
ಅಹಮದಾಬಾದ್(ಜೂ.15): ನವದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಸಂಸತ್ ಕಟ್ಟಡದಲ್ಲಿ 800ರಿಂದ 900 ಸದಸ್ಯರು ಕುಳಿತುಕೊಳ್ಳಬಹುದಾದಷ್ಟುದೊಡ್ಡ ಲೋಕಸಭೆ ಸಭಾಂಗಣ ನಿರ್ಮಿಸಲಾಗುವುದು ಎಂದು ಈ ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಬಿಮಲ್ ಪಟೇಲ್ ಹೇಳಿದ್ದಾರೆ. ಅದರೊಂದಿಗೆ, ಮುಂದಿನ ದಿನಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸಿ ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಏರಿಸುವ ಸುಳಿವು ದೊರೆತಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಅರ್ಧ ಆನ್ಲೈನ್?
ಬಿಮಲ್ ಪಟೇಲ್ ಅವರು ಸೆಂಟ್ರಲ್ ವಿಸ್ತಾ ಯೋಜನೆಯ (ಹೊಸ ಸಂಸತ್ ಭವನ) ಕುರಿತು ಮಹಾರಾಷ್ಟ್ರದ ಆರ್ಕಿಟೆಕ್ಚರ್ ಕಾಲೇಜುಗಳ ಸಂಘ ಏರ್ಪಡಿಸಿದ್ದ ವೆಬಿನಾರ್ನಲ್ಲಿ ಶನಿವಾರ ಹೊಸ ನೀಲನಕ್ಷೆಯ ಕುರಿತು ವಿವರ ನೀಡಿದರು. ಅದರಲ್ಲಿ, ಹೊಸ ಕಟ್ಟಡವು ತ್ರಿಕೋಣಾಕಾರದಲ್ಲಿರಲಿದೆ ಮತ್ತು ಭೂಕಂಪ ನಿರೋಧ ವ್ಯವಸ್ಥೆಗೆ ಅನುಗುಣವಾಗಿ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರವು ಇದರಲ್ಲಿನ ಲೋಕಸಭಾ ಸಭಾಂಗಣವು 800-900 ಸದಸ್ಯರು ಕುಳಿತುಕೊಳ್ಳುವಷ್ಟುದೊಡ್ಡದಿರಬೇಕು ಎಂದು ಹೇಳಿದೆ ಎಂದು ಮಾಹಿತಿ ನೀಡಿದರು.
ಈ ಮೊದಲು ತಯಾರಿಸಿದ್ದ ನೀಲನಕ್ಷೆಗೂ, ನಂತರ ಆರು-ಏಳು ಬಾರಿ ಬದಲಾಗಿ ಈಗಿನ ಹಂತಕ್ಕೆ ಬಂದಿರುವ ನೀಲನಕ್ಷೆಗೂ ಸಾಕಷ್ಟುವ್ಯತ್ಯಾಸಗಳಿವೆ. ಇನ್ನುಮುಂದೆಯೂ ಕೆಲ ಬದಲಾವಣೆಗಳು ಆಗಬಹುದು ಎಂದು ತಿಳಿಸಿದರು. 25,000 ಕೋಟಿ ರು. ವೆಚ್ಚದಲ್ಲಿ ಸೆಂಟ್ರಲ್ ವಿಸ್ತಾ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ