಾರೆ.
ಸೋಮವಾರ ಸಂಜೆ ಬಹಿರಂಗ ಪತ್ರ ಬರೆದಿರುವ ಕೇಸರಕರ್, ‘ನಮ್ಮದು ಬಂಡಾಯವಲ್ಲ. ಶಿವಸೇನೆಯ ಆತ್ಮಗೌರವ ಕಾಪಾಡಲು ನಡೆದಿರುವ ಹೋರಾಟ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ನಾವು ಉದ್ಧವ್ ಠಾಕ್ರೆ ಅವರನ್ನು ಕೋರುತ್ತೇವೆ. ಈ ಮೈತ್ರಿಯು ಮಹಾರಾಷ್ಟ್ರದ ಜನಾದೇಶ ಕೂಡ ಆಗಿದೆ’ ಎಂದಿದ್ದಾರೆ.
ಇದೇ ವೇಳೆ ಠಾಕ್ರೆ ಆಪ್ತ ಸಂಜಯ ರಾವುತ್ ವಿರುದ್ಧ ಹರಿಹಾಯ್ದಿರುವ ಅವರು, ‘ರಾವುತ್ ಎನ್ಸಿಪಿಯ ನೀಲಿಗಣ್ಣಿನ ಹುಡುಗ. ಶರದ್ ಪವಾರ್ ಜತೆ ಸೇರಿ ಶಿವಸೇನೆ ಮುಗಿಸಲು ಹೊರಟಿದ್ದಾರೆ. ನೀವು (ರಾವುತ್) ಶಿವಸೇನೆಯನ್ನು ಬಿಜೆಪಿಯಿಂದ ದೂರ ಸರಿಸುವಲ್ಲಿ ಯಶ ಕಾಣಬಹುದು. ಆದರೆ ಹಿಂದುತ್ವದಿಂದ ದೂರ ಸರಿಸಲು ಯತ್ನಿಸಿದರೆ ನಾವು ಹೇಗೆ ಸಹಿಸಬಲ್ಲೆವು? ಜಯ ಯಾವತ್ತೂ ನಮ್ಮದೇ’ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ