ಆತಂಕದ ನಡುವೆಯೂ ಸಿಹಿ ಸುದ್ದಿ : ಜೂ.1ರಿಂದಲೇ ಮುಂಗಾರು ಆರಂಭ

Kannadaprabha News   | Asianet News
Published : May 07, 2021, 10:39 AM IST
ಆತಂಕದ ನಡುವೆಯೂ ಸಿಹಿ ಸುದ್ದಿ : ಜೂ.1ರಿಂದಲೇ ಮುಂಗಾರು ಆರಂಭ

ಸಾರಾಂಶ

ಜೂ.1ರಿಂದಲೇ ಕೇರಳದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ‍್ಯದರ್ಶಿ ಎಂ.ರಾಜೀವನ್‌  ತಿಳಿಸಿದ್ದಾರೆ. ಆದರೆ ನೇ 15 ರಂದು ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. 

ನವದೆಹಲಿ (ಮೇ.07): ಕೊರೋನಾ ಆತಂಕದ ಮಧ್ಯೆಯೂ ರೈತರಿಗೆ ಸಿಹಿ ಸುದ್ದಿ ಇಲ್ಲಿದೆ. 

ಈ ವರ್ಷ ಜೂ.1ರಿಂದಲೇ ಕೇರಳದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ‍್ಯದರ್ಶಿ ಎಂ.ರಾಜೀವನ್‌ ಗುರುವಾರ ತಿಳಿಸಿದ್ದಾರೆ. 

ಜೊತೆಗೆ ಭಾರತೀಯ ಹವಾಮಾನ ಇಲಾಖೆಯು ಮುಂಗಾರಿನ ಬಗ್ಗೆ ಮೇ 15ರಂದು ಮತ್ತು ಮಳೆ ಪ್ರಮಾಣದ ಬಗ್ಗೆ ಮೇ 31ರ ವೇಳೆಗೆ ಅಧಿಕೃತ ವರದಿ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. 

ಸೈಕ್ಲೋನ್ ಸರ್ಕ್ಯುಲೇಷನ್: ಮುಂದಿನ ಕೆಲವು ದಿನ ಮಳೆ ...

ಮುಂಗಾರು ಮಾರುತಗಳು ದೇಶದ ಒಟ್ಟು ಮಳೆಯಲ್ಲಿ ಶೇ.75ರಷ್ಟುಪಾಲು ಹೊಂದಿವೆ. ದೇಶದ ಆರ್ಥಿಕತೆ ಬಹುಪಾಲು ಮುಂಗಾರನ್ನೇ ಅವಲಂಬಿಸಿದೆ.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌!

ಈಗಾಗಲೇ ಕರ್ನಾಟಕದಲ್ಲಿ ಮಳೆ ಆರಂಭವಾಗಿದೆ. ಅಲ್ಲಲ್ಲಿ ಮಳೆಯಾಗುತ್ತಲೇ ಇದ್ದು ಬಿಸಿಲ ಜಳಕ್ಕೆ ತಂಪೆರೆಯುತ್ತಿದ್ದು, ಇದೀಗ ಜೂನ್ ಆರಂಭದಲ್ಲಿಯೇ ಮುಂಗಾರು ಕೇರಳದಲ್ಲಿ ಆರಂಭವಾಗಲಿದ್ದು, ಬಳಿಕ ಕರ್ನಾಟಕ ಪ್ರವೇಶಿಸಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ