
ಕೋಲ್ಕತ್ತಾ(ಮೇ.02): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಆರಂಭಿಕ ಟ್ರೆಂಡ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಮೊದಲ ಒಂದು ತಾಸಿನಲ್ಲಿ ಟಿಎಂಸಿಇ 100 ಹಾಗೂ ಬಿಜೆಪಿ 95 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಹೀಗಿರುವಾಗ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ ಪಶ್ಚಿಮ ಬಂಗಾಳ ಫಲಿತಾಂಶವನ್ನು ಗಮನಿಸಿದರೆ ಇಬ್ಬರು ನೌಕರಿ ಅಪಾಯದಲ್ಲಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಇಂದು ಯಾವುದೇ ಆಚರಣೆಯ ವಿಚಾರವಿಲ್ಲ
ಪಶ್ಚಿಮ ಬಂಗಾಳ: ಮೋದಿ VS ದೀದಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಯಾವುದೇ ಆಚರಣೆ ಅಥವಾ ವಿಜಯ ಯಾತ್ರೆ ಇಲ್ಲ ಎಂದಿರುವ ಸಂಬಿತ್ ಪಾತ್ರಾ ಕೊರೋನಾ ಕಾಲದಲ್ಲಿ ಇಂತಹ ಯಾವುದೇ ಆಚರಣೆ ಮಾಡದಿರಲು ಕಾರ್ಯಕರ್ತರ ಬಳಿ ಮನವಿ ಮಾಡಿದ್ದಾರೆ.
ಪ್ರಶಾಂತ್ ಕಿಶೋರ್ ನೌಕರಿ ಹೋಯ್ತು
ಮತ ಎಣಿಕೆ ಬಗ್ಗೆ ಮಾತನಾಡಿರುವ ಸಂಭಿತ್ ಪಾತ್ರಾ, ಇಬ್ಬರು ಕೆಲಸ ಕಳೆದುಕೊಳ್ಳುವುದು ಸ್ಪಷ್ಟವಾಗಿದೆ. ಪ್ರಶಾಂತ್ ಕಿಶೋರ್ರವರ ಕೆಲಸ ಹೋಗುತ್ತದೆ, ಯಾಕೆಂದರೆ ಬಿಜೆಪಿ ಡಬಲ್ ಡಿಜಿಟ್ ಕ್ರಾಸ್ ಮಾಡುವುದಿಲ್ಲ, ಹೀಗಾದರೆ ನಾನು ನಿವೃತ್ತಿ ಘೋಷಿಸುತ್ತೇನೆ ಎಂದಿದ್ದರು. ಈಗ ಬಿಜೆಪಿ ಡಬಲ್ ಡಿಜಿಟ್ ಕ್ರಾಸ್ ಆಗಿದೆ. ಫಲಿತಾಂಶ ಗಮನಿಸಿದರೆ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಯ ಘಟಾನುಘಟಿ ನಾಯಕರಿಗೆ ಸೋಲಾಗುವಂತೆ ಭಾಸವಾಗಿದೆ ಎಂದಿದ್ದಾರೆ..
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ