ಸ್ವಂತ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿಗಿಲ್ಲ ಅವಕಾಶ!

Kannadaprabha News   | Asianet News
Published : Oct 16, 2020, 09:17 AM IST
ಸ್ವಂತ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿಗಿಲ್ಲ ಅವಕಾಶ!

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸ್ವ ಕ್ಷೇತ್ರದಲ್ಲೇ ನಿರಾಕರಣೆ ಎದುರಾಗಿದೆ. ಶಾಲೆ ಉದ್ಘಾಟನೆಗೆ ಅವಕಾಶ ನಿರಾಕರಿಸಲಾಗಿದೆ.

ತಿರುವನಂತಪುರಂ (ಅ.16): ಸ್ವಂತ ಕ್ಷೇತ್ರ ವಯನಾಡ್‌ನಲ್ಲಿ ಶಾಲೆಯೊಂದರ ಉದ್ಘಾಟನೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಅವಕಾಶ ನಿರಾಕರಿಸಲಾಗಿದೆ. ವಯನಾಡ್‌ನ ಮುಂಡೇರಿ ಸರ್ಕಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಗುರುವಾರ ನಿಗದಿಯಾಗಿತ್ತು. 

ಯೋಜನೆ ಪ್ರಕಾರ ಬೆಳಿಗ್ಗೆ 10.15ಕ್ಕೆ ಶಾಲೆ ಉದ್ಘಾಟನೆಯಾಗುವುದಿತ್ತು. ಆದರೆ ಎಡಪಕ್ಷಗಳ ಆಡಳಿತ ಇರುವ ಸ್ಥಳೀಯಾಡಳಿತ ಸಂಸ್ಥೆ ಕಡೇ ಘಳಿಗೆಯಲ್ಲಿ ಅನುಮತಿ ನಿರಾಕರಿಸಿದೆ.

 ಉದ್ಘಾಟನೆ ಸಂಬಂಧ ರಾಹುಲ್‌ ಅವರ ಸಮಯ ಕೋರಿ ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷ ಪತ್ರ ಬರೆದಿದ್ದರು.

ರಾಹುಲ್ ಬಗ್ಗೆ ತರೂರ್ ಹೊಸ ಬುಕ್- ಡಿಕ್ಷನರಿಯಲ್ಲೂ ಸಿಗಲ್ಲ ಅರ್ಥ? .

ಅಂತೆಯೇ ಅ.15ರಂದು ರಾಹುಲ್‌ ತಮ್ಮ ಸಮಯ ನೀಡಿದ್ದರು. ಹೀಗಾಗಿ ಗುರುವಾರ ವರ್ಚುವಲ್‌ ಕಾನ್ಫರೆನ್ಸ್‌ ಮೂಲಕ ರಾಹುಲ್‌ ಗಾಂಧಿ ಉದ್ಘಾಟನೆ ಮಾಡವವರಿದ್ದರು. ಆದರೆ ಶಿಷ್ಟಾಚಾರ ಪಾಲನೆ ಹಾಗೂ ರಾಜ್ಯ ಶಿಕ್ಷಣ ಮಂತ್ರಿಗೆ ಈ ಬಗ್ಗೆ ಮಾಹಿತಿ ನೀಡಬೇಕಿರುವುದರಿಂದ ಸ್ಥಳಿಯಾಡಳಿತ ಕಾರ್ಯಕ್ರಮ ರದ್ದು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?