ಶ್ರೀಲಂಕಾದಿಂದ ಕಲಿಯಬೇಕು, ಚೀನಾದಿಂದ ಜಾಗರೂಕರಾಗಿಬೇಕು; ನೇಪಾಳಕ್ಕೆ ರಾವತ್ ಸಲಹೆ!

Published : Dec 18, 2020, 08:09 PM IST
ಶ್ರೀಲಂಕಾದಿಂದ ಕಲಿಯಬೇಕು, ಚೀನಾದಿಂದ ಜಾಗರೂಕರಾಗಿಬೇಕು; ನೇಪಾಳಕ್ಕೆ ರಾವತ್ ಸಲಹೆ!

ಸಾರಾಂಶ

ಭಾರತ ಹಾಗೂ ನೇಪಾಳ ನಡುವಿನ ಬಾಂಧವ್ಯ ಶತಮಾನಕ್ಕಿಂತ ಹಳೆಯದು. ಉಭಯ ದೇಶಗಳ ಸಂಸ್ಕ್ರತಿ, ಇತಿಹಾಸ, ಪರಂಪರೆ ಬೆಸೆದುಕೊಂಡಿದೆ. ಆದರೆ ನೇಪಾಳ, ಚೀನಾ ಸಂಗ ಮಾಡುವುದಕ್ಕೂ ಮೊದಲು ಶ್ರೀಲಂಕಾದಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೂಚಿಸಿದ್ದಾರೆ. ರಾವತ್ ಸಲಹೆಗಳ ವಿವರ ಇಲ್ಲಿದೆ.

ನವದೆಹಲಿ(ಡಿ.18): ನೆರೆ ರಾಷ್ಟ್ರದ ಜೊತೆ ಭಾರತ ಉತ್ತಮ ಸಂಬಂಧ ಇಟ್ಟುಕೊಳ್ಳಲು ಬಯಸುತ್ತದೆ. ಆದರೆ ನೇಪಾಳ ಇದೀಗ ಚೀನಾ ಸಂಗ ಮಾಡೋ ಮೂಲಕ ತಪ್ಪು ಹೆಜ್ಜೆ ಇಡುತ್ತಿದೆ. ಚೀನಾ ಜೊತೆ ಹಲವು ಒಪ್ಪಂದ ಮಾಡಿಕೊಂಡಿರುವ ನೇಪಾಳಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ.

ಗಡಿ ಸಮಸ್ಯೆ ಲಾಭ ಪಡೆಯಲು ಮುಂದಾದರೆ ತಕ್ಕ ಶಾಸ್ತಿ; ಪಾಕ್‌ಗೆ ಬಿಪಿನ್ ರಾವತ್ ಎಚ್ಚರಿಕೆ!

ಶ್ರೀಲಂಕಾದಿಂದ ನೇಪಾಳ ಸಾಕಷ್ಟು ಕಲಿಯಬೇಕಿದೆ. ಜೊತೆಗೆ ಚೀನಾದಿಂದ ಜಾಗರೂಕರಾಗಿರಬೇಕಿದೆ ಎಂದು ಬಿಪಿನ್ ರಾವತ್ ಸಲಹೆ ನೀಡಿದ್ದಾರೆ. ನೇಪಾಳ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲು, ಇತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಕ್ತವಾಗಿದೆ. ಆದರೆ ನೇಪಾಳ ಜೊತೆ ಕೆಲ ಯೋಜನೆಗಳಿಗೆ ಸಹಿ ಹಾಕಿರುವ ಚೀನಾ, ಭಾರತದ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ರಾವತ್ ಹೇಳಿದ್ದಾರೆ.

ಸೇನೆ ಬಳಸಿ ಚೀನಾ ಗಡಿ ಖ್ಯಾತೆ ಬಗೆಹರಿಸಲು ಭಾರತ ಮುಕ್ತವಾಗಿದೆ: ತೀಕ್ಷ್ಣ ಎಚ್ಚರಿಕೆ ನೀಡಿದ CDS ರಾವತ್!..

ನೇಪಾಳ ಗಡಿ ಆಕ್ರಮಿಸಿಕೊಳ್ಳುತ್ತಿರುವ ಚೀನಾ, ರಸ್ತೆ ಅಭಿವೃದ್ಧಿ ಮಾಡುತ್ತಿದೆ. ನೇಪಾಳದಲ್ಲಿ ಕಾರಿಡಾರ್ ಯೋಜನೆ ಮೂಲಕ ಚೀನಾ, ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈ ಸೂಕ್ಷ್ಮತೆಯನ್ನು ನೇಪಾಳ ಅರ್ಥಮಾಡಿಕೊಳ್ಳಬೇಕು ಎಂದು ರಾವತ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇವು ಕೆರೆಯಲ್ಲಿ ಅರಳಿದ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು
ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್