
ನವದೆಹಲಿ(ಜು.30): ತೃಣಮೂಲ ಕಾಂಗ್ರೆಸ್ನ ಸಂಸದೆ ಮಹುವಾ ಮೊಯಿತ್ರಾ, ‘ನನ್ನನ್ನು ಬಿಹಾರಿ ಗೂಂಡ’ ಎಂದು ಬುಧವಾರ ನಡೆದ ಐಟಿ ಸಭೆಯಲ್ಲಿ ಕೆರದಿದ್ದಾರೆ ಇದಕ್ಕೆ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ ಲೋಕಸಭೆಯಲ್ಲಿ ಹೇಳಿದರು.
‘ಇದು ಸಂಸದನಾಗಿ ನನಗೆ 13ನೇ ವರ್ಷ, ಟಿಎಂಸಿಯ ಹೆಣ್ಣುಮಗಳೊಬ್ಬಳು ನನ್ನನ್ನು ಬಿಹಾರಿ ಗೂಂಡಾ ಎಂದು ಕರೆದಿದ್ದಾಳೆ. ಇಂತಹವುಗಳನ್ನು ಈ ಹಿಂದೆ ನಾನು ನೋಡಿರಲಿಲ್ಲ. ದೇಶದ ಅಭಿವೃದ್ಧಿಗಾಗಿ ಕಷ್ಟಪಟ್ಟು ಕೆಲಸ ಕಾರ್ಮಿಕರಂತೆ ಕೆಲಸ ಮಾಡುವುದು ನಮ್ಮ ತಪ್ಪೇ? ಹಿಂದಿ ಮಾತಾಡುವವರನ್ನು ಕಂಡರೆ ಟಿಎಂಸಿ ಸಂಸದರಿಗೆ ಆಗುವುದಿಲ್ಲ. ಅವರು ನನ್ನನ್ನು ಬಿಹಾರಿ ಗೂಂಡಾ ಎಂದು ಕರೆದಿರುವುದು ಬಿಹಾರದ ಜನರಿಗೆ ಮಾಡಿರುವ ಅವಮಾನ’ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ ‘ಬುಧವಾರ ಕೋರಂ ಇಲ್ಲದ ಕಾರಣ ಐಟಿ ಸಭೆ ನಡೆದಿಲ್ಲ. ಹಾಗಾಗಿ ಅವರನ್ನು ಗೂಂಡಾ ಎಂದು ಕರೆದಿರುವ ಸಾಧ್ಯತೆಯೇ ಇಲ್ಲ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ