ಮಂಗಳನ ಅಧ್ಯಯನಕ್ಕೆ ಇಸ್ರೋ ಕಳಿಸಿದ್ದ ಮಾಮ್‌ ಸಂಪರ್ಕ ಕಡಿತ

Published : Oct 03, 2022, 07:41 AM ISTUpdated : Oct 03, 2022, 10:30 AM IST
ಮಂಗಳನ ಅಧ್ಯಯನಕ್ಕೆ ಇಸ್ರೋ ಕಳಿಸಿದ್ದ ಮಾಮ್‌ ಸಂಪರ್ಕ ಕಡಿತ

ಸಾರಾಂಶ

ಮಂಗಳ ಗ್ರಹ ಅಧ್ಯಯನಕ್ಕೆಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ 8 ವರ್ಷಗಳ ಹಿಂದೆ ಹಾರಿಬಿಟ್ಟಿದ್ದ ಮಂಗಳ ಆರ್ಬಿಟರ್‌ ಮಿಶನ್‌ (ಮಾಮ್‌) ವ್ಯೋಮನೌಕೆಯು ಭೂಮಿಯಿಂದ ತನ್ನ ಸಂಪರ್ಕ ಕಡಿದುಕೊಂಡಿದೆ.

ಬೆಂಗಳೂರು: ಮಂಗಳ ಗ್ರಹ ಅಧ್ಯಯನಕ್ಕೆಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ 8 ವರ್ಷಗಳ ಹಿಂದೆ ಹಾರಿಬಿಟ್ಟಿದ್ದ ಮಂಗಳ ಆರ್ಬಿಟರ್‌ ಮಿಶನ್‌ (ಮಾಮ್‌) ವ್ಯೋಮನೌಕೆಯು ಭೂಮಿಯಿಂದ ತನ್ನ ಸಂಪರ್ಕ ಕಡಿದುಕೊಂಡಿದೆ.

ಇಸ್ರೋ(ISRO) ಕೇವಲ 6 ತಿಂಗಳ ಅವಧಿಗೆ ಮಾತ್ರ ಮಂಗಳನ (Mars) ಸುತ್ತ ಪ್ರದಕ್ಷಿಣೆ ಹಾಕಿ, ಮಂಗಳನ ಮೇಲ್ಮೈನ ಮಾಹಿತಿ ಕಳಿಸುವಂತೆ ‘ಮಾಮ್‌’ ನೌಕೆಯನ್ನು ರೂಪಿಸಿತ್ತು. ಆದರೆ 6 ತಿಂಗಳು ಅವಧಿ ಮೀರಿದ ನಂತರವೂ ಅದು ಮಾಹಿತಿ ಕಳಿಸುತ್ತಲೇ ಇತ್ತು. ಈಗ ಇದು ಕಾರ‍್ಯನಿರ್ವಹಣೆ ನಿಲ್ಲಿಸಿದೆ. ಇಂಧನ ಅಥವಾ ಬ್ಯಾಟರಿ ಖಾಲಿ ಆಗಿರುವ ಕಾರಣ ಹೀಗಾಗಿದೆಯೇ ಅಥವಾ ಅಲ್ಲಿ ಸಂಭವಿಸಿದ ಗ್ರಹಣದ (Solar eclipse) ಕಾರಣದಿಂದ ಹೀಗಾಗಿಯೇ ಎಂಬುದನ್ನು ಇಸ್ರೋ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಗ್ರಹಣದಿಂದಾಗಿ ಸೇವೆ ಅಂತ್ಯ?

ಈ ಬಗ್ಗೆ ಮಾತನಾಡಿದ ಹಿರಿಯ ವಿಜ್ಞಾನಿಯೊಬ್ಬರು 2022ರ ಏಪ್ರಿಲ್‌ನಲ್ಲಿ ಮಂಗಳದಲ್ಲಿ ಸುದೀರ್ಘ ಅವಧಿಯ ಗ್ರಹಣ ಸಂಭವಿಸಿತ್ತು. ವ್ಯೋಮನೌಕೆಯನ್ನು (spaceship) ಗ್ರಹಣ ನಿರೋಧಕ ಮಾಡಲಾಗಿತ್ತು. ಹೀಗಾಗಿ ಹಿಂದಿನ ಗ್ರಹಣಗಳನ್ನು ಕೂಡ ಮಾಮ್‌ ಮೆಟ್ಟಿನಿಂತಿತ್ತು. ಆದರೆ ಈಗ ಗ್ರಹಣದ ಛಾಯೆಯಿಂದ ಹೊರಬರುತ್ತಲೇ ಅದರ ಇಂಧನ ಖಾಲಿ ಆದಂತಿದೆ. ಇನ್ನೊಂದು ಕಾರಣ ಹೇಳಬಹುದಾದರೆ ಗ್ರಹಣದಿಂದ ಹೊರಬರುವಾಗ ಆ್ಯಂಟೆನಾ ಸಂಪರ್ಕ ವ್ಯತ್ಯಯವಾಗಿ ಅದರ ದಿಕ್ಕು ಬದಲಾಗಿರಬಹುದು’ ಎಂದಿದ್ದಾರೆ.

450 ಕೋಟಿ ಮಿಶನ್‌

2013ರಲ್ಲಿ 450 ಕೋಟಿ ರು. ವೆಚ್ಚದಲ್ಲಿ ಭಾರತ ಮಂಗಳಕ್ಕೆ ವ್ಯೋಮನೌಕೆ ಹಾರಿ ಬಿಟ್ಟು, ಮಂಗಳಯಾನ ಕೈಗೊಂಡ ದೇಶಗಳ ಸಾಲಿಗೆ ಸೇರಿತ್ತು. ತನ್ನ ಮೊದಲ ಯತ್ನದಲ್ಲೇ ಯಶಸ್ವಿಯಾಗಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!