ಸೇನೆ ಕ್ಯಾಂಟೀನ್‌ಗಳಲ್ಲಿ ವಿದೇಶಿ ವಸ್ತು ನಿಷೇಧ!

Published : Oct 25, 2020, 09:27 AM ISTUpdated : Oct 25, 2020, 09:31 AM IST
ಸೇನೆ ಕ್ಯಾಂಟೀನ್‌ಗಳಲ್ಲಿ ವಿದೇಶಿ ವಸ್ತು ನಿಷೇಧ!

ಸಾರಾಂಶ

ಸೇನೆ ಕ್ಯಾಂಟೀನ್‌ಗಳಲ್ಲಿ ವಿದೇಶಿ ವಸ್ತು ನಿಷೇಧ| ವಿದೇಶಿ ಸ್ಕಾಚ್‌ ಸೇರಿ ಫಾರಿನ್‌ ವಸ್ತುಗಳ ಆಮದಿಗೆ ನಿರ್ಬಂಧ| ಚೀನಾ ಮೇಲೆ ಮತ್ತೊಂದು ಪ್ರಹಾರ

ನವದೆಹಲಿ(ಅ.25): ದೇಶಾದ್ಯಂತ ಇರುವ 4000ಕ್ಕೂ ಹೆಚ್ಚು ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ವಿದೇಶಿ ಸ್ಕಾಚ್‌ ಸೇರಿದಂತೆ ಯಾವುದೇ ವಿದೇಶಿ ವಸ್ತುಗಳು ಮಾರಾಟಕ್ಕೆ ಇರುವುದಿಲ್ಲ. ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ವಿದೇಶಿ ವಸ್ತುಗಳ ಮಾರಾಟ ನಿಷೇಧಿಸಿದೆ. ಗಡಿಯಲ್ಲಿ ತಂಟೆ ತೆಗೆದಿರುವ ಚೀನಾ ವಿರುದ್ಧ ನಡೆಸಲಾದ ಮತ್ತೊಂದು ಪರೋಕ್ಷ ಪ್ರಹಾರ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಸೇನೆಯ ಹಾಲಿ ಮತ್ತು ನಿವೃತ್ತ ಯೋಧರ ಕುಟುಂಬಗಳಿಗೆ ಅಗತ್ಯವಾದ ವಸ್ತುಗಳನ್ನು ತೆರಿಗೆ ರಹಿತ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸ್ಕಾಚ್‌ ಸೇರಿದಂತೆ ವಿದೇಶಿ ಮದ್ಯ, ಎಲೆಕ್ಟ್ರಾನಿಕ್‌ ಉತ್ಪನ್ನ ಮತ್ತು ಇತರೆ ವಸ್ತುಗಳು ಹೆಚ್ಚು ಮಾರಾಟವಾಗುತ್ತವೆ.

ಆದರೆ ಇದೀಗ ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ವಿದೇಶದಿಂದ ನೇರವಾಗಿ ಆಮದು ಮಾಡಿಕೊಳ್ಳುವ ಯಾವುದೇ ವಸ್ತುಗಳನ್ನು ಮಾರಾಟ ಮಾಡದಂತೆ ರಕ್ಷಣಾ ಇಲಾಖೆ ಎಲ್ಲಾ 4000 ಮಿಲಿಟರಿ ಕ್ಯಾಂಟೀನ್‌ಗಳಿಗೆ ಆಂತರಿಕ ಸುತ್ತೋಲೆ ರವಾನಿಸಿದೆ ಎಂದು ವರದಿಗಳು ತಿಳಿಸಿವೆ.

ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ವಾರ್ಷಿಕ ಅಂದಾಜು 15000 ಕೋಟಿ ರು. ನಷ್ಟುವಹಿವಾಟು ನಡೆಯುತ್ತದೆ. ಈ ಪೈಕಿ ವಿದೇಶದಿಂದ ಆಮದಾದ ವಸ್ತುಗಳ ಪಾಲು ಶೇ.6-7ರಷ್ಟಿದೆ. ಅಂದರೆ ಅಂದಾಜು 1000 ಕೋಟಿ ರು. ಮೌಲ್ಯದ ಉಪಕರಣಗಳ ಆಮದಿಗೆ ನಿಷೇಧ ಬೀಳಲಿದೆ. ಇದರಲ್ಲಿ ವಿದೇಶಿ ಮದ್ಯದ ಪಾಲು ಅಂದಾಜು 125 ಕೋಟಿ ರು. ಇದೆ. ಹೀಗಾಗಿ ಸರ್ಕಾರದ ಈ ನಿರ್ಧಾರದ ಪ್ರಮುಖ ವಿದೇಶಿ ಸ್ಕಾಚ್‌ ಬ್ರ್ಯಾಂಡ್‌ಗಳಾದ ಪೆರ್ನೋಡ್‌ ಮತ್ತು ಡಿಯಾಜಿಯೋ ಮೊದಲಾದ ಕಂಪನಿಗಳಿಗೆ ಸಾಕಷ್ಟುಹೊಡೆತ ನೀಡಲಿದೆ.

ಇನ್ನು ಚೀನಾ ಮೂಲದ ಕಂಪನಿಗಳ ಎಲೆಕ್ಟ್ರಾನಿಕ್‌ ಉಪಕರಣಗಳು, ಡೈಪರ್‌, ಹ್ಯಾಂಡ್‌ಬ್ಯಾಗ್‌, ಲ್ಯಾಪ್‌ಟಾಪ್‌ ಪ್ರಮುಖವಾಗಿ ಮಾರಾಟವಾಗುವ ಸರಕಾಗಿದ್ದು, ಇವುಗಳ ನಿಷೇಧದಿಂದಾಗಿ ಚೀನಾದ ಮೇಲೆ ಭಾರತ ಮತ್ತೊಂದು ಆರ್ಥಿಕ ಸಮರವನ್ನೂ ಸಾರಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ