ಗುಜರಾತಲ್ಲಿ ದಿಲ್ಲಿ ಸಿಎಂ ಕೇಜ್ರಿ ಮೇಲೆ ಬಾಟಲ್‌ ದಾಳಿ

By Kannadaprabha NewsFirst Published Oct 3, 2022, 7:22 AM IST
Highlights

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ಪ್ಲಾಸ್ಟಿಕ್‌ ಬಾಟಲ್‌ ಎಸೆದ ಘಟನೆ ಶನಿವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ರಾಜ್‌ಕೋಟ್‌: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ಪ್ಲಾಸ್ಟಿಕ್‌ ಬಾಟಲ್‌ ಎಸೆದ ಘಟನೆ ಶನಿವಾರ ಇಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಆಮ್‌ ಆದ್ಮಿ ಪಕ್ಷದ ನಾಯಕರು ಬಾಟಲಿ ಕೇಜ್ರಿವಾಲ್‌ ತಲೆಯ ಮೇಲ್ಭಾಗದಲ್ಲಿ ಹಾದು ಹೊಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಭದ್ರತಾ ಸಿಬ್ಬಂದಿಗಳು ಮತ್ತು ಆಪ್‌ ನಾಯಕರೊಂದಿಗೆ ಜನದಟ್ಟನೆಯ ಮಧ್ಯೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಹಿಂದೆ ಕೇಜ್ರಿ ಮೇಲೆ ಇಂಕ್‌(Ink), ಚಪ್ಪಲಿ ಎಸೆದ, ಕಪಾಳಮೋಕ್ಷ ಮಾಡಿದ ಘಟನೆಗಳು ನಡೆದಿದ್ದವು.

Attack on Arvind Kejriwal in Rajkot, Gujarat.
Bottle hurled at Kejriwal in a public rally. No complaint registered by AAP yet.

Amit shares more details with pic.twitter.com/1u9MaizMxk

— TIMES NOW (@TimesNow)

 

 

click me!