
ಮಕ್ಕಳೇ ಇಲ್ಲ ಎಂದು ಕೊರಗುವವರ ಮಧ್ಯೆ ಹೆಣ್ಣು ಮಗು ಜನಿಸದ್ದಕ್ಕೆ ಬೇಸರಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗರ್ತಲಾದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯನ್ನು ಕಳೆದುಕೊಂಡ ಆಘಾತದಲ್ಲಿ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
23 ವರ್ಷದ ಸುಪ್ರಿಯಾ ದಾಸ್ ನಾಲ್ಕು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಕ್ಕಾಗಿ ಸುಪ್ರಿಯಾಳ ಅತ್ತೆ ಮನೆಯವರು ತೀರಾ ಅಸಮಾಧಾನ ವ್ಯಕ್ತಪಡಿಸಿದ್ದರು. ಗಂಡು ಮಗು ಜನಿಸುತ್ತದೆ ಎಂದು ಬಯಸಿದ್ದ ಸುಪ್ರಿಯಾಳ ಪತಿ ಗೋವಿಂದ ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೊರ ರಾಜ್ಯದಿಂದ ಯುವತಿಯರ ಕರೆತಂದು ವೇಶ್ಯಾವಾಟಿಕೆ ದಂಧೆ: ಮಹಿಳೆ ಬಂಧನ
ಹೆಣ್ಣು ಮಗು ಜನಸಿದ್ದಕ್ಕೆ ಪತ್ನಿಯೊಂದಿಗೆ ಸತತವಾಗಿ ಜಗಳ ಮಾಡಿದ ಗೋವಿಂದ ದಾಸ್ ತನಗೆ ತಾನೇ ಬೆಂಕಿ ಸುಟ್ಟುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಹೆಣ್ಣು ಮಗು ಹೆತ್ತಿದ್ದಕ್ಕೆ ಚುಚ್ಚಿ ಮಾತನಾಡಿದ ಅತ್ತೆಯಿಂದಾಗಿ ಸುಪ್ರಿಯಾ ಅಗರ್ತಲಾದ ವೈದ್ಯಕೀಯ ಕಾಲೇಜಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಗೌತಮನಗರದಲ್ಲಿ ಘಟನೆ ನಡೆದಿದ್ದು, ಅಗರ್ತಲಾದಿಂದ ದಕ್ಷಿಣಕ್ಕೆ 130 ಕಿಲೋ ಮೀಟರ್ ದೂರದಲ್ಲಿ ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಬೆಲೋನಿಯಾ ಉಪವಿಭಾಗದಲ್ಲಿ ಘಟನೆ ನಡೆದಿದೆ. ಮಗು ಹುಟ್ಟಿದಾಗಿನಿಂದಲೂ, ಹೆಣ್ಣು ಮಗು ಕುಟುಂಬಕ್ಕೆ ಅಶುಭ ಎಂದು ಸುಪ್ರಿಯಾಳ ಅತ್ತೆ ದೂಷಿಸುತ್ತಿದ್ದರು ಎಂದು ನೆರೆಹೊರೆಯ ಜನರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ