
ನವದೆಹಲಿ (ಅ.1): ವಿಜಯದಶಮಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ನವದೆಹಲಿಯಲ್ಲಿ ವಿಶೇಷ 100 ರೂಪಾಯಿ ನಾಣ್ಯ ಹಾಗೂ ಅಂಚೆ ಚೀಟಿಯನ್ನು ರಿಲೀಸ್ ಮಾಡಿದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಭಾರತದ ನಾಣ್ಯವೊಂದರಲ್ಲಿ ಭಾರತ ಮಾತೆಯ ಚಿತ್ರ ಮುದ್ರಿತವಾಗಿದೆ ಎಂದು ಹೇಳಿದರು. ನಾಣ್ಯದ ಮುಂಬದಿಯಲ್ಲಿ 100 ರೂಪಾಯಿಯನ್ನು ಗುರುತಿಸುವ ಅಂಕಿ ಇದ್ದರೆ, ಹಿಂಬದಿಯಲ್ಲಿ 'ವರದ ಮುದ್ರೆ'ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಆಕೆಯ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುವ ಚಿತ್ರ ಮುದ್ರಿಸಲಾಗಿದೆ. ಅದರೊಂದಿಗೆ ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ವರ್ಷ ಎಂದು ಬರೆಯಲಾಗಿದೆ.
ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸಲಾಗಿದೆ ಎಂದು ಹೇಳಿದರು.
ವಿಶೇಷವಾಗಿ ವಿನ್ಯಾಸಗೊಳಿಸಲಾದ ನಾಣ್ಯ ಮತ್ತು ಅಂಚೆಚೀಟಿಗಳು ರಾಷ್ಟ್ರಕ್ಕೆ ಆರ್ಎಸ್ಎಸ್ ಕೊಡುಗೆಯನ್ನು ಎತ್ತಿ ತೋರಿಸುತ್ತವೆ ಎಂದು ಪ್ರಧಾನಿ ಹೇಳಿದರು. "... ಈ 100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದೆ, ಮತ್ತು ಇನ್ನೊಂದು ಬದಿಯಲ್ಲಿ, 'ವರದ ಮುದ್ರೆ'ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಅವಳ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುತ್ತಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ನಮ್ಮ ಕರೆನ್ಸಿಯ ಮೇಲೆ ಭಾರತ ಮಾತೆಯ ಚಿತ್ರವನ್ನು ತೋರಿಸಿರುವುದು ಇದೇ ಮೊದಲು..." ಎಂದು ಪ್ರಧಾನಿ ಮೋದಿ ಹೇಳಿದರು.
1963 ರಲ್ಲಿ ಆರ್ಎಸ್ಎಸ್ ಕೂಡ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಹೆಮ್ಮೆಯಿಂದ ಭಾಗವಹಿಸಿತ್ತು ಎಂದು ಪ್ರಧಾನಿ ನೆನಪಿಸಿಕೊಂಡರು. "ಈ ಅಂಚೆ ಚೀಟಿ ಆ ಐತಿಹಾಸಿಕ ಕ್ಷಣದ ಚಿತ್ರಣವನ್ನು ಹೊಂದಿದೆ" ಎಂದು ಅವರು ಹೇಳಿದರು.
"ವಿವಿಧತೆಯಲ್ಲಿ ಏಕತೆ ಯಾವಾಗಲೂ ಭಾರತದ ಆತ್ಮವಾಗಿದೆ, ಈ ತತ್ವ ಮುರಿದರೆ ಭಾರತ ದುರ್ಬಲಗೊಳ್ಳುತ್ತದೆ. ಸವಾಲುಗಳ ಹೊರತಾಗಿಯೂ, ಆರ್ಎಸ್ಎಸ್ ಬಲಿಷ್ಠವಾಗಿ ನಿಂತಿದೆ ಮತ್ತು ರಾಷ್ಟ್ರಕ್ಕೆ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿದೆ" ಎಂದು ಅವರು ಹೇಳಿದರು. ಸ್ವಾತಂತ್ರ್ಯಾನಂತರ ಆರೆಸ್ಸೆಸ್ 'ಒಂದು ಭಾರತ, ಶ್ರೇಷ್ಠ ಭಾರತ'ದಲ್ಲಿ ನಂಬಿಕೆ ಇಟ್ಟಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಅಥವಾ ಸಂಘಟನೆಯನ್ನು ನಿಷೇಧಿಸುವ ಪ್ರಯತ್ನಗಳನ್ನು ಎದುರಿಸುತ್ತಿದ್ದರೂ ಸಂಸ್ಥೆ ಎಂದಿಗೂ ಕಹಿ ಮನೋಭಾವವನ್ನು ಬೆಳೆಸಿಕೊಂಡಿಲ್ಲ ಎಂದು ಅವರು ಹೇಳಿದರು.
"ಆರ್ಎಸ್ಎಸ್ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡುವ ಪ್ರಯತ್ನಗಳು, ಅವರನ್ನು ನಿಷೇಧಿಸುವ ಪ್ರಯತ್ನಗಳು ಮತ್ತು ಇತರ ಸವಾಲುಗಳ ಹೊರತಾಗಿಯೂ ಅದು ಎಂದಿಗೂ ಯಾರ ಮೇಲೂ ದ್ವೇಷ ಬೆಳೆಸಿಕೊಂಡಿಲ್ಲ, ಏಕೆಂದರೆ ನಾವು ಒಳ್ಳೆಯದು ಮತ್ತು ಕೆಟ್ಟದ್ದನ್ನು ಸ್ವೀಕರಿಸುವ ಸಮಾಜದ ಭಾಗವಾಗಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು.
1925 ರಲ್ಲಿ ನಾಗ್ಪುರದಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ಸ್ಥಾಪಿಸಿದ ಆರ್ಎಸ್ಎಸ್ ಅನ್ನು ಸ್ವಯಂಸೇವಕ ಆಧಾರಿತ ಸಂಘಟನೆಯಾಗಿ ಸ್ಥಾಪಿಸಲಾಯಿತು, ಇದು ನಾಗರಿಕರಲ್ಲಿ ಸಾಂಸ್ಕೃತಿಕ ಅರಿವು, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.ಪ್ರಧಾನಿ ಮೋದಿ ಅವರು ಸ್ವತಃ ಆರ್ಎಸ್ಎಸ್ 'ಪ್ರಚಾರಕ'ರಾಗಿದ್ದರು ಮತ್ತು ಹಿಂದುತ್ವ ಸಂಘಟನೆಯಿಂದ ಸೈದ್ಧಾಂತಿಕ ಸ್ಫೂರ್ತಿಯನ್ನು ಪಡೆಯುವ ಬಿಜೆಪಿಗೆ ವರ್ಗಾವಣೆಯಾಗುವ ಮೊದಲು ಸಮರ್ಥ ಸಂಘಟಕರಾಗಿ ಗುರುತಿಸಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ