
ಮುಂಬೈ(ಮೇ.07): ಕೊರೋನಾ ಬಂದ ನಂತರ ಜನ ಬಹಳಷ್ಟು ಬದಲಾಗಿದ್ದಾರೆ. ತಮ್ಮ ಆಪ್ತರ ಸಾವು, ನೋವು, ನರಳಾಟ ನೋಡಿ, ಸ್ವತಃ ಸೋಂಕಿತರಾಗಿ ಅದರಿಂದ ಹೊರಬಂದು ಇತರರಿಗೆ ನೆರವಾಗುವವರೂ ಇದ್ದಾರೆ.
ಕೊರೋನಾ ಬಂದು ಬಹಳಷ್ಟನ್ನು ಬದಲಾಯಿಸಿದೆ. ಮನುಷ್ಯ ಸಂಬಂಧ, ಕಾಳಜಿ, ಪ್ರೀತಿ ಇವುಗಳ ಮಹತ್ವವನ್ನು ತಿಳಿಸಿದೆ. ಆಪತ್ತಿಗೆ ಹಣ, ಅಂತಸ್ತು ಏನಿದ್ದರೂ ಇಷ್ಟೇ ಎಂಬುದನ್ನು ತೋರಿಸಿಕೊಟ್ಟಿದೆ. ಇದು ಕೊರೋನಾದ ಇನ್ನೊಂದು ಮುಖ.
ಕೊರೋನಾ ಯಾರಿಗೂ ಬೇಧ ಮಾಡಿಲ್ಲ, ಧನಿಕ, ಬಡವ, ಅಧಿಕಾರಿ, ಕೆಲಸಗಾರ ಎಲ್ಲರಿಗೂ ಈ ರೋಗ ಒಂದೇ. ಈ ವೈರಸ್ ನೋವು ಎಲ್ಲರಿಗೂ ಒಂದೇ ಆಗಿರೋದ್ರಿಂದಲೇ ಜನ ಇದರಿಂದ ಬಹಳಷ್ಟು ಕಲಿತಿದ್ದಾರೆ.
ಫ್ರಂಟ್ಲೈನ್ ಕಾರ್ಯಕರ್ತರ ನೆರವಿಗೆ ಬಂದ ಇಶಾ..! ಆಹಾರ, ಪಾನೀಯ ಪೋರೈಕೆ
ಕೊರೋನಾ ಸಂದರ್ಭ ಉಚಿತವಾಗಿ ಊಟ ಕಳುಹಿಸಿದ ಎನ್ಜಿಒ ಒಂದಕ್ಕೆ ವ್ಯಕ್ತಿಯೊಬ್ಬರು ಧನ್ಯವಾದ ಹೇಳಿದ ರೀತಿ ಸುಂದರವಾಗಿದೆ. ದಹಿಸಾರ್ ಮೂಲದ ಸಮಸ್ತ ಮಹಾಜನ್ ಆಸುಪಾಸಿನ ಜನರಿಗೆ ಕೊರೋನಾ ಸೋಂಕಿತರಿಗೆ ಉಚಿತವಾಗಿ ಆಹಾರ ಒದಗಿಸಿತ್ತು.
ಹಲವು ಬಾರಿ ಈ ಎನ್ಜಿಒದಿಂದ ನೆರವು ಪಡೆದ ಕೊರೋನಾ ರೋಗಿಯೊಬ್ಬರು ತಮ್ಮ ಲಂಚ್ಬಾಕ್ಸ್ ಮರಳಿಸೋವಾಗ ಥ್ಯಾಂಕ್ಸ್ ಹೇಳಿದ್ದಾರೆ. ತಮಗೆ ನೆರವಾಗಿದ್ದಕ್ಕೆ ಅಭಿನಂದನಾ ರೀತಿಯಲ್ಲಿ ವ್ಯಕ್ತಿ ಎರಡು ಚಿನ್ನದ ಬಳೆಗಳನ್ನು ಬಾಕ್ಸ್ನಲ್ಲಿಟ್ಟು ಕಳುಹಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ