ದೀಪಾವಳಿ ಕೊನೆಯ ದಿನ ಬಲಿಪಾಡ್ಯದಂದು ನಿತೀಶ್‌ ಪ್ರಮಾಣ?

Published : Nov 13, 2020, 08:11 AM ISTUpdated : Nov 13, 2020, 08:17 AM IST
ದೀಪಾವಳಿ ಕೊನೆಯ ದಿನ ಬಲಿಪಾಡ್ಯದಂದು ನಿತೀಶ್‌ ಪ್ರಮಾಣ?

ಸಾರಾಂಶ

ಬಲಿಪಾಡ್ಯದಂದು ನಿತೀಶ್‌ ಪ್ರಮಾಣ?|  ನರಕಚತುರ್ದಶಿ ಹಾಗೂ ಅಮಾವಾಸ್ಯೆ ಮರುದಿನ ಬಲಿಪಾಡ್ಯಮಿ| ಕೇವಲ 40 ಸ್ಥಾನದಲ್ಲಿ ಗೆದ್ದವರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ

ಪಟನಾ(ನ.13): ನಿತೀಶ್‌ ಕುಮಾರ್‌ ಅವರು ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿ (ನವೆಂಬರ್‌ 16) ದಿನದಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ನರಕಚತುರ್ದಶಿ ಹಾಗೂ ಅಮಾವಾಸ್ಯೆ ಮರುದಿನ ಬಲಿಪಾಡ್ಯಮಿ ಇದ್ದು ಆ ದಿನದಂದು ಅವರು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಈ ನಡುವೆ ‘ಕೇವಲ 40 ಸ್ಥಾನದಲ್ಲಿ ಗೆದ್ದವರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ’ ಎಂದು ನಿತೀಶ್‌ ಕುಮಾರ್‌ಗೆ ಆರ್‌ಜೆಡಿ ಟಾಂಗ್‌ ನೀಡಿದೆ. ‘ಜನರು ನಿಮ್ಮನ್ನು (ನಿತೀಶ್‌) ಯಾವ ಸ್ಥಿತಿಯಲ್ಲಿ ಇರಿಸಿದ್ದಾರೆ ನೋಡಿಕೊಳ್ಳಿ. 40 ಸ್ಥಾನ ಗೆದ್ದು ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದೀರಿ. ಜನಾದೇಶ ನಿಮ್ಮ ವಿರುದ್ಧ ಇದೆ ಎಂದು ತಿಳಿಯಿರಿ. ಆದರೂ ನೀವು ಆ ಹುದ್ದೆ ಗಿಟ್ಟಿಸಿದರೆ ಎಷ್ಟುದಿನ ಇರುತ್ತೀರಿ ಎಂಬುದನ್ನು ದೇವರೇ ಬಲ್ಲ’ ಎಂದು ಆರ್‌ಜೆಡಿ ಮುಖಂಡ ಮನೋಜ್‌ ಝಾ ವ್ಯಂಗ್ಯವಾಡಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana