
ಭುವನೇಶ್ವರ(ಜೂ.29): ಮದುವೆಯ ಊಟಕ್ಕೆ ಮಟನ್ ಮಾಡಿಲ್ಲ ಎಂಬ ಕಾರಣಕ್ಕೆ ಜಗಳ ತೆಗೆದು ಮದುವೆಯನ್ನೇ ರದ್ದುಪಡಿಸಿದ್ದ ವರನೊಬ್ಬ, ಮನೆಗೆ ತೆರಳುವ ಮುನ್ನ ಇನ್ನೊಬ್ಬ ಮಹಿಳೆಯ ಜೊತೆ ಮದುವೆ ಆಗಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಜೈಪುರದ ಕಿಯೋಝರ್ ಜಿಲ್ಲೆಯ ನಿವಾಸಿಯಾದ ಪಾತ್ರ ಎಂಬಾತ ನಿಶ್ಚಯದಂತೆ ಸುಕಿಂದಾ ಗ್ರಾಮದ ಯುವತಿಯನ್ನು ಮದುವೆ ಆಗಬೇಕಿತ್ತು. ಮಧ್ಯಾಹ್ನದ ವೇಳೆಗೆ ಮದುವೆ ದಿಬ್ಬಣ ಆಗಮಿಸಿದ್ದರಿಂದ ಗಂಡಿನ ಮನೆಯವರನ್ನು ನೇರವಾಗಿ ಊಟಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಊಟಕ್ಕೆ ಮಟನ್ ಅನ್ನು ಮಾಡದೇ ಇದ್ದಿದ್ದಕ್ಕೆ ಜಗಳ ತೆಗೆದ ವರ ಮದುವೆಯನ್ನು ರದ್ದುಗೊಳಿಸಿದ್ದಾನೆ.
ಬಿರಿಯಾನಿ ಊಟದ ನಂತರ ಕೈ ತೊಳಿತಾ ಇರ್ಲಿಲ್ವಂತೆ ಅಣ್ಣಾವ್ರು! ಯಾಕಂತೆ ಗೊತ್ತಾ?
ಮೂಲಗಳ ಪ್ರಕಾರ ಮದುವೆಗೂ ಮುನ್ನ ನಡೆದ ವರನ ಕಡೆಯವರಿಗೆ ಮದುವೆ ನಡೆಯುವ ಗ್ರಾಮದಲ್ಲಿ ಔತಣಕೂಟ ಆಯೋಜನೆ ಮಾಡಲಾಗಿತ್ತು. ಈ ಔತಣಕೂಟದಲ್ಲಿ ಮಟನ್ ಅಡುಗೆ ಮಾಡಿಸುವಂತೆ ವರನ ಕಡೆಯವರು ಕೇಳಿದ್ದರು. ಆದರೆ ವಧುವಿನ ಕಡೆಯವರು ಮಟನ್ ಅಡುಗೆ ಮಾಡಿಸಿರಲಿಲ್ಲ. ಇದೇ ಕಾರಣಕ್ಕೆ ಆಕ್ರೋಶಗೊಂಡ ರಾಮಕಾಂತ್ ಪತ್ರಾ ವಧುವಿನ ಸಂಬಂಧಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ವಧುವಿನ ಕುಟುಂಬ ಸದಸ್ಯರು ಮನವಿ ಮಾಡಿದರೂ, ಆತ ಸಮಾಧಾನಗೊಳ್ಳಲಿಲ್ಲ. ಅಲ್ಲದೆ ಮದುವೆಯನ್ನೇ ಮುರಿದುಕೊಂಡು, ಹೋಗಿದ್ದಾನೆ.
ನಾನ್ವೆಜ್ ಪ್ರಿಯರೇ ಎಚ್ಚರ: ಕುರಿ ಮಾಂಸದೊಂದಿಗೆ ಮಿಕ್ಸ್ ಆಗ್ತಿದೆ ದನದ ಮಾಂಸ..!
ಬಳಿಕ ಆತ ತನ್ನ ಸಂಬಂಧಿಕರ ಮನೆಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದ. ಸಂಬಂಧಿಕರ ಮಾತಿನಂತೆ ತಮ್ಕಾ ಪೊಲೀಸ್ ವ್ಯಾಪ್ತಿಯಲ್ಲಿ ಫುಲಾಜರಾ ಪ್ರದೇಶದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ