ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!

Published : Apr 15, 2022, 05:42 AM ISTUpdated : Apr 15, 2022, 08:10 AM IST
 ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!

ಸಾರಾಂಶ

* ವಾಡಿಕೆಯ ಶೇ.99ರಷ್ಟುಮಳೆ ಅಂದಾಜು * ಸತತ 4 ವರ್ಷವೂ ಉತ್ತಮ ಮುಂಗಾರು: ಐಎಂಡಿ * ಅನ್ನದಾತರು, ಜನರಿಗೆ ಸಂತಸದ ಸುದ್ದಿ

ನವದೆಹಲಿ(ಏ,15): ರೈತರು ಹಾಗೂ ದೇಶದ ಜನತೆಗೆ ಸಂತಸದ ಸುದ್ದಿ. ಈ ಬಾರಿ ಸತತ 4ನೇ ವರ್ಷವೂ ಉತ್ತಮ ಮುಂಗಾರು ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

‘ಲಾ ನಿನಾ ವಿದ್ಯಮಾನದ ಪರಿಣಾಮ ಪ್ರಸಕ್ತ ವರ್ಷವೂ ನೈಋುತ್ಯ ಮಾನ್ಸೂನ್‌ ಅವಧಿ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ’ ಎಂದು ಅದು ಗುರುವಾರ ಈ ಸಾಲಿನ ಮುಂಗಾರು ಹಂಗಾಮಿನ ಅಂದಾಜು ಪ್ರಕಟಿಸಿದೆ.

2019, 2020 ಮತ್ತು 2021ರಲ್ಲಿ ಮಾನ್ಸೂನ್‌ ಅವಧಿಯ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ಸಾಮಾನ್ಯ ಮಳೆಯಾಗಿತ್ತು. 2022ರಲ್ಲಿ ವಾಡಿಕೆಯ ಶೇ.99ರಷ್ಟುಮಳೆ ಸುರಿಯುವ ಸಾಧ್ಯತೆ ಶೇ.40ರಷ್ಟಿದ್ದು, 87 ಸೆಂ.ಮೀ. ದೀರ್ಘಾವಧಿ ಸರಾಸರಿ ಮಳೆ ಸುರಿಯಲಿದೆ. ಇದು ಉತ್ತಮ ಮಳೆ ಸುರಿಯುವ ಸೂಚಕ ಎಂದು ಅದು ತಿಳಿಸಿದೆ. ವಾಡಿಕೆಯ ಶೇ.96ರಿಂದ ಶೇ.104ರವರೆಗೆ ಸುರಿಯುವ ಮಳೆಗೆ ಉತ್ತಮ ಮಳೆ ಎನ್ನುತ್ತಾರೆ.

ಇನ್ನು ವಾಡಿಕೆಗಿಂತ ಹೆಚ್ಚು (ಶೇ.104ರಿಂದ ಶೇ.110) ಮಳೆ ಸುರಿವ ಸಾಧ್ಯತೆ ಶೇ.15ರಷ್ಟುಹಾಗೂ ಅತಿ ಭಾರೀ ಮಳೆ (ಶೇ.110ಕ್ಕಿಂತ ಹೆಚ್ಚು) ಸುರಿವ ಸಾಧ್ಯತೆ ಶೇ.5ರಷ್ಟಿದೆ. ವಾಡಿಕೆಗಿಂತ ಕಡಿಮೆ ಮಳೆ (ಶೇ.90ರಿಂದ ಶೇ.96) ಸುರಿವ ಸಾಧ್ಯತೆ ಶೇ.26 ಹಾಗೂ ಹಾಗೂ ಮಳೆ ಕೊರತೆ (ಶೇ.90ಕ್ಕಿಂತ ಕಡಿಮೆ) ಆಗಿವ ಸಾಧ್ಯತೆ ಶೇ.14ರಷ್ಟುಮಾತ್ರವಿದೆ ಎಂದು ಅದು ವಿವರಿಸಿದೆ.

ದೇಶದ ಮಧ್ಯ ಭಾಗ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯವ್ಯ ಭಾಗದಲ್ಲಿ ಸಹ ವಾಡಿಕೆಗಿಂತ ಹೆಚ್ಚು ಮಳೆ ಬೀಳುವುದು. ದೇಶದ ಈಶಾನ್ಯ ಹಾಗೂ ವಾಯವ್ಯ ಭಾಗದ ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!