ತ್ರಿಕೋನಾಕಾರದಲ್ಲಿ ನಿರ್ಮಾಣವಾಗಲಿದೆ ಹೊಸ ಸಂಸತ್

Kannadaprabha News   | Asianet News
Published : Jan 20, 2020, 08:24 AM IST
ತ್ರಿಕೋನಾಕಾರದಲ್ಲಿ ನಿರ್ಮಾಣವಾಗಲಿದೆ ಹೊಸ ಸಂಸತ್

ಸಾರಾಂಶ

2022 ರೊಳಗೆ ಈಗಿರುವ ಹಳೆಯ ಸಂಸತ್ ಭವನದ ಪಕ್ಕದಲ್ಲೇ ತ್ರಿಕೋನಾಕಾರದಲ್ಲಿ ಹೊಸ ಸಂಸತ್ ಭವನ ತಲೆಯೆತ್ತಲಿದೆ. ಪ್ರತಿ ಸಂಸದರಿಗೂ ಇಬ್ಬರು ಕುಳಿತುಕೊಳ್ಳಲು ಅವಕಾಶ ಇರುವಷ್ಟು ವಿಶಾಲವಾದ ‘ಟು-ಸೀಟರ್’ ಬೆಂಚ್ ಇರಲಿದೆ

ನವದೆಹಲಿ [ಜ.20]:  ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗವಾದ ಸಂಸತ್ ಭವನ ಹಾಗೂ ಸುತ್ತಮುತ್ತಲಿನ ಕಚೇರಿಗಳಿರುವ ‘ಸೆಂಟ್ರಲ್ ವಿಸ್ತಾ’ ಪ್ರದೇಶದ ಮರುವಿನ್ಯಾಸ ಯೋಜನೆಯ ಭಾಗವಾಗಿ ಹೊಸ ತ್ರಿಕೋನ ಆಕಾರದ ಬೃಹತ್ ಸಂಸತ್ ಭವನ ತಲೆಯೆತ್ತಲಿದೆ. ವಿಶೇಷವೆಂದರೆ ಹೊಸ ಸಂಸತ್ ಭವನದಲ್ಲಿನ ಲೋಕಸಭೆಯು 900 ಸಂಸದರು ಕೂಡಬಹುದಾದಷ್ಟು ದೊಡ್ಡದಾಗಿರಲಿದೆ. ಅಲ್ಲದೆ, ಸಂಸತ್ತಿನ ಜಂಟಿ ಅಧಿವೇಶನ ನಡೆದರೆ ರಾಜ್ಯಸಭಾ ಸದಸ್ಯರು ಸೇರಿದಂತೆ  1,350 ಸಂಸದರು ಇಲ್ಲಿ ಕೂರಲು ಅವಕಾಶ ಸಿಗಲಿದೆ.

2022 ರೊಳಗೆ ಈಗಿರುವ ಹಳೆಯ ಸಂಸತ್ ಭವನದ ಪಕ್ಕದಲ್ಲೇ ತ್ರಿಕೋನಾಕಾರದಲ್ಲಿ ಹೊಸ ಸಂಸತ್ ಭವನ ತಲೆಯೆತ್ತಲಿದೆ. ಪ್ರತಿ ಸಂಸದರಿಗೂ ಇಬ್ಬರು ಕುಳಿತುಕೊಳ್ಳಲು ಅವಕಾಶ ಇರುವಷ್ಟು ವಿಶಾಲವಾದ ‘ಟು-ಸೀಟರ್’ ಬೆಂಚ್ ಇರಲಿದೆ. 5 ಅಲ್ಲದೆ, ಸಂಸದರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಡೆಸ್ಕ್‌ಗಳನ್ನು ಅದು ಹೊಂದಿರಲಿದೆ. 

ತಲೆ ಎತ್ತಲಿದೆ ಹೊಸ ಸಂಸತ್‌ ಭವನ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!..

ಅಧಿವೇಶ ನದ ಸಂದರ್ಭದಲ್ಲಿ ಸಾಲಾಗಿ ಕುಳಿತುಕೊಂಡಾಗ ಒಬ್ಬರ ನ್ನೊಬ್ಬರು ಸರಾಗವಾಗಿ ದಾಟಿ ಆಚೆಯಿಂದ ಈಚೆ, ಈಚೆ ಯಿಂದ ಆಚೆ ಓಡಾಡುವಷ್ಟು ವಿಶಾಲ ಜಾಗವು ಬೆಂಚ್ ಗಳ ಮಧ್ಯೆ ಇರಲಿದೆ ಎಂದು ವರದಿಯೊಂದು ತಿಳಿಸಿದೆ. ಈಗಿನ ಲೋಕಸಭೆ ಇಕ್ಕಟ್ಟು ಎಂಬುದು ಸಂಸದರ ಅಳಲು. ಈ ಸಮಸ್ಯೆಗೆ ಹೊಸ ಲೋಕಸಭೆಯಲ್ಲಿ ಪರಿಹಾರ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಹಮದಾ ಬಾದ್ ಮೂಲದ ಎಚ್‌ಸಿಪಿ ಡಿಸೈನ್ ಮರುವಿನ್ಯಾಸ ಮಾಡುವ ಗುತ್ತಿಗೆ ಪಡೆದುಕೊಂಡಿದ್ದು, ಅದರ ಪ್ರಾತ್ಯಕ್ಷಿಕೆಯಲ್ಲಿ ಈ ಮಾಹಿತಿ ಗಳು ಇವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಈಗ ಇರುವ ಸಂಸತ್ ಭವನದ ಸನಿಹವೇ ಹೊಸ ಸಂಸತ್ ಭವನ ತಲೆಯೆತ್ತಲಿದೆ.

ದೊಡ್ಡ ಲೋಕಸಭೆಯ ಉದ್ದೇಶ ಏನು?: ಲೋಕಸಭೆಗೆ ಈಗ 543 ಮಂದಿ ಸದಸ್ಯರಿದ್ದಾರೆ. ಆದರೆ 2026 ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆ ಆಗುವ ಸಾಧ್ಯತೆ ಇದೆ. ಕ್ಷೇತ್ರ ಮರುವಿಂಗಡಣೆ ಆದರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ 848 ಕ್ಕೆ ಏರಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಹೀಗಾಗಿ 900 ಸದಸ್ಯರು ಕೂಡಬಹುದಾದ ಲೋಕಸಭೆಯ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 1000 ಆಗಬೇಕು ಎಂದು ಕರೆ ನೀಡಿದ್ದು ಇಲ್ಲಿ ಗಮನಾರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು