
ನವದೆಹಲಿ[ಮಾ.04]: ‘ಇಂದು ಭಾರತ್ ಮಾತಾ ಕೀ ಜೈ ಎನ್ನುವುದೂ ಒಂದು ಅಪರಾಧವಾಗಿಬಿಟ್ಟಿದೆ. ಈ ರೀತಿ ಉದ್ಘೋಷ ಹಾಕಿದರೆ ಸಂದೇಹದ ದೃಷ್ಟಿಯಿಂದ ನೋಡಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಟಾಂಗ್ ನೀಡಿದ್ದಾರೆ.
ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಸಿಂಗ್, ‘ಜನರನ್ನು ಪ್ರಚೋದಿಸಲು ಇಂದು ಭಾರತ್ ಮಾತಾ ಕೀ ಜೈ ಉದ್ಘೋಷವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಪರೋಕ್ಷವಾಗಿ ಬಿಜೆಪಿಗೆ ತಿವಿದಿದ್ದರು. ಇದಕ್ಕೆ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ತಿರುಗೇಟು ನೀಡಿದ ಮೋದಿ, ‘ಈ ಉದ್ಘೋಷದಲ್ಲಿಯೂ ಇಂದು ಮಾಜಿ ಪ್ರಧಾನಿಯೊಬ್ಬರು ಕೆಟ್ಟವಾಸನೆಯನ್ನು ಗ್ರಹಿಸುತ್ತಿದ್ದಾರೆ. ಅದನ್ನು ಸಂದೇಹದಿಂದ ನೋಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಸ್ವಾತಂತ್ರ್ಯ ಸಂಗ್ರಾಮದ ವೇಳೆ ವಂದೇಮಾತರಂ ಗೀತೆ ಹಾಡಿದರೆ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಈಗ ಸ್ವಾತಂತ್ರ್ಯ ಸಿಕ್ಕು 70 ವರ್ಷ ಆಗಿದೆ. ಈಗ ‘ಭಾರತ್ ಮಾತಾ ಕೀ ಜೈ’ ಅನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಪ್ರಧಾನಿ ಆದಂಥವರು ಇಂಥ ಮಾತು ಹೇಳುತ್ತಿರುವುದು ದುರದೃಷ್ಟಕರ’ ಎಂದರು.
‘ಇಂದು ಶಕ್ತಿಗಳು ದೇಶ ಅಸ್ಥಿರಗೊಳಿಸಲು ಸಂಚು ಹೂಡಿವೆ. ಇಂಥದ್ದನ್ನು ನಿಷ್ಫಲಗೊಳಿಸಲು ಬಿಜೆಪಿಗರು ಯತ್ನಿಸಬೇಕು. ಕೆಲವು ಪಕ್ಷಗಳಿಗೆ ರಾಜಕೀಯ ಹಿತವು ದೇಶದ ಹಿತಕ್ಕಿಂತ ಮುಖ್ಯವಾಗಿಬಿಟ್ಟಿದೆ’ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ