Published : Jul 10, 2025, 07:38 AM ISTUpdated : Jul 10, 2025, 06:56 PM IST

India News Live: ಇಸ್ಕಾನ್ ಬ್ರಹ್ಮಚಾರಿಗಳ ಜೀವನ ಶೈಲಿ, ವೇತನವೆಷ್ಟು ಸಿಗುತ್ತದೆ? ಖರ್ಚು ಯಾರು ಭರಿಸುತ್ತಾರೆ?

ಸಾರಾಂಶ

ಬೆಂಗಳೂರು (ಜುಲೈ 10): ಆಪರೇಷನ್‌ ಸಿಂದೂರ್‌ ವೇಳೆ ಪಾಕಿಸ್ತಾನ, ಭಾರತದ ರಫೇಲ್‌ ಜೆಟ್‌ಅನ್ನು ಉರುಳಿಸಿದ್ದಾಗಿ ಹೇಳಿಕೊಂಡಿತ್ತು. ಕೊನೆಗೆ ಚೀನಾ ಕೂಡ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲು ಬಳಸಿಕೊಂಡಿತ್ತು. ಆದರೆ, ಆಪರೇಷನ್‌ ಸಿಂದೂರ್‌ ಟೈಮ್‌ಅಲ್ಲಿ ಪಾಕಿಸ್ತಾನ ಹಾಗೂ ಚೀನಾಗೆ ಚಳ್ಳೆಹಣ್ಣು ತಿನ್ನಿಸಿದ್ದು ರಫೇಲ್‌ನ ಬಾಲ ಎನ್ನುವುದು ಗೊತ್ತಾಗಿದೆ. ಡಿಕಾಯ್‌ ಸಿಸ್ಟಮ್‌ ಎನ್ನುವ ಎಐ ಆಧಾರಿತ ರಫೇಲ್‌ನ ಬಾಲಕ್ಕೆ ಪಾಕಿಸ್ತಾನ ಕ್ಷಿಪಣಿ ಮೂಲಕ ದಾಳಿ ನಡೆಸಿತ್ತು ಎನ್ನುವುದು ಗೊತ್ತಾಗಿದೆ. ವಿಮಾನ ರಕ್ಷಣೆಗಾಗಿ ಇರುವ ವ್ಯವಸ್ಥೆ ಇದಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

06:56 PM (IST) Jul 10

ಇಸ್ಕಾನ್ ಬ್ರಹ್ಮಚಾರಿಗಳ ಜೀವನ ಶೈಲಿ, ವೇತನವೆಷ್ಟು ಸಿಗುತ್ತದೆ? ಖರ್ಚು ಯಾರು ಭರಿಸುತ್ತಾರೆ?

ಇಸ್ಕಾನ್ ಬ್ರಹ್ಮಚಾರಿಗಳು ಸಂಬಳ ಪಡೆಯುವುದಿಲ್ಲ, ಬದಲಿಗೆ ಸಂಘಟನೆ ಮತ್ತು ಭಕ್ತರ ಸಹಾಯದಿಂದ ಜೀವನ ನಡೆಸುತ್ತಾರೆ. ದೇವಾಲಯವು ಅವರ ವಸತಿ, ಆಹಾರ, ಬಟ್ಟೆ ಮತ್ತು ವೈದ್ಯಕೀಯ ನೆರವಿನಂತಹ ಮೂಲಭೂತ ಅಗತ್ಯಗಳನ್ನು ಪೂರೈಸುತ್ತದೆ.
Read Full Story

06:36 PM (IST) Jul 10

ಸುಂದರ್ ಪಿಚೈ, ಸತ್ಯ ನಾಡೆಲ್ಲಗಿಂತ ಶ್ರೀಮಂತ, ಯಾರಿದು ಭಾರತೀಯ ಮೂಲದ ಜಯ್ ಚೌಧರಿ?

ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಗಿಂತ ಶ್ರೀಮಂತ ಉದ್ಯಮಿ, ಅಮೆರಿಕದಲ್ಲಿರುವ ಟಾಪ್ 10 ಶ್ರೀಮಂತರ ವಲಸಿಗರ ಪೈಕಿ ಚೌಧರಿ ಸ್ಥಾನ ಪಡೆದಿದ್ದಾರೆ.

Read Full Story

06:27 PM (IST) Jul 10

ಅಮಿತ್ ಶಾ ಬೆನ್ನಲ್ಲೇ ಮೋದಿ ರಾಜಕೀಯ ನಿವೃತ್ತಿ? ಸಂಚಲನ ಸೃಷ್ಟಿಸಿದ ಭಾಗವತ್ ಹೇಳಿಕೆ

ಪ್ರತಿಯೊಂದು ಕೆಲಸದಲ್ಲೂ ನಿವೃತ್ತಿ ಇರುತ್ತದೆ, ಆದರೆ ರಾಜಕೀಯದಲ್ಲಿ ಮಾತ್ರ ಇಲ್ಲ. ಆದರೆ, ಬಿಜೆಪಿ 75 ವರ್ಷಗಳ ನಂತರ ನಿವೃತ್ತಿ ಹೊಂದಬೇಕೆಂಬ ನಿಯಮವನ್ನು ಜಾರಿಗೊಳಿಸುತ್ತಿದೆ ಎಂದು ವರದಿಯಾಗಿದೆ. ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

 

Read Full Story

06:17 PM (IST) Jul 10

1 ಲಕ್ಷವೂ ಬೇಡ ಈ 10 ಲಾಭದಾಯಕ ವ್ಯವಹಾರ ಆರಂಭಿಸಲು, ಮಹಿಳೆಯರಿಗಂತೂ ಇನ್ನೂ ಸುಲಭ!

ಕಡಿಮೆ ಹೂಡಿಕೆಯಲ್ಲಿ ಲಾಭದಾಯಕ ವ್ಯವಹಾರ ಆರಂಭಿಸುವ ಕನಸು ಕಾಣುತ್ತಿದ್ದೀರಾ? ₹1 ಲಕ್ಷದೊಳಗೆ ಆರಂಭಿಸಬಹುದಾದ 10 ಲಾಭದಾಯಕ ವ್ಯವಹಾರಗಳಿವೆ. ಬ್ಲಾಗಿಂಗ್ ನಿಂದ ಡಿಜಿಟಲ್ ಮಾರ್ಕೆಟಿಂಗ್ ವರೆಗೆ, ನಿಮ್ಮ ಕೌಶಲ್ಯಕ್ಕೆ ತಕ್ಕ ವ್ಯವಹಾರವನ್ನು ಆಯ್ಕೆ ಮಾಡಿ ಯಶಸ್ಸಿನತ್ತ ಹೆಜ್ಜೆ ಹಾಕಿ.

Read Full Story

04:06 PM (IST) Jul 10

ಯೆಮನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳ ರಕ್ಷಿಸುತ್ತಾ ಕೇಂದ್ರ ಸರ್ಕಾರ? ಸುಪ್ರೀಂಗೆ ಮನವಿ

ಯೆಮನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. 

Read Full Story

03:38 PM (IST) Jul 10

ಮನೆ ಮನೆಗೆ ಆಹಾರ ಹಂಚಿ, 52 ಕೋಟಿಯ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ದೀಪೆಂದರ್‌ ಗೋಯಲ್‌!

ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಗುರುಗ್ರಾಮದಲ್ಲಿ 52.3 ಕೋಟಿ ರೂ.ಗಳಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್ ಡಿಎಲ್‌ಎಫ್ ದಿ ಕ್ಯಾಮೆಲಿಯಾಸ್‌ನಲ್ಲಿದ್ದು, ಐದು ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ.
Read Full Story

03:16 PM (IST) Jul 10

ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಪಿರಿಯಡ್ಸ್ ಪರಿಶೀಲಿಸಿದ ಶಾಲಾ ಆಡಳಿತ ಮಂಡಳಿ

ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಮುಟ್ಟಿನ ತಪಾಸಣೆ ಹೆಸರಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Read Full Story

03:10 PM (IST) Jul 10

24 ಗಂಟೆಯೇ ಆಗ್ಬೇಕಂತಿಲ್ಲ, ಎರಡೇ ಗಂಟೆ ಆಸ್ಪತ್ರೆಯಲ್ಲಿದ್ರೂ ಇನ್ನು ನೀವು ಆರೋಗ್ಯ ವಿಮೆ ಕ್ಲೇಮ್‌ ಮಾಡಬಹುದು!

ಈ ಫ್ಲೆಕ್ಸಿಬಿಲಿಟಿ ನೀಡುವ ಕೆಲವು ಯೋಜನೆಗಳಲ್ಲಿ ICICI ಲೊಂಬಾರ್ಡ್ ಎಲಿವೇಟ್ ಪ್ಲ್ಯಾನ್‌, CARE ಸುಪ್ರೀಂ ಪ್ಲ್ಯಾನ್‌ ಮತ್ತು ನಿವಾ ಬುಪಾ ಹೆಲ್ತ್‌ ರೀಅಶ್ಯೂರ್ ಯೋಜನೆ ಸೇರಿವೆ.

 

Read Full Story

12:50 PM (IST) Jul 10

ಚುನಾವಣೆಗೂ ಮುನ್ನ ಪ.ಬಂಗಾಳ ಬಿಜೆಪಿ ಅಧ್ಯಕ್ಷರ ಅಚ್ಚರಿ ಹೇಳಿಕೆ - 'ಮುಸ್ಲಿಮರು ಆದರೂ ಸಹ...'

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ. 

Read Full Story

12:47 PM (IST) Jul 10

FIR ಬಳಿಕ, ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣಿತಾ ಸುಭಾಶ್‌ ಸೇರಿ 29 ಸೆಲೆಬ್ರಿಟಿಗಳ ಮೇಲೆ ಇಡಿ ಕೇಸ್‌!

ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ 29 ಸೆಲೆಬ್ರಿಟಿಗಳನ್ನು ಜಾರಿ ನಿರ್ದೇಶನಾಲಯ (ED) ಹೆಸರಿಸಿದೆ.

 

Read Full Story

12:05 PM (IST) Jul 10

ಪೊಲೀಸ್ ಠಾಣೆಯಲ್ಲಿ ಪತಿಯ ರೋಮ್ಯಾಂಟಿಕ್ ಹಾಡಿನಿಂದ ಉಳಿಯಿತು ಮದುವೆ - ಪತಿಯ ಹೆಗಲಿಗೊರಗಿದ ಪತ್ನಿ

ಪೊಲೀಸ್ ಠಾಣೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮನವೊಲಿಸಲು ಹಾಡೊಂದನ್ನು ಹಾಡಿ ದಾಂಪತ್ಯ ವಿರಹಕ್ಕೆ ಬ್ರೇಕ್ ಹಾಕಿದ್ದಾನೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಈ ಘಟನೆಯ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ.

Read Full Story

10:00 AM (IST) Jul 10

ಮಹಿಳಾ ಉದ್ಯೋಗಿಯ ರೇಪ್‌, ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ - ಲುಲು ಮಾಲ್‌ ಸೂಪರ್‌ವೈಸರ್‌ ಬಂಧನ

ಲಕ್ನೋದ ಲುಲು ಮಾಲ್‌ನಲ್ಲಿ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಕ್ಯಾಶ್‌ ಸೂಪರ್‌ವೈಸರ್‌ನನ್ನು ಬಂಧಿಸಲಾಗಿದೆ. ಮತಾಂತರಕ್ಕೆ ಒತ್ತಾಯಿಸಿ, ನಿರಾಕರಿಸಿದರೆ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಸಂತ್ರಸ್ತೆ ವರದಿ ಮಾಡಿದ್ದಾರೆ. 

Read Full Story

09:17 AM (IST) Jul 10

Breaking News - ದೆಹಲಿ, ಎನ್‌ಸಿಆರ್‌ ವಲಯದಲ್ಲಿ ಕಂಪಿಸಿದ ಭೂಮಿ, 4.1 ತೀವ್ರತೆ ದಾಖಲು

ನವದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಗುರುವಾರ ಬೆಳಿಗ್ಗೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕರ್ನಾಟಕ ಭವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

Read Full Story

08:01 AM (IST) Jul 10

ಇ-ಕಾಮರ್ಸ್‌, ಡಿಜಿ ಪೇ ಬಳಸಿ ಉಗ್ರರಿಗೆ ಹಣ, ಎಫ್‌ಎಟಿಎಫ್‌ ಎಚ್ಚರಿಕೆ!

ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಉಗ್ರ ಸಂಘಟನೆಗಳು ಇ-ಕಾಮರ್ಸ್ ಮತ್ತು ಆನ್‌ಲೈನ್ ಪೇಮೆಂಟ್ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಪುಲ್ವಾಮಾ ದಾಳಿ ಮತ್ತು ಗೋರಖ್‌ನಾಥ್ ದೇವಸ್ಥಾನ ದಾಳಿಯಲ್ಲಿ ಇದನ್ನು ಬಳಸಲಾಗಿದೆ ಎಂದು ಎಫ್‌ಎಟಿಎಫ್ ವರದಿ ಮಾಡಿದೆ. 

Read Full Story

07:44 AM (IST) Jul 10

Rafael X-Guard: ಪಾಕ್‌, ಚೀನಾಕ್ಕೆ ಚಳ್ಳೇಹಣ್ಣು ತಿನ್ನಿಸಿದ್ದು ರಫೇಲ್‌ನ ಬಾಲ! ಏನಿದು ಎಕ್ಸ್‌ಗಾರ್ಡ್‌?

ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಹೇಳಿಕೆ ಸುಳ್ಳು. ರಫೇಲ್‌ನ ಎಕ್ಸ್‌-ಗಾರ್ಡ್‌ ಡಿಕಾಯ್‌ ಸಿಸ್ಟಂನಿಂದ ಪಾಕಿಸ್ತಾನ ವಂಚಿತವಾಗಿದೆ. ಈ ತಂತ್ರಜ್ಞಾನದಿಂದ ರಫೇಲ್ ಹೇಗೆ ಪಾರಾಗುತ್ತದೆ ಎಂಬುದನ್ನು ತಿಳಿಯಿರಿ.

 

Read Full Story

07:41 AM (IST) Jul 10

Space Farming Milestone: ಅಂತರಿಕ್ಷದಲ್ಲಿ ಧಾರವಾಡದ ಹೆಸರು, ಮೆಂತ್ಯ ಬೆಳೆದ ಶುಭಾಂಶು ಶುಕ್ಲಾ!

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷದಲ್ಲಿ ಧಾರವಾಡದ ವಿಜ್ಞಾನಿಗಳ ಸಂಶೋಧನೆಯ ಭಾಗವಾಗಿ ಹೆಸರು ಮತ್ತು ಮೆಂತ್ಯ ಬೀಜಗಳ ಕೃಷಿಯನ್ನು ನಡೆಸಿದ್ದಾರೆ.

 

Read Full Story

07:40 AM (IST) Jul 10

ನಿನ್ನೆ ಭೂಮಿಯ ಇತಿಹಾಸದಲ್ಲೇ ಅತಿ ಚಿಕ್ಕ ದಿನ ದಾಖಲು!

ಭೂಮಿಯು ಸಾಮಾನ್ಯಕ್ಕಿಂತ ವೇಗವಾಗಿ ತಿರುಗುತ್ತಿರುವುದರಿಂದ ಇತಿಹಾಸದಲ್ಲೇ ಅತಿ ಚಿಕ್ಕ ದಿನ ದಾಖಲಾಗಿದೆ. ಜುಲೈ 9, 22 ಮತ್ತು ಆಗಸ್ಟ್ 5 ರಂದು ಚಂದ್ರನ ಸ್ಥಾನದಿಂದಾಗಿ ಈ ವಿದ್ಯಮಾನ ಸಂಭವಿಸಿದೆ. ಈ ದಿನಗಳಲ್ಲಿ ದಿನದ ಅವಧಿ 1.3 ರಿಂದ 1.51 ಮಿಲಿಸೆಕೆಂಡ್‌ಗಳಷ್ಟು ಕಡಿಮೆಯಾಗಿದೆ.

 

Read Full Story

More Trending News