ಇಸ್ರೋ ಚಂದ್ರಯಾನ ಯಶಸ್ಸಿಗಾಗಿ 2 ವರ್ಷ ಮನೆಗೆ ಹೋಗದೇ ವಿಜ್ಞಾನಿಯ ಶ್ರಮ

Published : Aug 26, 2023, 04:27 PM IST
ಇಸ್ರೋ ಚಂದ್ರಯಾನ ಯಶಸ್ಸಿಗಾಗಿ 2 ವರ್ಷ ಮನೆಗೆ ಹೋಗದೇ ವಿಜ್ಞಾನಿಯ ಶ್ರಮ

ಸಾರಾಂಶ

ಚಂದ್ರಯಾನ 3 ಯೋಜನೆಯಲ್ಲಿ ಭಾಗಿಯಾದ ಕಾರಣ 2 ವರ್ಷದಿಂದ ಮನೆಗೇ ತೆರಳದೆ ಮಣಿಪುರದ ಇಸ್ರೋ ವಿಜ್ಞಾನಿ. ಮಿಷನ್ ಗಗನ್ಯಾನ್ ಬಗ್ಗೆ ಸಂತಸ ಹಂಚಿಕೊಂಡ ವಿಜ್ಞಾನಿ

ಮಣಿಪುರ: ಚಂದ್ರಯಾನ-3 ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಸ್ರೋ ವಿಜ್ಞಾನಿ ನಿಂಗ್‌ತೌಜಮ್‌ ರಘು ಸಿಂಗ್‌ (Ningthoujam  Raghu singh) ಎಂಬುವವರು ಸುಮಾರು 2 ವರ್ಷಗಳ ಕಾಲ ತಮ್ಮ ಮನೆಗೆ ಭೇಟಿ ನೀಡಿಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯ ನಿವಾಸಿಯಾಗಿರುವ ರಘು ಸಿಂಗ್‌, ಚಂದ್ರಯಾನ-3 ಮಿಷನ್‌ನಲ್ಲಿ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ ವಿಜ್ಞಾನಿಯಾಗಿದ್ದು ಇವರು ಕೆಲಸದ ಮೇಲಿನ ಶ್ರದ್ಧೆ ಮತ್ತು ಪ್ರೀತಿಯಿಂದ ಹಾಗೂ ತಮ್ಮ ಕೆಲಸ ಯಶಸ್ವಿಯಾಗಬೇಕೆಂಬ ಹಂಬಲದಿಂದ ಮನೆಗೆ ಹೋಗದೇ ಕೆಲಸದಲ್ಲಿ ಮುಳುಗಿದ್ದರು.

ಈ ಬಗ್ಗೆ ಮಾತನಾಡಿರುವ ಸಿಂಗ್‌ ‘ನಾನು ಮನೆಯನ್ನು ಮಿಸ್‌ ಮಾಡಿಕೊಂಡೆ. ನನ್ನ ಪೋಷಕರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡ್ತಿದ್ದೆ. ಆದರೆ ನನ್ನ ಕೆಲಸದ ಕಾರಣಕ್ಕೆ 2 ವರ್ಷ ಅಲ್ಲಿಗೆ ಹೋಗಲಿಲ್ಲ. ಇನ್ನು ಯಾವಾಗ ಮನೆಗೆ ಭೇಟಿ ನೀಡಬೇಕೆಂಬುದರ ಬಗ್ಗೆ ಯೋಚಿಸಿಲ್ಲ’ ಎಂದಿದ್ದಾರೆ.

ಟೀವಿ ಇಲ್ಲದೆ ಚಂದ್ರಯಾನ ಲ್ಯಾಂಡಿಂಗ್‌ ವೀಕ್ಷಣೆ ತಪ್ಪಿಸಿಕೊಂಡ ಇಸ್ರೋ ವಿಜ್ಞಾನಿ!

ಆದರೆ, ನನ್ನ ಪೋಷಕರೊಂದಿಗೆ ಪ್ರತಿದಿನ ಸಂವಹನ ನಡೆಸಲು ನನಗೆ ಸಹಾಯ ಮಾಡಿದ್ದಕ್ಕಾಗಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ತಂತ್ರಜ್ಞಾನಕ್ಕೆ ನಾನು ಧನ್ಯವಾದ ಹೇಳಲೇಬೇಕು ಎಂದಿದ್ದಾರೆ.

ಭಾರತದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾದ ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಮೃದುವಾಗಿ ಇಳಿಯಿತು, ಇತಿಹಾಸವನ್ನು ಸೃಷ್ಟಿಸಿತು. ಈ ಮೂಲಕ ಮಹತ್ವಾಕಾಂಕ್ಷೆಯ ಮುಂದಿನ ಅಧ್ಯಾಯದ ಪ್ರಾರಂಭವಾಗಿದೆ, ಅದು ಸೂರ್ಯನನ್ನು ಅಧ್ಯಯನ ಮಾಡಲು ಮತ್ತು ಗಗನ್ಯಾನ್ ಕಾರ್ಯಕ್ರಮದ ಅಡಿಯಲ್ಲಿ ಭಾರತೀಯರನ್ನು ಬಾಹ್ಯಾಕಾಶದಲ್ಲಿ ಇರಿಸಲು ಸಿದ್ಧವಾಗಿದೆ ಎಂದು ಸಿಂಗ್ ಹೇಳಿದರು.

ನಾವು ಈಗ ಮಿಷನ್ ಗಗನಯಾನ (Mission Gaganyaan) ಮೇಲೆ ಕೇಂದ್ರೀಕರಿಸುತ್ತಿದ್ದೇವೆ, ಇದು ಮೂರು ಸದಸ್ಯರ ಸಿಬ್ಬಂದಿಯನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ಕಕ್ಷೆಗೆ ಉಡಾಯಿಸುವ ಮೂಲಕ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ಭಾರತೀಯ ಸಮುದ್ರದ ನೀರಿನಲ್ಲಿ ಇಳಿಯುವ ಮೂಲಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುತ್ತದೆ ಎಂದಿದ್ದಾರೆ.

ಇಲ್ಲಿಯವರೆಗೆ, ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋದ ಏಕೈಕ ಭಾರತೀಯ. 1984 ರಲ್ಲಿ, ಅವರು ಭಾರತ-ಸೋವಿಯತ್ ಒಕ್ಕೂಟದ ಜಂಟಿ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿದರು ಮತ್ತು ಸಲ್ಯುಟ್ 7 ಬಾಹ್ಯಾಕಾಶ ನಿಲ್ದಾಣದಲ್ಲಿ ಎಂಟು ದಿನಗಳನ್ನು ಕಳೆದರು.

ಇಸ್ರೋದಿಂದ ಹೊಸ ವಿಡಿಯೋ ಬಿಡುಗಡೆ, ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌, ಸ್ಪಷ್ಟವಾಗಿ ಗೋಚರಿಸಿದ ಭಾರತದ ಲಾಂಛನ

ಬಿಷ್ಣುಪುರ್ ಜಿಲ್ಲೆಯ ತಂಗಾದಿಂದ ಎನ್ ಚಾವೋಬಾ ಸಿಂಗ್ ಮತ್ತು ಎನ್ ಯೈಮಾಬಿ ದೇವಿಯವರ ಪುತ್ರ ಸಿಂಗ್, ಲೋಕ್ಟಾಕ್ ಸರೋವರದಿಂದ ಸುತ್ತುವರಿದ ಬೆಟ್ಟಗಳಲ್ಲಿ ನೆಲೆಗೊಂಡಿರುವ ತಂಗಾ ಖ್ವೈರಕ್ಪಾಮ್ ಲೈಕೈ ಎಂಬ ಬಡ ಮೀನುಗಾರ ಕುಟುಂಬದಿಂದ ಬಂದವರು.

ಇವರು ಬೆಂಗಳೂರಿನ IISc ನ ಹಳೆಯ ವಿದ್ಯಾರ್ಥಿ . ಸಿಂಗ್ ಐಐಟಿ-ಗುವಾಹಟಿಯಿಂದ ಭೌತಶಾಸ್ತ್ರದಲ್ಲಿ (ಚಿನ್ನದ ಪದಕ ವಿಜೇತ) ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು DM ಕಾಲೇಜ್ ಆಫ್ ಸೈನ್ಸ್ ಇಂಫಾಲ್‌ನಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

2006 ರಿಂದ ಇಸ್ರೋ ವಿಜ್ಞಾನಿ:
ನಾವು ಹಲವು ವರ್ಷಗಳಿಂದ ಚಂದ್ರಯಾನ ಮಿಷನ್‌ಗಳಿಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಈ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೆ ಮಾತ್ರವಲ್ಲ, ವರ್ಷಗಳಿಂದ ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬ ಭಾರತೀಯರಿಗೂ ಸಲ್ಲುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ. ಚಂದ್ರಯಾನ-2 ವಿಫಲವಾದಾಗ ದೇಶದ ಜನರು ಇಸ್ರೋಗೆ ಬೆಂಬಲ ನೀಡಿದ್ದರಿಂದ ಭರವಸೆ ಕಳೆದುಕೊಳ್ಳಲಿಲ್ಲ. ಚಂದ್ರಯಾನ 1 ಮತ್ತು ಚಂದ್ರಯಾನ 3 ರ ಪ್ರಯಾಣವು ಜಾಗತಿಕ ಬಾಹ್ಯಾಕಾಶ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ