ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಮತ್ತೊಂದು ಶಾಕ್ ಕೊಟ್ಟ ದೀದೀ!

Published : Jun 19, 2021, 01:41 PM ISTUpdated : Jun 19, 2021, 01:46 PM IST
ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಮತ್ತೊಂದು ಶಾಕ್ ಕೊಟ್ಟ ದೀದೀ!

ಸಾರಾಂಶ

* ಪಶ್ಚಿಮ ಬಂಗಾಳ ವಿಧಾ​ನ​ಸ​ಭೆಯ ವಿಪಕ್ಷ ನಾಯ​ಕ​, ಬಿಜೆಪಿ ಮುಖಂಡ ಸುವೇಂದು ಅಧಿ​ಕಾ​ರಿಗೆ ಶಾಕ್ ಕೊಟ್ಟ ದೀದಿ * ಸುವೇಂದು ಅಧಿ​ಕಾ​ರಿ ಅವರು ವಿಧಾ​ನ​ಸಭೆಗೆ ಆಯ್ಕೆ ಆಗಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ * ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾ​ಲಯ

 

ಕೋಲ್ಕ​ತಾ(ಜೂ.19): ಪಶ್ಚಿಮ ಬಂಗಾಳ ವಿಧಾ​ನ​ಸ​ಭೆಯ ವಿಪಕ್ಷ ನಾಯ​ಕ​, ಬಿಜೆಪಿ ಮುಖಂಡ ಸುವೇಂದು ಅಧಿ​ಕಾ​ರಿ ಅವರು ವಿಧಾ​ನ​ಸಭೆಗೆ ಆಯ್ಕೆ ಆಗಿದ್ದನ್ನು ಪ್ರಶ್ನಿಸಿ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ಹೈಕೋ​ರ್ಟ್‌ ಮೊರೆ ಹೋಗಿ​ದ್ದಾರೆ. ಇದನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾ​ಲಯ, ವಿಚಾ​ರ​ಣೆ​ಯನ್ನು ಜೂ.24ಕ್ಕೆ ಮುಂದೂ​ಡಿದೆ.

ಬಂಗಾಳ ವಿಧಾ​ನ​ಸಭೆ ಚುನಾ​ವಣೆ ವೇಳೆ ಮಮತಾ ಬ್ಯಾನರ್ಜಿ ಅವರು ನಂದಿ​ಗ್ರಾಮ ಕ್ಷೇತ್ರ​ದಲ್ಲಿ ಕೇವಲ 2000ಕ್ಕಿಂತ ಕಡಿಮೆ ಮತ​ಗಳ ಅಂತ​ರ​ದಿಂದ ಅಧಿ​ಕಾ​ರಿ ಎದುರು ಸೋಲುಂಡಿ​ದ್ದರು.

ರಾಯ್‌ ಅನ​ರ್ಹತೆಗೆ ಕೋರಿಕೆ:

ಇತ್ತೀ​ಚೆ​ಗಷ್ಟೇ ಬಿಜೆ​ಪಿ​ಯಿಂದ ಮಾತೃ​ಪಕ್ಷ ಟಿಎಂಸಿ ಕ್ಯಾಂಪ್‌ಗೆ ಜಿಗಿ​ದಿ​ರುವ ಮುಕುಲ್‌ ರಾಯ್‌ ಅವ​ರನ್ನು ಶಾಸಕ ಸ್ಥಾನ​ದಿಂದ ಅನ​ರ್ಹ​ಗೊ​ಳಿ​ಸ​ಬೇಕು ಎಂದು ವಿಪಕ್ಷ ನಾಯಕ ಸುವೇಂದು ಅಧಿ​ಕಾರಿ ಸ್ಪೀಕರ್‌ ಅವ​ರಿಗೆ ದೂರು ಸಲ್ಲಿ​ಸಿ​ದ್ದಾರೆ. ಬಿಜೆ​ಪಿ​ಯಿಂದ ಗೆದ್ದಿ​ರುವ ರಾಯ್‌ ಇತ್ತೀಚೆಗೆ ಟಿಎಂಸಿಗೆ ಸೇರಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್