
ವಾರಾಣಸಿ[ಜ.14]: ಇಲ್ಲಿನ ಪ್ರಸಿದ್ಧ ಕಾಶಿ ವಿಶ್ವನಾಥ ಮಂದಿರದಲ್ಲಿ ಜ್ಯೋತಿರ್ಲಿಂಗದ ಸ್ಪರ್ಶದರ್ಶನ ಮಾಡಲು ಪುರುಷರಿಗೆ ಧೋತಿ-ಕುರ್ತಾ ಹಾಗೂ ಮಹಿಳೆಯರಿಗೆ ಸೀರೆ ಕಡ್ಡಾಯ ಮಾಡುವ ಚಿಂತನೆ ನಡೆದಿದೆ. ಅಲ್ಲದೆ ಸ್ಪರ್ಶ ದರ್ಶನದ ಅವಧಿಯನ್ನು ಬೆಳಗ್ಗೆ 11ರವರೆಗೆ ವಿಸ್ತರಿಸುವ ಚಿಂತನೆಯನ್ನೂ ಉತ್ತರ ಪ್ರದೇಶ ಸರ್ಕಾರ ನಡೆಸಿದೆ ಎಂದು ತಿಳಿದು ಬಂದಿದೆ.
‘ಭಾನುವಾರ ನಡೆದ ರಾಜ್ಯ ಮುಜರಾಯಿ ಸಚಿವ ನೀಲಕಂಠ ತಿವಾರಿ ಅಧ್ಯಕ್ಷತೆಯಲ್ಲಿ ನಡೆದ ಪಂಡಿತರನ್ನು ಒಳಗೊಂಡ ಕಾಶಿ ವಿದ್ವತ್ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಆದರೆ ಇನ್ನೂ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿಲ್ಲ. ಜನತೆಯ ಅಭಿಪ್ರಾಯ ಆಲಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ರಾಜ್ಯದ ಶ್ರೀಮಂತ ದೇಗುಲದಲ್ಲಿನ್ನು ವಸ್ತ್ರ ಸಂಹಿತೆ..!
ಈ ನಡುವೆ, ‘ಧೋತಿ-ಕುರ್ತಾ, ಸೀರೆ ಧರಿಸಿದವರಿಗೆ ಮಾತ್ರ ಸ್ಪರ್ಶದರ್ಶನ. ಪ್ಯಾಂಟ್, ಶರ್ಟ್, ಚೂಡಿದಾರ್, ಜೀನ್ಸ್ ಧರಿಸಿದವರಿಗೆ ಕೇವಲ ದೂರದಿಂದ ಶಿವಲಿಂಗ ದರ್ಶನಕ್ಕೆ ಮಾತ್ರ ಅವಕಾಶ ನೀಡುವ ಬಗ್ಗೆ ಹಾಗೂ ಪುರೋಹಿತರಿಗೂ ವಸ್ತ್ರಸಂಹಿತೆ ಜಾರಿ ಮಾಡುವ ಬಗ್ಗೆ ಸಭೆ ಚರ್ಚಿಸಿದೆ’ ಎಂದು ವರದಿಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ