ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಗಂಡನ ರಕ್ಷಿಸಲು ಹೆಂಡತಿ ಆಟ!

Published : Mar 17, 2020, 05:08 PM IST
ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಗಂಡನ ರಕ್ಷಿಸಲು ಹೆಂಡತಿ ಆಟ!

ಸಾರಾಂಶ

ನಿರ್ಭಯಾ ಪ್ರಕರಣದ ಅಪರಾಧಿಗಳ ಕಾನೂನು ಹೋರಾಟಕ್ಕೆ ಬ್ರೇಕ್| ಗಂಡನನ್ನು ಕಾಪಾಡಲು ದೋಷಿ ಹೆಂಡತಿಯ ಹೊಸ ಆಟ| ನ್ಯಾಯಾಲಯದ ಮೆಟ್ಟಿಲೇರಿದ ಅಕ್ಷಯ್ ಠಾಕೂರ್ ಹೆಂಡತಿ

ನವದೆಹಲಿ[ಮಾ.17]: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳೆದುರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದ್ದ ಎಲ್ಲಾ ಕಾನೂನಾತ್ಮಕ ಹಾದಿಗಳು ಮುಕ್ತಾಯಗೊಂಡಿವೆ. ಹೀಗಿರುವಾಗ ಅಪರಾಧಿಗಳಿಗೆ ಮಾರ್ಚ್ 20 ರಂದು ಗಲ್ಲಿಗೇರಿಸುವುದು ಖಚಿತವಾಗಿತ್ತು. ಆದರೀಗ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್ ಠಾಕೂರ್ ಹೆಂಡತಿ, ತನ್ನ ಪತಿರಾಯನನ್ನು ಉಳಿಸಿಕೊಳ್ಳಲು ಹೊಸ ಬಾಣ ಎಸೆದಿದ್ದಾರೆ. ಏನದು?

ಹೌದು ಅಪರಾಧಿಗಳ ಬಳಿ ಇದ್ದೆಲ್ಲಾ ಹಾದಿಗಳು ಮುಚ್ಚಿದ್ದ ಬೆನ್ನಲ್ಲೇ ನಿರ್ಭಯಾ ಅಪರಾಧಿ ಅಕ್ಷಯ್ ಠಾಕೂರ್ ಹೆಂಡತಿ ಪುನೀತಾ ಹೊಸ ಆಟ ಆರಂಭಿಸಿದ್ದಾರೆ. ಪುನೀತಾ ಔರಂಗಬಾದ್ ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ 'ನನ್ನ ಪತಿಯನ್ನು ಅತ್ಯಾಚಾರ ಪ್ರಕರಣದ ಅಪರಾಧಿ ಎಂದು ತೀರ್ಪು ಬಂದಿದ್ದು, ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದರೆ ಅವರು ನಿರ್ದೋಷಿ ಹೀಗಿರುವಾಗ. ನನಗೆ ವಿಧವೆಯಾಗಿ ಉಳಿಯಲು ಇಷ್ಟವಿಲ್ಲ ಎಂದಿದ್ದಾರೆ.

ಅಕ್ಷಯ್ ಪತ್ನಿಯ ಕಾನೂನು ದಾಳ?

ಅಕ್ಷಯ್ ಪತ್ನಿ ಪರ ವಕೀಲ ಮುಕೇಶ್ ಕುಮಾರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸುತ್ತಾ 'ಹಿಂದೂ ವಿವಾಹ ಅಧಿನಿಯಮ 13[2][11] ಅನ್ವಯ ಕೆಲ ವಿಶೇಷ ಪ್ರಕರಣಗಳಲ್ಲಿ ವಿಚ್ಛೇದನ ಪಡೆಯುವ ಅಧಿಕಾರವಿದೆ. ಇದರಲ್ಲಿ ಅತ್ಯಾಚಾರ ಕೂಡಾ ಶಾಮೀಲಾಗಿದೆ. ಒಂದು ವೇಳೆ ಮಹಿಳೆಯ ಪತಿ ಅತ್ಯಾಚಾರ ಪ್ರಕರಣದ ದೋಷಿಯಾಗಿದ್ದರೆ, ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಕಾನೂನು ತಜ್ಞರು ಇದನ್ನೊಂದು ತಂತ್ರದಂತೆ ಪರಿಗಣಿಸುತ್ತಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಅಕ್ಷಯ್ ಕುಮಾರ್ ಗೆ ನೋಟೀಸ್ ನೀಡಬಹುದು' ಎಂದಿದ್ದಾರೆ.

ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೇರಿಸಲು ಡೆತ್ ವಾರಂಟ್ ಜಾರಿಯಾಗಿದ್ದು, ಇದರ ಅನ್ವಯ ಮಾರ್ಚ್ 20ರಂದು ಗಲ್ಲು ಶಿಕ್ಷೆಯಾಗಲಿದೆ. ಹೀಗಿರುವಾಗ ಅಕ್ಷಯ್ ಠಾಕೂರ್ ಹೆಂಡತಿ ಸಲ್ಲಿಸಿರುವ ಈ ಅರ್ಜಿಯಿಂದ ಗಲ್ಲು ಶಿಕ್ಷೆ ಮತ್ತೆ ಮುಂದಕ್ಕೋಗುತ್ತಾ ಕಾದು ನೋಡಬೇಕಷ್ಟೇ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!