ಹಾರಲು ಅನುಮತಿ ಬೇಕಿಲ್ಲ ಟ್ವೀಟ್‌ : ಶಶಿ ತರೂರ್‌ ಬಿಜೆಪಿ ಸೇರಬಹುದೇ ಎಂಬ ಊಹಾಪೋಹ

Published : Jun 26, 2025, 04:37 AM IST
Congress MP Shashi Tharoor (Photo/ ANI)

ಸಾರಾಂಶ

ಕೆಲವರಿಗೆ ಮೋದಿ ಮೊದಲು. ದೇಶ ನಂತರ ಎಂದು ತಮ್ಮ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಟಿ ಬೀಸುತ್ತಲೇ ಗೂಢಾರ್ಥದ ಟ್ವೀಟ್‌ ಮಾಡಿರುವ ಸಂಸದ ಶಶಿ ತರೂರ್‌, ಪಕ್ಷಿಯ ಚಿತ್ರವೊಂದನ್ನು ಹಾಕಿ ಹಾರಲು ಅನುಮತಿ ಬೇಕಿಲ್ಲ. ರೆಕ್ಕೆ ನಿನ್ನದು. ಆಕಾಶ ಯಾರ ಸೊತ್ತೂ ಅಲ್ಲ ಎಂದು ಬರೆದಿದ್ದಾರೆ.

ನವದೆಹಲಿ: ಕೆಲವರಿಗೆ ಮೋದಿ ಮೊದಲು. ದೇಶ ನಂತರ ಎಂದು ತಮ್ಮ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಟಿ ಬೀಸುತ್ತಲೇ ಗೂಢಾರ್ಥದ ಟ್ವೀಟ್‌ ಮಾಡಿರುವ ಸಂಸದ ಶಶಿ ತರೂರ್‌, ಪಕ್ಷಿಯ ಚಿತ್ರವೊಂದನ್ನು ಹಾಕಿ ಹಾರಲು ಅನುಮತಿ ಬೇಕಿಲ್ಲ. ರೆಕ್ಕೆ ನಿನ್ನದು. ಆಕಾಶ ಯಾರ ಸೊತ್ತೂ ಅಲ್ಲ ಎಂದು ಬರೆದಿದ್ದಾರೆ. ಇದರ ಬೆನ್ನಲ್ಲೇ ಅವರು ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಬಹುದೇ ಎಂಬ ಊಹಾಪೋಹ ಪುನಃ ಸೃಷ್ಟಿಯಾಗಿದೆ.

ಆಪರೇಶನ್‌ ಸಿಂದೂರ ಸೇರಿದಂತೆ ದೇಶಕ್ಕೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಹಾಗೂ ಕೆಲವು ಕೇಂದ್ರ ಸರ್ಕಾರದ ನೀತಿ ನಿರೂಪಣೆಗಳ ವಿಚಾರದಲ್ಲಿ ತರೂರ್‌ ಅವರು ಮೋದಿ ಸರ್ಕಾರಕ್ಕೆ ಬೆಂಬಲಿಸಿದ್ದರು. ಇದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಖರ್ಗೆ ಬುಧವಾರ ಬೆಳಗ್ಗೆ, ‘ನಮಗೆ ದೇಶ ಮೊದಲಾದರೆ ಕೆಲವರಿಗೆ ಮೋದಿ ಮೊದಲು’ ಎಂದು ಟಾಂಗ್ ನೀಡಿದ್ದರು.

ಇತ್ತೀಚೆಗೆ ತರೂರ್ ಇಷ್ಟೆಲ್ಲ ವಿದ್ಯಮಾನಗಳು ನಡೆದಿದ್ದರೂ, ‘ನಾನು ಕಾಂಗ್ರೆಸ್‌ ಬಿಡುವ ಪ್ರಶ್ನೆಯೇ ಇಲ್ಲ’ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..