‘ಬಾಬಾ ಕಾ ಢಾಬಾ’ ವೃದ್ಧನ ಆತ್ಮ​ಹ​ತ್ಯೆ ಯತ್ನ!

Published : Jun 19, 2021, 11:49 AM ISTUpdated : Jun 19, 2021, 01:31 PM IST
‘ಬಾಬಾ ಕಾ ಢಾಬಾ’ ವೃದ್ಧನ ಆತ್ಮ​ಹ​ತ್ಯೆ ಯತ್ನ!

ಸಾರಾಂಶ

* ‘ಬಾಬಾ ಕಾ ಢಾಬಾ’ ವೃದ್ಧನ ಆತ್ಮ​ಹ​ತ್ಯೆ ಯತ್ನ * ಆರ್ಥಿಕ ಸಂಕ​ಷ್ಟ​ದಿಂದಾಗಿ ಆತ್ಮ​ಹ​ತ್ಯೆಗೆ ಯತ್ನ ಸಾಧ್ಯ​ತೆ * ರೆಸ್ಟೋ​ರೆಂಟ್‌ ಉದ್ಯ​ಮ​ದಿಂದ ದಂಪ​ತಿಗೆ ಭಾರೀ ನಷ್ಟ

 

ನವ​ದೆ​ಹ​ಲಿ(ಜೂ.19): ‘ಬಾಬಾ ಕಾ ಢಾಬಾ’ ಖ್ಯಾತಿಯ ಅಂಗ​ಡಿಯ ಮಾಲೀಕ ಕಾಂತಾ ಪ್ರಸಾದ್‌ (81) ಅವರು ಗುರು​ವಾರ ತಡ​ರಾತ್ರಿ ಆತ್ಮ​ಹ​ತ್ಯೆಗೆ ಯತ್ನಿ​ಸಿ​ರುವ ಘಟನೆ ನಡೆ​ದಿದೆ. ಸದ್ಯ ಅವ​ರು ಸಫ್ದರ್‌ ಜಂಗ್‌ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಕಾಂತಾ​ಪ್ರ​ಸಾದ್‌ ಅವರು ಮದ್ಯದ ಜೊತೆಗೆ ಭಾರೀ ಪ್ರಮಾ​ಣದ ನಿದ್ದೆಯ ಮಾತ್ರೆ​ಗ​ಳನ್ನು ಸೇವಿ​ಸಿ​ದ್ದರು. ಇದ​ರಿಂದ ಅಸ್ವ​ಸ್ಥರಾದ ಅವ​ರನ್ನು ಸಫ್ದರ್‌ ಜಂಗ್‌ ಆಸ್ಪ​ತ್ರೆಗೆ ಕರೆ​ತ​ರ​ಲಾಗಿದೆ.

ಕಳೆದ ವರ್ಷ ಸಹಾ​ಯದ ರೂಪ​ದಲ್ಲಿ ಹರಿ​ದು​ಬಂದ ಹಣ​ದೊಂದಿಗೆ ಕಾಂತಾ ಪ್ರಸಾದ್‌ ದಂಪ​ತಿ ದೆಹ​ಲಿ​ಯಲ್ಲಿ ಹೊಸ ರೆಸ್ಟೋ​ರೆಂಟ್‌ ಆರಂಭಿ​ಸಿದ್ದರು. ಮೊದ​ಲಿಗೆ ವ್ಯಾಪಾರ ಚೆನ್ನಾ​ಗಿಯೇ ನಡೆ​ಯು​ತ್ತಿತ್ತು. ಆದರೆ 2ನೇ ಅಲೆಯ ಸೋಂಕು ನಿಯಂತ್ರ​ಣ​ಕ್ಕಾಗಿ ಹೇರ​ಲಾದ ಲಾಕ್‌​ಡೌನ್‌ ರೀತಿಯ ಕ್ರಮ​ಗ​ಳಿಂದ ರೆಸ್ಟೋ​ರೆಂಟ್‌ ವಹಿ​ವಾಟು ಭಾರೀ ಕುಸಿ​ದಿತ್ತು. ಇದ​ರಿಂದಾಗಿ ಮಾಸಿಕ 30 ಸಾವಿರ ರು. ಮಾತ್ರವೇ ವ್ಯಾಪಾ​ರ​ವಾ​ಗು​ತ್ತಿತ್ತು.

ಆದರೆ ಈ ರೆಸ್ಟೋ​ರೆಂಟ್‌ನ ಬಾಡಿ​ಗೆಯೇ 1 ಲಕ್ಷ ರು. ಇತ್ತು. ಹೀಗಾಗಿ ಕಾಂತಾ​ಪ್ರ​ಸಾದ್‌ ದಂಪತಿ ತಮ್ಮ ರೆಸ್ಟೋ​ರೆಂಟ್‌ ಉದ್ಯ​ಮಕ್ಕೆ ತಿಲಾಂಜಲಿ ಹೇಳಿ, ಪುಟ್ಟಪಟ್ಟಿಅಂಗ​ಡಿ​ಯಲ್ಲೇ ಹೋಟೆಲ್‌ ಉದ್ಯಮ ಆರಂಭಿ​ಸಿ​ದ್ದ​ರು. ಆರ್ಥಿಕ ಸಂಕ​ಷ್ಟ​ದಿಂದಾಗಿ ಕಾಂತಾ ಪ್ರಸಾದ್‌ ಆತ್ಮ​ಹ​ತ್ಯೆ ಯತ್ನಿ​ಸಿ​ರ​ಬ​ಬ​ಹುದು ಎನ್ನ​ಲಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು