ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ

Kannadaprabha News   | Kannada Prabha
Published : Dec 07, 2025, 05:27 AM IST
 PM Modi

ಸಾರಾಂಶ

‘ವಸಾಹತುಶಾಹಿ (ಗುಲಾಮಿ) ಮನಃಸ್ಥಿತಿಯಿಂದ ಹೊರಬರಲು ಭಾರತೀಯರು 2035ರ ಗಡುವು ವಿಧಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ವಿಕಸಿತ ಮಾಡುವತ್ತ ಗಮನಹರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನವದೆಹಲಿ : ‘ವಸಾಹತುಶಾಹಿ (ಗುಲಾಮಿ) ಮನಃಸ್ಥಿತಿಯಿಂದ ಹೊರಬರಲು ಭಾರತೀಯರು 2035ರ ಗಡುವು ವಿಧಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ವಿಕಸಿತ ಮಾಡುವತ್ತ ಗಮನಹರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ, ‘ದೇಶ 2-3% ಬೆಳವಣಿಗೆಗಾಗಿ ಹೆಣಗಾಡುತ್ತಿದ್ದಾಗ ಹಿಂದು ಬೆಳವಣಿಗೆಯ ದರ ಎಂಬ ಪದವನ್ನು ಬಳಸಲಾಗುತ್ತಿತ್ತು. ಈ ಮೂಲಕ ಹಿಂದೂ ಜೀವನ ಪದ್ಧತಿಯನ್ನೇ ಅಣಕಿಸಲಾಗುತ್ತಿತ್ತು. ಅಂಥ ಪರಿಸ್ಥಿತಿ ಈಗ ಇಲ್ಲ’ ಎಂದು ಚಾಟಿ ಬೀಸಿದ್ದಾರೆ.

ಹಿಂದು ಬೆಳವಣಿಗೆಯ ದರ ಎಂಬ ಪದ ಬಳಸಲಾಯಿತು

ಹಿಂದುಸ್ತಾನ್‌ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಶನಿವಾರ ಮಾತನಾಡಿದ ಅವರು, ‘ಭಾರತವು 2-3% ಬೆಳವಣಿಗೆಗಾಗಿ ಹೆಣಗಾಡುತ್ತಿದ್ದಾಗ ಹಿಂದು ಬೆಳವಣಿಗೆಯ ದರ ಎಂಬ ಪದ ಬಳಸಲಾಯಿತು. ಇಡೀ ಸಮಾಜಕ್ಕೇ ಅನುತ್ಪಾದಕ, ಬಡತನ ಎಂಬ ಟ್ಯಾಗ್ ನೀಡಲಾಯಿತು. ಭಾರತದ ನಿಧಾನಗತಿ ಪ್ರಗತಿಗೆ ಕಾರಣ ’ಹಿಂದು ಸಂಸ್ಕೃತಿ’ ಎಂದು ದೂಷಿಸುವ ಯತ್ನಗಳು ನಡೆದವು. ಆದರೆ ಇಂದು ಭಾರತ ಶೇ.8ರ ದರದಲ್ಲಿ ಪ್ರಗತಿ ಕಾಣುತ್ತಿದೆ. ವಿಶ್ವವು ಸಂಕಷ್ಟದಲ್ಲಿದ್ದಾಗ ಭಾರತದಲ್ಲಿ ಸ್ಥಿರತೆ ಇದೆ’ ಎಂದರು.

ಕೋಮುವಾದ ಕಾಣಲಿಲ್ಲವೇ?’

‘ಹಿಂದು ಬೆಳವಣಿಗೆ ದರ ಎಂಬ ಟೀಕೆಗಳು ಬಂದಾಗ ಕೋಮುವಾದ ಕಾಣಲಿಲ್ಲವೇ?’ ಎಂದು ಪ್ರಗತಿಪರರಿಗೆ ಚಾಟಿ ಬೀಸಿದರು.

ಗುಲಾಮಗಿರಿಯಿಂದ ಹೊರಬನ್ನಿ:‘200 ವರ್ಷದಿಂದ ಬೇರೂರಿರುವ ವಸಾಹತುಶಾಹಿ ಮನಸ್ಥಿತಿಯನ್ನು 2035ರೊಳಗೆ ದೇಶದ ಪ್ರತಿ ಮೂಲೆಯಿಂದಲೂ ತೊಡೆದು ಹಾಕಬೇಕು. ಮುಂದಿನ 10 ವರ್ಷಗಲ್ಲಿ ನಾಗರಿಕರನ್ನು ನಾವು ದೇಶವನ್ನು ಗುಲಾಮಿ ಮನಃಸ್ಥಿತಿಯಿಂದ ಮುಕ್ತಗೊಳಿಸಬೇಕು’ ಎಂದರು.

1835ರಲ್ಲಿ ಮೊದಲ ಬಾರಿ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದಿತ್ತು. ಮೋದಿ ಅವರ, ‘200 ವರ್ಷದಿಂದ ಬೇರೂರಿರುವ ಗುಲಾಮಗಿರಿ ಮನಃಸ್ಥಿತಿ’ ಎಂಬ ಉಲ್ಲೇಖವು ಮೆಕಾಲೆ ಶಿಕ್ಷಣ ನೀತಿಯ 200ನೇ ವಾರ್ಷಿಕೋತ್ಸವ ಉಲ್ಲೇಖಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ