ಕನ್ನಡದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಮೋದಿ

Published : Oct 29, 2019, 08:48 AM ISTUpdated : Oct 29, 2019, 08:54 AM IST
ಕನ್ನಡದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಮೋದಿ

ಸಾರಾಂಶ

ಮನ್ ಕಿ ಬಾತ್ ನಲ್ಲಿ ಕರ್ನಾಟಕದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಪ್ರಧಾನಿ ಮೋದಿ | 'ಭಾರತ್ ಕಿ ಲಕ್ಷ್ಮೀ' ಬಗ್ಗೆ ಮಾತನಾಡುವಾಗ ಹೊನ್ನಮ್ಮರನ್ನು ಸ್ಮರಿಸಿದ ಪ್ರಧಾನಿ 

ನವದೆಹಲಿ (ಅ. 29): ಗಂಡು- ಹೆಣ್ಣು ಎಂದು ಭೇದ ಸರಿಯಲ್ಲ ಎಂದು 17ನೇ ಶತಮಾನದಲ್ಲೇ ಹೇಳಿದ್ದ ಕರ್ನಾಟಕದ ಕವಯತ್ರಿ ಸಂಚಿ ಹೊನ್ನಮ್ಮ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಆತ್ಮೀಯ ದೇಶವಾಸಿಗಳೇ, 17ನೇ ಶತಮಾನದಲ್ಲಿದ್ದ ಪ್ರಸಿದ್ಧ ಕವಯತ್ರಿ ಸಂಚಿ ಹೊನ್ನಮ್ಮ ಅವರು ಕನ್ನಡದಲ್ಲಿ ಕವನವೊಂದನ್ನು ಬರೆದಿದ್ದಾರೆ. ಅದು ನಾವು ಉಲ್ಲೇಖಿಸುವ ಪ್ರತಿಯೊಬ್ಬ ಭಾರತೀಯ ಲಕ್ಷ್ಮೇಯರ ಆಲೋಚನೆ, ಪದಗಳನ್ನು ಒಳಗೊಂಡಿದೆ. 17ನೇ ಶತಮಾನದಲ್ಲೇ ಈ ಆಲೋಚನೆಗೆ ಬುನಾದಿ ಹಾಕಲಾಗಿತ್ತು ಎಂದು ಅವರು ಭಾನುವಾರದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಈ ದೀಪಾವಳಿ ಚಿನ್ನವಲ್ಲ ಕಬ್ಬಿಣ ಕೊಳ್ಳಿ ಎಂದ ವಿದ್ಯಾ ಬಾಲನ್, ಕಾರಣ ಏನ್ ಗೊತ್ತಾ?

ಹೊನ್ನಮ್ಮ ಅವರ ಕವನದ ಸಾರಾಂಶವನ್ನು ವಿವರಿಸಿರುವ ಮೋದಿ ಅವರು, ತನ್ನ ಮಗಳು ಪಾರ್ವತಿಯಿಂದಾಗಿ ಹಿಮವಂತ ಹೆಸರು ಗಳಿಸಿದ. ತನ್ನ ಪುತ್ರಿ ಲಕ್ಷ್ಮಿಯಿಂದಾಗಿ ಋುಷಿ ಭೃಗು ಕೀರ್ತಿ ಸಂಪಾದಿಸಿದರು. ಮಗಳು ಸೀತೆಯಿಂದಾಗಿ ಜನಕ ದೊರೆ ಖ್ಯಾತಿ ಗಳಿಸಿದನು. ನಮ್ಮ ಹೆಣ್ಣು ಮಕ್ಕಳೇ ನಮಗೆ ಹೆಮ್ಮೆ ಎಂದು ಮೋದಿ ಬಣ್ಣಿಸಿದ್ದಾರೆ.

ಮೋದಿ ಪ್ರಸ್ತಾಪಿಸಿದ ಸಂಚಿ ಹೊನ್ನಮ್ಮ ಅವರ ಕವನ ಇಂತಿದೆ:

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು

ಪೆಣ್ಣಿಂದ ಭೃಗು ಪೆರ್ಚಿದನು

ಪೆಣ್ಣಿಂದ ಜನಕರಾಯನು ಜಸವಡೆದನು

ಪೆಣ್ಣ ನಿಂದಿಸಲೇಕೆ ಪೆರರು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?