Love Jihad: ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಕೊಂದು ಹಾಕಿ: ನೂತನ ನಾಯಕನ ಪ್ರಚೋದನಕಾರಿ ಭಾಷಣ!

By Suvarna NewsFirst Published Dec 25, 2021, 7:52 PM IST
Highlights

* ಲವ್ ಜಿಹಾದ್ ಪ್ರಕರಣದಿಂದ ಉದ್ವಿಗ್ನ ಪರಿಸ್ಥಿತಿ

* ಬಿಹಾರದ ದರ್ಭಾಂಗದಲ್ಲಿ ಬಿಗುವಿನ ವಾತಾವರಣ

* ಮುಸ್ಲಿಂ ಯುವಕರಿಬ್ಬರು ಅಂದರ್

ಪಾಟ್ನಾ(ಡಿ.25): ಬಿಹಾರದ ದರ್ಭಾಂಗದಲ್ಲಿ ಎರಡು ಲವ್ ಜಿಹಾದ್ ಪ್ರಕರಣದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸಿಂಘವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ಹಿಂದೂ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ ಆರೋಪ ಕೇಳಿ ಬಂದಿದೆ. ಬಳಿಕ ಆರೋಪಿ ಇಬ್ಬರು ಮುಸ್ಲಿಂ ಯುವಕರು ಡಿಸೆಂಬರ್ 15 ರಂದು ಅವರನ್ನು ಕೋಲ್ಕತ್ತಾಗೆ ಕರೆದೊಯ್ದಿದ್ದಾರೆ. ಇಲ್ಲಿ ಅವರ ಧರ್ಮ ಪರಿವರ್ತನೆ ಮಾಡಿ, ಅವರೊಂದಿಗೆ ನಿಕಾಹ್ ಆಗಿದ್ದಾರೆ. ಸಂತ್ರಸ್ತೆಯ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಪೊಲೀಸರು ಕ್ರಮ ಕೈಗೊಂಡು ಕೋಲ್ಕತ್ತಾದಿಂದ ಓಡಿಹೋದ ಹುಡುಗಿಯರು ಮತ್ತು ಯುವಕರಿಬ್ಬರನ್ನೂ ಬಂಧಿಸಿ ಕೋಲ್ಕತ್ತಾದಿಂದ ದರ್ಭಾಂಗಕ್ಕೆ ಕರೆತಂದಿದ್ದಾರೆ.

ಸೋದರಸಂಬಂಧಿಗಳಾದ ಈ ಇಬ್ಬರು ಹುಡುಗಿಯರನ್ನು ಪೊಲೀಸರು ದರ್ಭಾಂಗಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, ಅಲ್ಲಿ 164 ರ ಹೇಳಿಕೆಯ ನಂತರ ನ್ಯಾಯಾಲಯವು ಇಬ್ಬರನ್ನೂ ವಯಸ್ಕರೆಂದು ಪರಿಗಣಿಸಿ ಅವರ ಇಚ್ಛೆಯಂತೆ ಯುವಕರ ಕುಟುಂಬದೊಂದಿಗೆ ವಾಸಿಸಲು ಬಿಡುವಂತೆ ಪೊಲೀಸರಿಗೆ ಒಪ್ಪಿಸಿದೆ. ಅದೇ ಸಮಯದಲ್ಲಿ, ಇಬ್ಬರು ಯುವಕರು ಅಪಹರಣದ ಆರೋಪಿಗಳನ್ನು ಜೈಲಿನಲ್ಲಿ ಇರಿಸಲಾಗುತ್ತದೆ. ಇತ್ತ ಯುವತಿಯರ ಪೋಷಕರು ನಮಗೆ ನಮ್ಮ ಮಕ್ಕಳು ಬೇಕು, ಅವರು ಬಯಸಿದಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ಬರಲಿ, ನಾವು ಅವರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ. 

ಲವ್ ಜಿಹಾದ್ ಕುರಿತು ನೂತನವಾಗಿ ಆಯ್ಕೆಯಾಗಿರುವ ಮುಖ್ಯಸ್ಥರ ಭಾಷಣದಿಂದ ಬಿಗುವಿನ ವಾತಾವರಣ

ಇದೇ ವೇಳೆ ಲವ್ ಜಿಹಾದ್‌ನ ಈ ಇಡೀ ಪ್ರಸಂಗದಿಂದ ಆ ಭಾಗದ ಹಳ್ಳಿಗಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ. ಅಲ್ಲದೇ ಈ ಕುರಿತು ಸಿಂಘವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಕಲಿಗಾವ್ ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾಗಿರುವ ಮಹೇಶ್ ಕುಮಾರ್ ಪ್ರಚೋದನಕಾರಿ ಭಾಷಣ ಮಾಡಿದ್ದು, ವಾತಾವರಣ ಮತ್ತಷ್ಟು ಹದಗೆಡುವ ಆತಂಕ ನಿರ್ಮಾಣವಾಗಿದೆ. ಮಹೇಶ್ ಕುಮಾರ್ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಹೇಶ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಾ ಹೆಣ್ಣು ಮಕ್ಕಳನ್ನು ಹೊಟ್ಟೆಯಲ್ಲೇ ಕೊಲ್ಲಬೇಕು ಎಂದು ಹೇಳುವ ಮೂಲಕ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ತಂದೆ-ತಾಯಿಯನ್ನು ಗುರುತಿಸಲು ಬಾಲಕಿ ಮುಂದಾಗದ ಘಟನೆ ಇಂದು ನಡೆದಿದೆ ಎಂದರು. ಈ ವಿಷಯವನ್ನು ಜೀವಮಾನವಿಡೀ ಮನಸ್ಸಿನಲ್ಲಿಟ್ಟುಕೊಳ್ಳೋಣ. ನಿನಗೆ ಮಗಳು ಹುಟ್ಟಿದರೆ ಆ ಹುಡುಗಿಯನ್ನು ಎಲ್ಲಿಗೆ ಕಳುಹಿಸುತ್ತಿದ್ದೀಯಾ, ಅವಳ ಚಟುವಟಿಕೆಗಳೇನು, ಅವಳನ್ನು ನಿಭಾಯಿಸಬಹುದೇ ಎಂದು ಯೋಚಿಸಿ ನಂತರ ಹೆರಿಗೆ ಮಾಡಿಸಿ. ಇಲ್ಲದಿದ್ದರೆ ಅವಳನ್ನು ಹೊಟ್ಟೆಯಲ್ಲಿ ಕೊಂದು ಹಾಕಿ ಎಂದಿದ್ದಾರೆ. 

ಇನ್ನು ನೂತನ ನಾಯಕನಿಗೆ ಸುದ್ದಿ ವಾಹಿನಿಯೊಂದು ಈ ಬಗ್ಗೆ ಪ್ರಶ್ನೆ ಮಾಡಿದೆ. ಹೀಗಿದ್ದರೂ ಮುಖ್ಯಸ್ಥ ಮಹೇಶ್ ಕುಮಾರ್ ಅವರಿಗೆ ಈ ನಿಟ್ಟಿನಲ್ಲಿ ಪ್ರಶ್ನೆ ಕೇಳಿದಾಗ, ಅವರು ತಮ್ಮ ಮಾತಿನಲ್ಲಿ ಅಚಲವಾದಂತೆ ತೋರುತ್ತಿದೆ.

click me!