ಮಾ ತುಜೇ ಸಲಾಂ! ಕಂದನನನ್ನು ಎತ್ತಿಕೊಂಡೇ ಕರ್ತವ್ಯ ನಿಭಾಯಿಸಿದ ಲೇಡಿ ಪೊಲೀಸ್‌!

Published : Mar 03, 2020, 05:36 PM ISTUpdated : Mar 03, 2020, 05:40 PM IST
ಮಾ ತುಜೇ ಸಲಾಂ! ಕಂದನನನ್ನು ಎತ್ತಿಕೊಂಡೇ ಕರ್ತವ್ಯ  ನಿಭಾಯಿಸಿದ ಲೇಡಿ ಪೊಲೀಸ್‌!

ಸಾರಾಂಶ

ಕರ್ತವ್ಯ ನಿಷ್ಠೆ ಅಂದ್ರೆ ಇದೇ ನೋಡಿ! ಪುಟ್ಟ ಕಂದಮ್ಮನನ್ನು ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಕರ್ತವ್ಯದ ವೇಳೆ ಮಗುವನ್ನು ಕರೆದುಕೊಂಡು ಬಂದು ಕರ್ತವ್ಯ ನಿಭಾಯಿಸಿದ್ದಾರೆ ಈ ಪೊಲೀಸ್! 

ಲಕ್ನೋ (ಮಾ. 03): ಒಂದೆಡೆ ಕರ್ತವ್ಯ, ಇನ್ನೊಂದೆಡೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ. ಉತ್ತರ ಪ್ರದೇಶ ಮಹಿಳಾ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಒಬ್ಬರು ಈ ಎರಡೂ ಕರ್ತವ್ಯವನ್ನು ಒಟ್ಟೊಟ್ಟಿಗೆ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಕರ್ತವ್ಯ ನಿಷ್ಠೆ: ಅಪ್ಪ ಮೃತಪಟ್ಟರೂ ಬಜೆಟ್ ತಯಾರಿಸಿದ ಅಧಿಕಾರಿಗೆ ಸಲಾಂ

ಗೌತಮ ಬುದ್ಧ ನಗರಕ್ಕೆ 2 ದಿನಗಳ ಭೇಟಿಗೆಂದು ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾರ್ಯಕ್ರಮದ ಭದ್ರತೆಗೆ ಪ್ರೀತಿ ರಾಣಿ (20) ಎನ್ನುವವರನ್ನು ನಿಯೋಜಿಸಲಾಗಿತ್ತು. ಆದರೆ ಅಂದೇ ಅವರ ಪತಿಗೆ ಪರೀಕ್ಷೆ ಇದ್ದ ಕಾರಣ ಮಗನನ್ನು ಮನೆಯಲ್ಲಿ ಬಿಡಲಾಗದೇ ಕಂಕುಳಕ್ಕೆ ಎತ್ತಿಕೊಂಡು ಬಂದು ಕರ್ತವ್ಯ ನಿರ್ವಹಿಸಿದ್ದಾರೆ. ದಾದ್ರಿ ಪೊಲೀಸ್‌ ಠಾಣೆಯ ಸಿಬ್ಬಂದಿಯಾಗಿರುವ ಪ್ರೀತಿ ಅವರ ವೃತ್ತಿಪರತೆ ಶ್ಲಾಘನೆಗೆ ಪಾತ್ರವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!