
ಅಯೋಧ್ಯೆ(ಆ.05) ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ, ಆಗಸ್ಟ್ 5 ರಂದು ಅಯೋಧ್ಯೆಯ ಹನುಮಾನ್ ಗಢಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ರಾಮ ಮಂದಿರದ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಮೂಲಕ ಅವರು ಈ ದೇಗುಲಕ್ಕೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿಯಾಗಿದ್ದಾರೆ. ಅಲ್ಲದೇ ರಾಮ ಜನ್ಮಭೂಮಿಗೂ ಹೆಜ್ಜೆ ಇಟ್ಟ ಮೊದಲ ಪಿಎಂ ಎನಿಸಿಕೊಂಡಿದ್ದಾರೆ.
'ಅಂದೇ ಅಲ್ಲೊಂದು ಮಂದಿರ ಕಟ್ಟಿದ್ದೆವು, ಆ ಸಂಭ್ರಮ ಹೇಗೆ ಮರೆಯಲಿ!'
ಹನುಮಾನ್ ಗಢಿಯ ಪ್ರಧಾನ ಅರ್ಚಕ ಶ್ರೀ ಗದ್ಧೀನ್ಶೀನ್ ಪ್ರೇಮ್ದಾಸ್ಜೀ ಮಹರಾಜ್ ಈ ಕುರಿತು ಮಾತನಾಡುತ್ತಾ ಪಿಎಂ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದು,ಬಹಳ ಹೆಮ್ಮೆಯ ಕ್ಷಣ ಎಂದಿದ್ದಾರೆ. ಹನುಮಾನ್ ಗಢಿಗೆ ಬೇಟಿ ನೀಡಿದ ಪ್ರಧಾನಿ ಮೋದಿಗೆ ಬೆಳ್ಳಿ ಕಿರೀಟ ಹಾಗೂ ಶ್ರೀರಾಮನ ಎಂದು ಬರೆದಿರುವ ಶಾಲನ್ನು ನೀಡಿ ಗೌರವಿಸಿದ್ದಾರೆ.
ಸಂಪ್ರದಾಯದಂತೆ ಹನುಮಾನ್ ಗಢಿಗೆ ಮೊದಲು ಭೇಟಿ
ಹನುಮಾನ್ ಗಢಿ ದೇಗುಲದಲ್ಲಿ ಬಾಲ ಆಂಜನೇಯ ಮಾತೆ ಅಂಜನಿಯ ಮಡಿಲಲ್ಲಿ ಕುಳಿತಿರುವ ಪ್ರತಿಮೆ ಇದೆ ಈ ದೇಗುಲವನ್ನು ಸುಮಾರು 10ನೇ ದಶಕದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ದೇಗುಲದ ಪ್ರಮುಖ ಪ್ರತಿಮೆಯ ದರ್ಶನ ಪಡೆಯಬೇಕಾದರೆ 76 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಇನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಹನುಮಾನ್ ಗಢಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಅನುಸರಿಸಿದ್ದಾರೆ. ಶ್ರೀರಾಮನ ಪೂಜೆಗೂ ಮುನ್ನ ಹನುಮಂತನ ಪೂಜೆ ಮಾಡುವುದು ಹಿಂದಿನಿಂದಲೂ ಬಂದ ಪದ್ಧತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ